ವಿದ್ಯುತ್ ದರ ಏರಿಕೆ ಶಾಕ್ಗೆ ತಾತ್ಕಾಲಿಕ ಬ್ರೇಕ್?
ಬೆಂಗಳೂರು, ಅಕ್ಟೋಬರ್ 04: ಇಂಧನ ದರ ಹೊಂದಾಣಿಕೆ ಹಿನ್ನೆಲೆಯಲ್ಲಿ ವಿದ್ಯುತ್ ದರವನ್ನು ಏರಿಕೆ ಮಾಡಿದ್ದ ಸರ್ಕಾರ ಪರಿಷ್ಕೃತ ಆದೇಶವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲು ಚಿಂತನೆ ನಡೆಸಿದೆ.
ವಿದ್ಯುತ್ ದರವನ್ನು ಏರಿಕೆ ಮಾಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇನ್ನು ಬಿಬಿಎಂಪಿ ಚುನಾವಣೆ, ಆರು ತಿಂಗಳಲ್ಲೇ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ದರ ಏರಿಕೆಯ ಬಿಸಿ ಸರ್ಕಾರದ ಮೇಲೆ ಬೀಳುವ ಭೀತಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಸಂಬಂಧ ಪರಿಷ್ಕೃತ ಆದೇಶವನ್ನು ಹಿಂಪಡೆಯುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಯಲ್ಲಿ ಸಾಧಕ ಭಾದಕವನ್ನು ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲು ಇಂಧನ ಸಚಿವ ಸುನೀಲ್ ಕುಮಾರ್ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ವಿದ್ಯುತ್ ದರವನ್ನು ಏರಿಕೆ ಮಾಡುವುದಕ್ಕೆ ಇದು ಸೂಕ್ತ ಸಮಯವಲ್ಲ ಎಂದು ಇಂಧನ ಇಲಾಖೆ ತೀರ್ಮಾನಕ್ಕೆ ಬಂದಂತಿದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕೃತ ಆದೇಶವನ್ನು ಹಿಂಪಡೆಯಲು ಚರ್ಚಿಸಲಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಹ ದರ ಏರಿಕೆಗೆ ಅಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದ್ದು. ಸಿಎಂ ತೀರ್ಮಾನವೇ ಅಂತಿಮವಾಗಿತ್ತು ಆ ಬಳಿಕ ಇಂಧನ ಸಚಿವರು ಖಚಿತಪಡಿಸಲಿದ್ದಾರೆ.
ದಂಡ ಕೊಟ್ಟು ದಂಡಿಸಿಕೊಳ್ಳುವ ಬದಲು ಸುಮ್ಮನಿರುವುದೇ ಲೇಸು
ಇಂಧನ ದರವನ್ನು ಹೊಂದಾಣಿಕೆ ಮಾಡುವ ದೃಷ್ಟಿಯಿಂದಾಗಿ ದರ ಪರಿಷ್ಕರಣೆಯ ಆದೇಶವನ್ನು ಮಾಡಲಾಗಿತ್ತು. ಅಕ್ಟೋಬರ್ನಲ್ಲೇ ದರ ಪರಿಷ್ಕರಣೆಯ ಆದೇಶ ಪಾಲನೆಯಾಗಬೇಕಿತ್ತು. ಆದರೆ ದರ ಏರಿಕೆಯ ವಿಚಾರವನ್ನೇ ವಿಪಕ್ಷಗಳು ಪ್ರಮುಖ ದಾಳವಾಗಿ ಮಾಡಿಕೊಳ್ಳವ ಭೀತಿಯಿಂದಾಗಿ ದರ ಪರಿಷ್ಕರಣೆ ಆದೇಶ ಹಿಂಪಡೆಯಲಾಗುತ್ತಿದೆ. ಬಿಬಿಎಂಪಿ ಚುನಾವಣೆ ಮತ್ತು ರಾಜ್ಯ ವಿಧಾನ ಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ದರ ಏರಿಕೆಯನ್ನು ಮಾಡಿದರೆ ಇದರ ಪರಿಣಾಮ ಬಿಜೆಪಿಗೆ ಹಿನ್ನೆಡೆಯಾಗುವ ಆತಂಕವಿದೆ. ಒಂದು ವೇಳೆ ದರ ಏರಿಕೆಯನ್ನು ಮಾಡಿದ್ದೆ ಆದರೆ ವಿಪಕ್ಷಗಳಿಗೆ ತಾನೇ ದಂಡವನ್ನು ಕೊಟ್ಟು ದಂಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು ಎನ್ನುವ ಭಯ ಆಡಳಿತ ಪಕ್ಷಕ್ಕೆ ಕಾಡುತ್ತಿದೆ.
ಸೆಪ್ಟೆಂಬರ್ 19ರಂದು ಹೊರಡಿಸಿದ ಆದೇಶ ಹಿಂದಕ್ಕೆ?
ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನಲೆಯಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್ನಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಆದೇಶ ಹೊರಡಿಸಿತ್ತು.
ಕೆಇಆರ್ಸಿ, ಸೆಪ್ಟೆಂಬರ್ 19. 2022 ರಂದು ಹೊರಡಿಸಿದ ಆದೇಶದನ್ವಯ ಇಂಧನ ಹೊಂದಾಣಿಕೆ ಶುಲ್ಕ 43 ಪೈಸೆಯನ್ನು ಮುಂದಿನ 6 ತಿಂಗಳ ಅವಧಿಗೆ ಗ್ರಾಹಕರಿಂದ ಸಂಗ್ರಹಿಸಲು ಬೆಸ್ಕಾಂಗೆ ಅನುಮತಿ ನೀಡಿತ್ತು. ಕೆಇಆರ್ಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು) ನಿಯಮಗಳು, 2013 ರ ಅನ್ವಯ ಇಂಧನ ಹೊಂದಾಣಿಕೆ ಶುಲ್ಕವನ್ನು 43 ಪೈಸೆ ಹೆಚ್ಚಳ ಮಾಡಿ ಬೆಸ್ಕಾಂಗೆ ಅನ್ವಯ ಆಗುವಂತೆ ಪರಿಷ್ಕರಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದರು. ಇದೀಗ ಈ ಆದೇಶ ಹಿಂದಕ್ಕೆ ಪಡೆಯುವ ಸಾಧ್ಯತೆಗಳಿವೆ.
ವಿದ್ಯುತ್ ದರ ಪರಿಷ್ಕರಣೆಗೆ ಸದ್ಯಕ್ಕೆ ಬ್ರೇಕ್?
ಕೇಂದ್ರ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ (CGS) , ಕರ್ನಾಟಕ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ (KPCL)ಮತ್ತು ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (UPCL) ನಿಂದ ಎಲ್ಲಾ ಎಸ್ಕಾಂಗಳು ವಿದ್ಯುತ್ ಖರೀದಿಸುತ್ತಿವೆ. ಏಪ್ರಿಲ್-2022 ರಿಂದ ಜೂನ್-2022 ರವರೆಗೆ 643 ಕೋಟಿ ರೂ.ಗಳಷ್ಟು ವಿದ್ಯುತ್ ಖರೀದಿ ವೆಚ್ಚ ಹೆಚ್ಚಳವಾಗಿದ್ದು, 80 ಪೈಸೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ವಸೂಲಿ ಮಾಡಲು ಬೆಸ್ಕಾಂ ಕೆಇಆರ್ಸಿಗೆ ಆಗಸ್ಟ್ 30, 2022 ರಂದು ಅರ್ಜಿ ಸಲ್ಲಿಸಿತ್ತು. ಪ್ರತಿ ಮೂರು ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ. ಆದರೆ ಗ್ರಾಹಕರಿಗೆ ಹೆಚ್ಚವರಿ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಈ ಶುಲ್ಕವನ್ನು ಆರು ತಿಂಗಳಿಗೆ ಅನ್ವಯಿಸುವಂತೆ ಪರಿಷ್ಕರಿಸಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದರು. ಕಳೆದ ಜುಲೈ ನಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಆರು ತಿಂಗಳ ಅವಧಿಗೆ 31 ಪೈಸೆಯಷ್ಟು ಬೆಸ್ಕಾಂಗೆ ಅನ್ವಯಿಸುವಂತೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿತ್ತು. ಇದೀಗ ಕಲ್ಲಿದ್ದಲು ಖರೀದಿ ವೆಚ್ಚದಲ್ಲಿ ಗಣನೀಯ ಏರಿಕೆ ಆದ ಹಿನ್ನೆಲೆಯಲ್ಲಿ 43 ಪೈಸೆ ಹೆಚ್ಚಳ ಮಾಡಲಾಗಿದ್ದು, ಈ ಮೊತ್ತವನ್ನು ಅಕ್ಟೋಬರ್ ನಿಂದ ಮುಂದಿನ ಮಾರ್ಚ್ -2023ರವರೆಗೆ ಸಂಗ್ರಹಿಸಲಾಗುತ್ತದೆ ಎಂದು ಮಹಾಂತೇಶ ಬೀಳಗಿ ವಿವರಿಸಿದ್ದರು. ಈಗ ಇದಕ್ಕೆಲ್ಲ ಬ್ರೇಕ್ ಬೀಳಲಿದೆ.
ಚುನಾವಣೆಯಲ್ಲಿ ಹಿನ್ನೆಡೆಯ ಭೀತಿಯಿಂದ ಬ್ರೇಕ್
ಇಂಧನ
ವ್ಯತ್ಯಾಸ
ದರಗಳನ್ನು
KERC
(ಇಂಧನ
ವೆಚ್ಚ
ಹೊಂದಾಣಿಕೆ
ಶುಲ್ಕಗಳು)
ನಿಯಮಗಳು,
2013
ರ
ಪ್ರಕಾರ,
ನಿರ್ದಿಷ್ಟಪಡಿಸಿದ
ಉಷ್ಣ
ವಿದ್ಯುತ್
ಸ್ಥಾವರಗಳಿಂದ
ಖರೀದಿಸಿದ
ವಿದ್ಯುಚ್ಛಕ್ತಿಯ
ಮೇಲಿನ
ಇಂಧನ
ವೆಚ್ಚದಲ್ಲಿನ
ಬೆಲೆ
ವ್ಯತ್ಯಾಸದಿಂದಾಗಿ
ಕಾಲಕಾಲಕ್ಕೆ
ಜಾರಿಯಲ್ಲಿರುವ
ಜಕಾತಿಗೆ
ಅನುಸಾರವಾಗಿ,
ಪ್ರತಿ
ಮೂರು
ತಿಂಗಳಿಗೊಮ್ಮೆ
ಕೆಇಆರ್ಸಿ
ಮುಂದೆ
ಅರ್ಜಿ
ಸಲ್ಲಿಸಲಾಗುತ್ತದೆ.
ಅರ್ಜಿಯನ್ನು
ಆಯೋಗವು
ಪರಾಮರ್ಶಿಸಿ,
ಇಂಧನ
ವ್ಯತ್ಯಾಸ
ದರವನ್ನು
ವಸೂಲಿ
ಅಥವಾ
ಕಡಿತಗೊಳಿಸಲು
ಕಾಲಕಾಲಕ್ಕೆ
ಆದೇಶಿಸುತ್ತದೆ.
ಕಲ್ಲಿದ್ದಲು
ಹಾಗೂ
ತೈಲ
ಬೆಲೆ
ಹೆಚ್ಚಾದಾಗ
ಹೊಂದಾಣಿಕೆ
ವೆಚ್ಚ
ಹೆಚ್ಚಾಗುತ್ತದೆ,
ಕಡಿಮೆಯಾದಾಗ
ವೆಚ್ಚ
ಇಳಿಯುತ್ತದೆ
ಎಂದು
ಬೆಸ್ಕಾಂ
ಎಂಡಿ
ತಿಳಿಸಿದ್ದರು.
ಆದರೆ
ಚುನಾವಣೆಯಲ್ಲಿ
ಹಿನ್ನೆಡೆಯ
ಭೀತಿ
ದರ
ಪರಿಷ್ಕರಣೆ
ಮಾಡಲು
ಹಿಂದೇಟು
ಹಾಕುವಂತೆ
ಮಾಡಿದೆ.
ಅದೆನಾದರು
ದರ
ಏರಿಕೆಯಿಂದ
ಜನ
ಕಂಗಾಲಾಗುವುದು
ಸದ್ಯಕ್ಕೆ
ಅಲ್ಪವಿರಾಮ
ಬಿದ್ದಿದೆ.