ರಾಜ್ಯೋತ್ಸವದಂದು ಸರಕಾರಕ್ಕೆ 3 ಬೇಡಿಕೆಯಿಟ್ಟ ಶೋಭಾ ಕರಂದ್ಲಾಜೆ
ಬೆಂಗಳೂರು, ನ 1: 64ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ, ಶೋಭಾ ಕರಂದ್ಲಾಜೆಯವರು ಮೂರು ಬೇಡಿಕೆಯಿನ್ನಿಟ್ಟಿದ್ದಾರೆ.
"ಇವತ್ತು ನಾವು ಕನ್ನಡ ರಾಜ್ಯೋತ್ಸವದ ಸಂಭ್ರಮಲ್ಲಿದ್ದೇವೆ. ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಹಾರಿಸಿ ಸಂಭ್ರಮ ಪಡುತ್ತಿದ್ದೇವೆ. ಈ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕೆ ನನ್ನ ಬೇಡಿಕೆಯಿದೆ" ಎಂದು ಶೋಭಾ ಕರಂದ್ಲಾಜೆ ಹೇಳಿದರು.
ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ; ಕೆಲವೆಡೆ ನಾಡಧ್ವಜ ಹಾರಿಸದ ಬಗ್ಗೆ ಆಕ್ರೋಶ
ಶೋಭಾ, ಸರಕಾರಕ್ಕೆ ಇಟ್ಟ ಮೂರು ಬೇಡಿಕೆ ಹೀಗಿದೆ:
1. ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿರುವ ತಹಸೀಲ್ದಾರ್, ದಫೇದಾರ್ ಇನ್ನಿತರ ಎಲ್ಲ ಪರ್ಷಿಯನ್ ಭಾಷೆಯ ಪದಬಳಕೆಯ ಬದಲಾಗಿ ಕನ್ನಡ ಪದಗಳ ಬಳಕೆಯನ್ನು ಮಾಡಬೇಕು.
2.
ಬ್ರಿಟಿಷ್
ಹೆಸರುಗಳಿರುವ
ಬೆಂಗಳೂರಿನ
ರಸ್ತೆ
ಹಾಗೂ
ವೃತ್ತಗಳಿಗೆ
ಕನ್ನಡದ
ಏಕೀಕರಣಕ್ಕಾಗಿ
ಶ್ರಮಿಸಿದ,
ಕನ್ನಡ
ಭಾಷೆ,
ನಾಡು-ನುಡಿಗೆ
ಹೆಚ್ಚಿನ
ಕೊಡುಗೆಯನ್ನು
ನೀಡಿದ
ಮಹಾನುಭಾವರ
ಹೆಸರನ್ನು
ಇಟ್ಟು
ಗೌರವ
ಸೂಚಿಸಬೇಕು.
3.
ಕರ್ನಾಟಕದಲ್ಲಿ
ವಿದ್ಯಾಭ್ಯಾಸ
ಪಡೆಯುತ್ತಿರುವ
ಪ್ರತಿಯೊಬ್ಬರೂ
ಕೂಡ
ಕನ್ನಡ
ಭಾಷೆಯನ್ನು
ಒಂದು
ವಿಷಯವಾಗಿ
ಕಲಿಯುವಂತಾಗಬೇಕು,
ರಾಜ್ಯದ
ಎಲ್ಲ
ಶಾಲೆಗಳಲ್ಲಿ,
ಸಿ
ಬಿ
ಎಸ್
ಸಿ/ಐ
ಸಿ
ಎಸ್
ಸಿ
ಶಾಲೆಗಳನ್ನು
ಒಳಪಡಿಸಿ
ಕಡ್ಡಾಯವಾಗಿ
ಕನ್ನಡ
ಒಂದು
ಕಲಿಕೆಯ
ವಿಷಯವಾಗಬೇಕು.