ಕೊವಿಡ್19 ವಿರುದ್ಧ ಹೋರಾಡಲು ದೇಣಿಗೆ ನೀಡಿ: ಸಿಎಂ ಬಿಎಸ್ವೈ
ಬೆಂಗಳೂರು, ಮಾರ್ಚ್ 25: ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರದೊಂದಿಗೆ ಕೈಜೋಡಿಸಲು ಇಚ್ಛಿಸುವ ದಾನಿಗಳು ಧನ ಸಹಾಯ ಮಾಡಬಹುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
Recommended Video
ಈ
ಕುರಿತಂತೆ
ಪ್ರಕಟಣೆ
ಹಾಗೂ
ಟ್ವೀಟ್
ಮಾಡಿರುವ
ಮುಖ್ಯಮಂತ್ರಿಗಳ
ಸಚಿವಾಲಯ,
ಸಹೃದಯ
ನಾಗರಿಕರೆ,
ದಿನದ 24 ಗಂಟೆ ದಿನಸಿ, ಸೂಪರ್ ಮಾರ್ಕೆಟ್ ಅಂಗಡಿ ಓಪನ್
ಕೊರೊನಾ ಸೋಂಕಿನ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಸಹೃದಯಿ ನಾಗರಿಕರು 'ಮುಖ್ಯಮಂತ್ರಿಗಳ ಪರಿಹಾರ ನಿಧಿ' ಗೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಭಾಗಿಗಳಾಗಲು ವಿನಂತಿಸುತ್ತೇನೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಸಹೃದಯಿ ನಾಗರಿಕರಲ್ಲಿ ಮನವಿ#ಕೊರೊನಾ ಸೋಂಕಿನ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಸಹೃದಯಿ ನಾಗರಿಕರು 'ಮುಖ್ಯಮಂತ್ರಿಗಳ ಪರಿಹಾರ ನಿಧಿ' ಗೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಭಾಗಿಗಳಾಗಲು ವಿನಂತಿಸುತ್ತೇನೆ.#Covid_19 #Covidpendmic #CovidinKarnataka#KarnatakaFightsCorona #IndiaFightsCOVID19 @BSYBJP pic.twitter.com/2rmZChRSK7
— CM of Karnataka (@CMofKarnataka) March 25, 2020
ರಾಜ್ಯದಲ್ಲಿ, ಬೆಳಗ್ಗೆ 11.00 ಗಂಟೆವರೆಗೆ 10 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 51ಕ್ಕೇರಿದೆ. ಈ ಪೈಕಿ ಒಬ್ಬ ಸೋಂಕಿತ ಮೃತ ಪಟ್ಟಿದ್ದು, ಎಲ್ಲ ಸೋಂಕಿತರ ಚಿಕಿತ್ಸೆ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದವರ ಪತ್ತೆ, ಪ್ರತ್ಯೇಕಿಸುವಿಕೆ ಮುಂದುವರೆದಿದೆ.
ತಾಂತ್ರಿಕ ಕಾರಣದಿಂದ 'ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ಹಣ ಕಳಿಸುವ ವಿಧಾನವನ್ನು ಬದಲಿಸಲಾಗಿದೆ. ಹಣ ಕಳಿಸಲು ಈ ಕೆಳಗಿನ ಹೊಸ ವಿಧಾನವನ್ನು ಬಳಸಲು ವಿನಂತಿ. ಈ ಹಿಂದಿನ ವಿಧಾನದಲ್ಲಿ ತಾವು 'ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ಕಳಿಸಿರುವ ಹಣ ತಲುಪಿದೆ. ಧನ್ಯವಾದಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್, ಡಿಡಿ ಅಥವಾ NEFTಮೂಲಕ ದೇಣಿಗೆ ಸಲ್ಲಿಸಬಹುದು
ಖಾತೆಯ ವಿವರ ಹೀಗಿದೆ: ಖಾತೆ ಹೆಸರು: CHIEF MINISTER RELIEF FUND COVID-19, STATE BANK OF INDIA, VUDHANASOUDHA BRANCH, A/c No. 39234923151, IFSC CODE: SBIN 0040277, MICR 560002419
ಡಿಡಿ ಅಥವಾ ಚೆಕ್ ಕಳುಹಿಸಲು: ನಂ. 235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು-560001 ಇಲ್ಲಿಗೆ ಕಳಿಹುಸಬಹುದು.