ವಿಚ್ಛೇದನ ಪ್ರಕರಣ: ಕರ್ನಾಟಕಕ್ಕೆ 4ನೇ ಸ್ಥಾನ
ಬೆಂಗಳೂರು, ಜುಲೈ, 07: ಮದುವೆಯ ಈ ಬಂಧ, ಏಳೇಳು ಜನುಮದ ಅನುಬಂಧ ಎಂಬ ಮಾತು ಹಿಂದಿನಿಂದಲೂ ಇದೆ. ಮದುವೆ ಸ್ವರ್ಗದಲ್ಲಿಯೆ ನಿಶ್ಚಯವಾಗುತ್ತದೆ ಎಂಬ ಮಾತು ಇದೆ.
ಆದರೆ ಮದುವೆಯನ್ನು ಮರಿದುಕೊಳ್ಳುವುದರಲ್ಲಿ ನಮ್ಮ ಕರ್ನಾಟಕ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ನಂಬಲೇಬೇಕು. ಕರ್ನಾಟಕ ಕೌಟುಂಬಿಕ ನ್ಯಾಯಾಲಯ ನೀಡಿರುವ ಮಾಹಿತಿ ನಿಜಕ್ಕೂ ಕುಟುಂಬ ವ್ಯವಸ್ಥೆ ಎಲ್ಲಿಗೆ ಬಂದು ನಿಲ್ಲುತ್ತಿದೆ ಎಂಬುದನ್ನು ಸಾರಿ ಹೇಳುತ್ತಿದೆ.[ಸಾಮಾಜಿಕ ಭದ್ರತೆ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?]
ವಿಚ್ಛೇದನ ಪ್ರಕರಣಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಮೊದಲ ಮೂರು ಸ್ಥಾನಗಳಲ್ಲಿ ಕೇರಳ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಇದೆ ಎಂದು ವರದಿ ಹೇಳಿದೆ.[ಬೆಂಗಳೂರು, ಮುಂಬೈ, ದೆಹಲಿ ಸ್ಮಾರ್ಟ್ ಸಿಟಿಗಳಲ್ಲ: ಸಮೀಕ್ಷೆ]
2014ರ ಅಂಕಿ ಅಂಶ ಹೇಳುವಂತೆ ಕರ್ನಾಟಕದಲ್ಲಿ ವಿಚ್ಛೇದನ ಪ್ರಕರಣ ಜಾಸ್ತಿಯಾಗಿದೆ. 16, 690 ಜೋಡಿಗಳು ಬೇರೆ ಬೇರೆ ಕಾರಣಗಳಿಗಾಗಿ ವಿಚ್ಛೇದನ ಪಡೆದುಕೊಂಡಿದ್ದರೆ, 2015ರ ಆರಂಭದಲ್ಲಿ 23,285 ಪ್ರಕರಣಗಳು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆಯಾಗಿವೆ. ಇದು ಕುಟುಂಬ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆ ಮತ್ತು ಆಧುನಿಕ ಸಮಾಝದ ಪರಿಣಾಮ ಎರಡನ್ನು ಹೇಳುತ್ತಿದೆ.
ಹೊಂದಾಣಿಕೆ
ಕೊರತೆ:
ವಿಚ್ಛೇದನಕ್ಕೆ
ಗಂಡ-ಹೆಂಡತಿ
ನಡುವಿನ
ಹೊಂದಾಣಿಕೆ
ಕೊರತೆಯೇ
ಪ್ರಮುಖ
ಕಾರಣ
ಎರಡನೇ
ಮದುವೆ
ಸಮಸ್ಯೆಯಿಂದಲೂ
ವಿಚ್ಛೇದನ
ಬಯಸಿದ
ಪ್ರಕರಣವೂ
ಸಾಕಷ್ಟಿವೆ
ಎಂಬುದನ್ನು
ವರದಿ
ತಿಳಿಸಿದೆ.