ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯವರು ಈ ಸುದ್ದಿ ಓದಿ
ಬೆಂಗಳೂರು, ಮಾ.31: ಕರ್ನಾಟಕದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಜಲಕ್ಷಾಮ ಸಮಸ್ಯೆ ಇರುವುದು ಹೊಸದೇನಲ್ಲ. ಅದರೆ, ಲಭ್ಯವಿರುವ ನೀರಿನ ಪೂರೈಕೆ ಹಾಗೂ ನಿರ್ವಹಣೆಯಲ್ಲಿ ಲೋಪವಾದರೆ ಏನು ಮಾಡುವುದು? ಚಿಂತಿಸಬೇಡಿ, ಇದಕ್ಕಾಗಿ ಸಿದ್ದರಾಮಯ್ಯ ಸರ್ಕಾರ 24X7 ಕಂಟ್ರೋಲ್ ರೂಮ್ ಸ್ಥಾಪನೆ ಮಾಡಿದೆ.
ನಗರಾಭಿವೃದ್ಧಿ ಖಾತೆ ಸಚಿವ ವಿನಯ್ ಕುಮಾರ್ ಸೊರಕೆ ಅವರು ಸೋಮವಾರ ಇಂಥದ್ದೊಂದು ಉಪಯೋಗಿ ವ್ಯವಸ್ಥೆಗೆ ಚಾಲನೆ ನೀಡಿದರು. ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ತಲೆದೋರುವ ಜಲ ಪೂರೈಕೆ, ನಿರ್ವಹಣೆ ಹಾಗೂ ಒಳಚರಂಡಿ ಸಮಸ್ಯೆಗಳಿಗೆ ಸ್ಪಂದಿಸಲು ಈ ಕಂಟ್ರೋಲ್ ರೂಮ್ ಸಿದ್ಧವಿರುತ್ತದೆ. [1 ರು ಗೆ ಎಟಿಎಂ ಆರಂಭಿಸಿದ ಡಿಕೆಶಿ ಬ್ರದರ್ಸ್]
ದಿನವಿಡಿ
ಕಾರ್ಯ
ನಿರ್ವಹಿಸುವ
ಈ
ಕಂಟ್ರೋಲ್
ರೂಮನ್ನು
ಕರ್ನಾಟಕ
ನಗರ
ಜಲ
ಪೂರೈಕೆ
ಹಾಗೂ
ಒಳಚರಂಡಿ
ನಿರ್ವಹಣಾ
ಮಂಡಳಿ
(ಕೆಯುಡಬ್ಲ್ಯೂಎಸ್
ಡಿಬಿ)
ಸಿಬ್ಬಂದಿ
ನಿರ್ವಹಿಸಲಿದ್ದಾರೆ.
ಈ
ಕಂಟ್ರೋಲ್
ರೂಮಿನ
ಮುಖ್ಯ
ಉದ್ದೇಶ
ಆಡಳಿತದಲ್ಲಿ
ಪಾರದರ್ಶಕತೆ
ಹಾಗೂ
ಉತ್ತಮ
ಸೇವೆ
ನೀಡುವುದಾಗಿದೆ.
[ಫ್ಲೋರೋಸಿಸ್:
ಕುಡಿಯುವ
ನೀರಿನ
ಬಗ್ಗೆ
ಎಚ್ಚರ]
ಆರಂಭದಲ್ಲಿ ಸುಮಾರು ರಾಜ್ಯದ 213 ನಗರ, ಪಟ್ಟಣಗಳಿಗೆ ಈ ಕಂಟ್ರೋಲ್ ರೂಮ್ ಸೌಲಭ್ಯ ಸಿಗಲಿದೆ. ಮುಂದಿನ ಹಂತದಲ್ಲಿ ಸುಮಾರು 90,000 ಹಳ್ಳಿಗಳಿಗೆ ಈ ವ್ಯವಸ್ಥೆ ವಿಸ್ತರಣೆಯಾಗಲಿದೆ. [ದೀಪದ ಕೆಳಗೆ ಕತ್ತಲೆ: ಚಿಕ್ಕಮಗಳೂರಲ್ಲಿ ಜಲ ಅಭಾವ]
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಜೊತೆ ಮಾತುಕತೆ ನಡೆಸಲಾಗುತ್ತಿದ್ದು, ಎಲ್ಲಾ ಜಿಲ್ಲಾಧಿಗಳಿಗೆ ಈ ಬಗ್ಗೆ ಮನವಿ ಕಳಿಸಲಾಗಿದೆ. ನೀರಿನ ಸಮಸ್ಯೆ ಕುರಿತಂತೆ ಯಾವುದೇ ಕುಂದು ಕೊರತೆಗಳು ಕಂಡು ಬಂದರೆ ತಕ್ಷಣವೇ ಕರೆ ಮಾಡಬಹುದು ಎಂದು KUWSDB ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್ ಅವರು ಹೇಳಿದ್ದಾರೆ. [ನೀರಿನ ಬೆಲೆ ಏರಿದೆ, ವಿವರಗಳು ಇಲ್ಲಿದೆ]
ನಾಗರಿಕರೇ
ಕುಂದು
ಕೊರತೆ
ಹಂಚಿಕೊಳ್ಳಲು
ಹೀಗೆ
ಮಾಡಿ:
[ಕುಡಿಯುವ
ನೀರಿನ
ಕೊರತೆ
ಇದೆಯೇ?
ಕರೆ
ಮಾಡಿ]
*
water
ಎಂದು
ಟೈಪ್
ಮಾಡಿ
92200
92200ಗೆ
ಎಸ್ಎಂಎಸ್
ಕಳಿಸಿ.
*
(080)
4000
1000
ಕರೆ
ಮಾಡಿ
ದೂರು
ದಾಖಲಿಸಿ.
*
9880655555
ಬಳಸಿ
ವಾಟ್ಸಪ್
ಮೂಲಕ
ಸಮಸ್ಯೆ
ತಿಳಿಸಿ.
*
ಕೇಂದ್ರದ
ಫೇಸ್
ಬುಕ್
ಪುಟಕ್ಕೆ
ಹೋಗಲು
ಇಲ್ಲಿ
ಕ್ಲಿಕ್
ಮಾಡಿ.
*
ಇಮೇಲ್
ಮಾಡಲು
[email protected]
ಐಡಿ
ಬಳಸಿ.
ಒನ್ ಇಂಡಿಯಾ ಸುದ್ದಿ