ಚಿಕ್ಕಮಗಳೂರು: ಕಾಲೇಜು ಹುಡುಗರ ಮಧ್ಯೆ ಗಲಾಟೆ, ಮೇಷ್ಟ್ರಿಗೂ ಗೂಸಾ
ಚಿಕ್ಕಮಗಳೂರು, ಮಾರ್ಚ್ 20: ಇಲ್ಲಿನ ಕೊಪ್ಪಾ ಪದವಿ ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕರ ಎದುರೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಕೊಪ್ಪಾದಲ್ಲಿನ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು, ಇಂದು ಅದರ ಸಮಾರೋಪ ಸಮಾರಂಭ ಇತ್ತು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಮೈ-ಕೈ ತಾಗಿಸಿದರೆಂದು ಒಂದು ಗುಂಪು ಜಗಳ ತೆಗೆಯಿತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮೊದಲಿಗೆ ಮಾತಿನ ಹಂತದಲ್ಲಿದ್ದ ಜಗಳ ಗುಂಪು ಸೇರುತ್ತಾ ಸೇರುತ್ತಾ ದೊಡ್ಡದಾಗಿ ಕೈ-ಕೈ ಮಿಸಾಯಿಸುವ ಹಂತಕ್ಕೆ ಹೋಯಿತು. ವಿದ್ಯಾರ್ಥಿಗಳ ಜಗಳ ಬಿಡಿಸಲು ಬಂದ ಉಪನ್ಯಾಸಕರಿಗೂ ವಿದ್ಯಾರ್ಥಿಗಳು ಧರ್ಮದೇಟು ನೀಡಿದರು.
ಸಂತೋಶವಾಗಿ ಮುಗಿಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮ ತೀರಾ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾ-ಮಾರಿ ಆಗಿ ದ್ವೇಷಕ್ಕೆ ತಿರುಗಿತು. ವಿದ್ಯಾರ್ಥಿಗಳು ಪರಸ್ಪರ ಬಡಿದಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗಿದೆ.
ವಿದ್ಯಾರ್ಥಿಗಳ ಮೇಲೆ ಕಾಲೇಜು ಆಡಳಿತ ಮಂಡಳಿ ಶಿಸ್ತುಕ್ರಮ ಜರುಗಿಸಲು ಚಿಂತಿಸಿದ್ದು, ಯಾವ ಶಿಕ್ಷೆ ನೀಡಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ.