ದೆಹಲಿಯಲ್ಲಿ ಬಿಜೆಪಿ ಸೇರಿದ ಗವಿಯಪ್ಪ, ಕಾರ್ತಿಕೇಯ ಘೋರ್ಪಡೆ
Recommended Video
ಬಳ್ಳಾರಿ, ಫೆಬ್ರವರಿ 05: ಹೊಸಪೇಟೆಯ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಹಾಗೂ ಕಾಂಗ್ರೆಸ್ ಮುಖಂಡ ದಿವಂಗತ ಎಂ. ವೈ ಘೋರ್ಪಡೆ ಅವರ ಪುತ್ರ ಕಾರ್ತಿಕೇಯ ಘೋರ್ಪಡೆ ಅವರು ಸೋಮವಾರ ಸಂಜೆ ದೆಹಲಿಯಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಈ
ಸಂದರ್ಭದಲ್ಲಿ
ಬಳ್ಳಾರಿ
ಸಂಸದ
ಬಿ
ಶ್ರೀರಾಮುಲು,
ಕೇಂದ್ರ
ಸಚಿವರಾದ
ಅನಂತಕುಮಾರ್,
ಡಿ.
ವಿ
ಸದಾನಂದ
ಗೌಡ,
ಕರ್ನಾಟಕ
ಚುನಾವಣಾ
ಉಸ್ತುವಾರಿ
ಪ್ರಕಾಶ್
ಜಾವಡೇಕರ್
ಅವರ
ಸಮ್ಮುಖದಲ್ಲಿ
ಎಚ್.
ಆರ್
ಗವಿಯಪ್ಪ
ಹಾಗೂ
ಕಾರ್ತಿಕೇಯ
ಘೋರ್ಪಡೆ
ಅವರು
ಬಿಜೆಪಿ
ಸೇರ್ಪಡೆಯಾಗಿದ್ದಾರೆ.
ಬಿ.ಎಸ್. ಆನಂದಸಿಂಗ್ ಅವರು ಬಿಜೆಪಿಗೆ ಮತ್ತು ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರುವ ಎಲ್ಲಾ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದ್ದಾಗ, ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿಯ ರಾಜಕೀಯ ಬೆಳವಣಿಗೆಗಳನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿತ್ತು.
ಕಾಂಗ್ರೆಸ್ಸಿನ ಮಾಜಿ ಶಾಸಕ ಗವಿಯಪ್ಪ ಬಿಜೆಪಿಗೆ ಸೇರಿದ್ದು ಹೇಗೆ?
ಸಂತೋಷ್ ಜೀ ಅವರನ್ನು ಬಳ್ಳಾರಿಗೆ ಕಳುಹಿಸಿ, ಆನಂದ್ ಸಿಂಗ್ ಅವರಿಗೆ ಪ್ರತಿಸ್ಪರ್ಧಿ ಎಚ್.ಆರ್. ಗವಿಯಪ್ಪ ಅವರನ್ನು ಪಕ್ಷಕ್ಕೆ ಆಹ್ವಾನಿಸಿ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಬಿ ಫಾರಂ ನೀಡುವ ಕುರಿತು ಮಾತುಕತೆ ನಡೆಸಲು ನಿಯೋಜಿಸಿತ್ತು.
ಬಳ್ಳಾರಿ ಜಿಲ್ಲೆಯ ಜನಪ್ರಿಯ ನಾಯಕರು, ಶಾಸಕರು, ಕಾರ್ಯಕರ್ತರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿರುವುದಿಂದ ದಿನೇ ದಿನೇ ಬಿಜೆಪಿ ಸೊರಗುತ್ತಿದೆ.
ಎಚ್.ಆರ್. ಗವಿಯಪ್ಪ ಅವರು ಕಾಂಗ್ರೆಸ್ ಟಿಕೇಟ್ನಿಂದ ಒಮ್ಮೆ ವಂಚಿತರಾಗಿ, ಗಾಯಯೋಗಿ ಪುಟ್ಟರಾಜ ಗವಾಯಿಗಳ ಆಶೀರ್ವಾದ ಪಡೆದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾರ್ ಚಿಹ್ನೆಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ನಂತರ ಕಾಂಗ್ರೆಸ್ ಸಹ ಸದಸ್ಯರಾಗಿದ್ದರು.