ಪರಿಷ್ಕೃತ ವೇತನ ಜಾರಿಗೆ ಚುನಾವಣಾ ಆಯೋಗ ಒಪ್ಪಿಗೆ
ಬೆಂಗಳೂರು, ಏಪ್ರಿಲ್ 19: ರಾಜ್ಯ ಸರ್ಕಾರದ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಹೆಚ್ಚಿಸಲು ಕೇಂದ್ರ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ.
ರಾಜ್ಯ ಸರ್ಕಾರ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅನುಮತಿ ಕೇಳಿತ್ತು. ಸರ್ಕಾರಿ ನೌಕರರ ವೇತನವನ್ನು 2017ರ ಜುಲೈ ಒಂದರಿಂದ ಪೂರ್ವಾನ್ವಯವಾಗುವಂತೆ ಶೇ 30ರಷ್ಟು ಹೆಚ್ಚಿಸಲು ಆರನೇ ವೇತನ ಆಯೋಗ ಶಿಫಾರಸು ಮಾಡಿದೆ. ಇದರಿಂದ ಒಟ್ಟು 5.20 ಲಕ್ಷ ನೌಕರರಿಗೆ ಪ್ರಯೋಜನವಾಗಲಿದೆ.
ಸರ್ಕಾರಿ ನೌಕರರ ವೇತನ ಶೇ.30 ರಷ್ಟು ಹೆಚ್ಚಳಕ್ಕೆ ಆಯೋಗ ಶಿಫಾರಸು
ವೇತನ ಹೆಚ್ಚಳ ಶಿಫಾರಸು ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ, ಪದವಿ ಶಿಕ್ಷಣ ವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಸುಮಾರು 73,000 ಬೋಧಕೇತರ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ.
ಕನಿಷ್ಠ ವೇತನ 17,000 ರೂ. ಮತ್ತು ಗರಿಷ್ಠ ವೇತನ 1,50,600ರೂ. ನಿಗದಿಪಡಿಸುವಂತೆಯೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.8,500ರೂ. ಕನಿಷ್ಠ ಪಿಂಚಣಿ ಮತ್ತು 75,300ರೂ. ಗರಿಷ್ಠ ಪಿಂಚಣಿಗೂ ಶಿಫಾರಸು ಮಾಡಲಾಗಿದೆ.
6ನೇ ವೇತನ ಆಯೋಗ ವರದಿ ಸಲ್ಲಿಕೆ: ಭರ್ಜರಿ ಕೊಡುಗೆ ನಿರೀಕ್ಷೆ
ಇದರಿಂದಾಗಿ ಈವರೆಗೆ ಡಿಗ್ರೂಪ್ ನೌಕರರಿಗೆ ಇದ್ದ ಆರಂಭಿಕ ಕನಿಷ್ಠ ಮೂಲವೇತನ 9,600 ರೂ. ಇನ್ನು 17,000ರೂ.ಗೆ ಏರಿಕೆಯಾಗಲಿದೆ. ಶೇ 45.25ರಷ್ಟಿದ್ದ ತುಟ್ಟಿಭತ್ಯೆ ಮೂಲವೇತನದಲ್ಲಿ ವಿಲೀನವಾಗಲಿದೆ. ಜತೆಗೆ ಶೇ 30ರ ಫಿಟ್ ಮೆಂಟ್ ನೌಕರರಿಗೆ ಸಿಗಲಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಏಪ್ರಿಲ್ನಿಂದ ಪಾವತಿ: ಆಯೋಗದ ಶಿಫಾರಸಿನ ಪ್ರಕಾರ, ಪರಿಷ್ಕೃತ ದರವನ್ನು ಈ ವರ್ಷ ಏಪ್ರಿಲ್ 1ರಿಂದಲೇ ಪಾವತಿಸಬೇಕಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ 10,508ರೂ. ಕೋಟಿ ಹೆಚ್ಚುವರಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇನ್ನಿತರ
ಶಿಫಾರಸುಗಳು
*
ಹಾಲಿ
ಸರ್ಕಾರಿ
ನೌಕರರ
ನಿವೃತ್ತಿ
ವಯಸ್ಸನ್ನೂ
60
ವರ್ಷಗಳಿಗೆ
ಮುಂದುವರಿಸಬೇಕು
*
ಸ್ವಯಂ
ನಿವೃತ್ತಿಗೆ
ಕನಿಷ್ಠ
ಸೇವಾ
ಅರ್ಹತೆ
ಮಿತಿ
15ರಿಂದ
10
ವರ್ಷಕ್ಕೆ
ಇಳಿಕೆ
*
ಪೂರ್ಣ
ಪ್ರಮಾಣದ
ಪಿಂಚಿಣಿ
ಪಡೆಯಲು
ಇರುವ
ವಯಸ್ಸಿನ
ಅರ್ಹತೆಯನ್ನು
33
ವರ್ಷಗಳಿಗೆ
ಬದಲಾಗಿ
30
ವರ್ಷಗಳಿಗೆ
ಇಳಿಕೆ
*
ಮನೆ
ಬಾಡಿಗೆ
ಭತ್ಯೆಯನ್ನು
ಪರಿಷ್ಕೃತ
ಮೂಲ
ವೇತನ
ಆಧರಿಸಿ
ಶೇ
24,
ಶೇ
16
ಮತ್ತು
ಶೇ
8ರಂತೆ
ಪರಿಷ್ಕರಿಸಬೇಕು
*
ಪಿಂಚಣಿ
ಮತ್ತು
ಕುಟುಂಬ
ಪಿಂಚಣಿಯನ್ನು
ಪ್ರಸಕ್ತ
ಮೂಲ
ಪಿಂಚಣಿಯ
ಶೇ
30ರಷ್ಟು
ಹೆಚ್ಚಳ
ಮಾಡಬೇಕು