ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಎಫ್ಐಆರ್
ರಾಯಚೂರು, ಅಕ್ಟೋಬರ್ 07 : ಲಿಂಗಸಗೂರು ಕ್ಷೇತ್ರದ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದ ಅನ್ವಯ ವಜ್ಜಲ್ ವಿರುದ್ಧ ಸದರ್ ಬಜಾರ್ ಠಾಣೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಅರಸಪ್ಪ
ಎಂಬುವವರು
ಶಾಸಕ
ಮಾನಪ್ಪ
ವಜ್ಜಲ್
ವಿರುದ್ಧ
ರಾಯಚೂರು
ಜಿಲ್ಲಾ
ನ್ಯಾಯಾಲಯಕ್ಕೆ
ವಂಚನೆ
ದೂರು
ನೀಡಿದ್ದರು.
ದೂರನ್ನು
ಪರಿಶೀಲಿಸಿದ
ಕೋರ್ಟ್
ಎಫ್ಐಆರ್
ದಾಖಲು
ಮಾಡುವಂತೆ
ಸೂಚಿಸಿತ್ತು.
ಕೋರ್ಟ್
ಸೂಚನೆಯಂತೆ
ಪೊಲೀಸರು
ಎಫ್ಐಆರ್
ದಾಖಲು
ಮಾಡಿದ್ದಾರೆ.
[ವಜ್ಜಲ್
ಮನೆ
ಮೇಲೆ
ಐಟಿ
ದಾಳಿ]
ಏನಿದು ದೂರು? : 9 ವರ್ಷಗಳ ಹಿಂದೆ ಮಾನಪ್ಪ ವಜ್ಜಲ್ ಅರಸಪ್ಪ ಎಂಬುವವರ ಬಳಿ ಟ್ರಾಕ್ಟರ್ ಪಡೆದಿದ್ದರು. ಆದರೆ, ಅದನ್ನು ವಾಪಸ್ ನೀಡಿರಲಿಲ್ಲ. ಈ ಕುರಿತು ಪದೇ-ಪದೇ ಕೇಳಿದರು ಅವರು ಟ್ರಾಕ್ಟರ್ ನೀಡದೆ ವಂಚನೆ ಮಾಡಿದ್ದಾರೆ ಎಂಬುದು ಅರಸಪ್ಪ ಅವರ ಆರೋಪವಾಗಿದೆ.
ಈ ಕುರಿತು ಅರಸಪ್ಪ ಅವರು ರಾಯಚೂರು ಜಿಲ್ಲಾ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರನ್ನು ಪರಿಶೀಲಿಸಿದ ಕೋರ್ಟ್ ಶಾಸಕರ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಸದರ್ ಬಜಾರ್ ಪೊಲೀಸರಿಗೆ ಸೂಚನೆ ನೀಡಿತ್ತು. ಅದರಂತೆ ಪೊಲೀಸರು ವಂಚನೆ ಪ್ರಕರಣದಡಿ ಎಫ್ಐಆರ್ ದಾಖಲಿಸಿದ್ದಾರೆ.
ವಜ್ಜಲ್ ಕುರಿತು : 2008ರ ಚುನಾವಣೆಯಲ್ಲಿ ಮಾನಪ್ಪ ವಜ್ಜಲ್ ಲಿಂಗಸಗೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. 2013ರ ಚುನಾವಣೆ ವೇಳೆಯಲ್ಲಿ ಬಿಜೆಪಿಯಿಂದ ಹೊರಬಂದ ವಜ್ಜಲ್ ಜೆಡಿಎಸ್ ಸೇರಿದ್ದರು. ಲಿಂಗಸಗೂರು ಕ್ಷೇತ್ರದಿಂದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದಾರೆ.