ಲೋಕಾಯುಕ್ತ ಕೋಟಿ ಡೀಲ್, ಅಶ್ವಿನ್ ರಾವ್ ವಿರುದ್ಧ ಎಫ್ಐಆರ್
ಬೆಂಗಳೂರು, ಜು.01 : ಲೋಕಾಯುಕ್ತದಲ್ಲಿ ನಡೆದ ಹಣದ ಬೇಡಿಕೆ ಪ್ರಕರಣದ ಕುರಿತು ಎಸ್ಪಿ ಸೋನಿಯಾ ನಾರಂಗ್ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಕರ್ನಾಟಕ ಹೈಕೋರ್ಟ್ ಸೋನಿಯಾ ನಾರಂಗ್ ನೇತೃತ್ವದ ತನಿಖೆಗೆ ಬುಧವಾರ ತಡೆಯಾಜ್ಞೆ ನೀಡಿದೆ.
ಹೈಕೋರ್ಟ್
ತನಿಖೆಗೆ
ತಡೆಯಾಜ್ಞೆ
ನೀಡುವುದಕ್ಕೂ
ಮೊದಲು
ಲೋಕಾಯುಕ್ತ
ನ್ಯಾಯಾಲಯಕ್ಕೆ
ಎಫ್ಐಆರ್
ಸಲ್ಲಿಕೆ
ಮಾಡಲಾಗಿದೆ.
ಭ್ರಷ್ಟಾಚಾರ
ನಿಯಂತ್ರಣ
ಕಾಯ್ದೆ
13ರಡಿ
ಐಪಿಸಿ
ಸೆಕ್ಷನ್
384,
419,
120
(ಬಿ)
ಎಫ್ಐಆರ್
ದಾಖಲು
ಮಾಡಲಾಗಿದೆ.
[ಅಶ್ವಿನ್
ರಾವ್
ವಿರುದ್ಧದ
ತನಿಖೆಗೆ
ತಡೆಯಾಜ್ಞೆ]
ಹಣದ ಬೇಡಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿರುವ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಸೇರಿದಂತೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಶ್ವಿನ್ ರಾವ್ ಮತ್ತು ಹಣದ ಬೇಡಿಕೆ ಇಟ್ಟ ಕೃಷ್ಣರಾವ್ ಇಬ್ಬರೂ ಒಂದೇ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. [ಲೋಕಾಯುಕ್ತದಲ್ಲೇ ಭ್ರಷ್ಟಾಚಾರ ಮುಂದೇನು?]
ಮುಂದಿನ ನಡೆ ಏನು? : ಅಶ್ವಿನ್ ರಾವ್ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಆದ್ದರಿಂದ ಸರ್ಕಾರ ರಚನೆ ಮಾಡಿರುವ ಎಸ್ಐಟಿ ಮತ್ತೊಂದು ಎಫ್ಐಆರ್ ದಾಖಲಿಸಲು ಸಾಧ್ಯವಿಲ್ಲ. ಈ ಎಫ್ಐಆರ್ನಲ್ಲಿರುವ ಮಾಹಿತಿ ಆಧರಿಸಿ ತನಿಖೆ ನಡೆಸಬೇಕಾಗುತ್ತದೆ. ಹೊಸ ಎಫ್ಐಆರ್ ದಾಖಲು ಮಾಡಬೇಕಿದ್ದರೆ. ಈ ಎಫ್ಐಆರ್ ರದ್ದುಗೊಳಿಸಬೇಕಾಗುತ್ತದೆ.
ಹಗರಣದ ವಿವರ : 'ನಿಮ್ಮ ಮೇಲೆ ದಾಳಿ ನಡೆಯಲಿದೆ, ನಿಮ್ಮ ವಿರುದ್ಧ ದಾಖಲೆಗಳನ್ನು ಸಂಗ್ರಹಣೆ ಮಾಡಲಾಗಿದೆ. ದಾಳಿ ತಪ್ಪಿಸಬೇಕಾದರೆ 1 ಕೋಟಿ ಕೊಡಿ' ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ಎಂಬುವವರಿಂದ ಕೃಷ್ಣರಾವ್ ಎಂಬುವವರು ಹಣ ಕೇಳಿದ್ದರು ಎಂಬುದು ಆರೋಪವಾಗಿದೆ.
ಕೃಷ್ಣರಾವ್ ಎಂಬುವವರು ಹಣ ಕೇಳಿದ್ದಾರೆ ಎಂದು ಕೃಷ್ಣಮೂರ್ತಿ ಅವರು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರ ಬಳಿ ಮೌಖಿಕವಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಮೇ 11ರಂದು ಸೋನಿಯಾ ನಾರಂಗ್ ರಿಜಿಸ್ಟ್ರಾರ್ಗೆ ಪತ್ರ ಬರೆದಿದ್ದರು. ಇಂದು ದಾಖಲಾಗಿರುವ ಎಫ್ಐಆರ್ ಪ್ರಕಾರ ಮೇ 4ರಂದು ಕೃಷ್ಣರಾವ್ ಅವರು ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿದ್ದರು.
ಎಫ್ಐಆರ್ ವಿವರ : ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಶ್ವಿನ್ ರಾವ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 384 (ಹೆದರಿಸಿ ಹಣ ವಸೂಲಿ), ಐಪಿಸಿ ಸೆಕ್ಷನ್ 419 (ನಕಲಿ ಹೆಸರು ಅಥವಾ ಬೇರೆಯವರ ಹೆಸರಲ್ಲಿ ಹಣ ವಸೂಲಿ), ಸೆಕ್ಷನ್ 120 ಬಿ (ಒಳಸಂಚು ನಡೆಸಿ ಭ್ರಷ್ಟಾಚಾರ ಅಥವಾ ಹಣ ವಸೂಲಿ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ