ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡುತ್ತೇವೆ, ಆತುರ ಬೇಡ: ಸಚಿವ ಮಹೇಶ್
ಬೆಂಗಳೂರು, ಜುಲೈ 17: ಉಚಿತ ಪಾಸ್ಗೆ ಒತ್ತಾಯಿಸಿ ವಿದ್ಯಾರ್ಥಿಗಳು ಹೋರಾಟ ತೀವ್ರ ಮಾಡುತ್ತಿದ್ದಂತೆ ಎಚ್ಚೆತ್ತಿರುವ ಶಿಕ್ಷಣ ಸಚಿವರು ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪಾಸ್ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದ ಸರ್ವರಿಗೂ ಉಚಿತ ಪಾಸ್ ಯೋಜನೆಯನ್ನು ಕುಮಾರಸ್ವಾಮಿ ಸರ್ಕಾರ ಮೊಟಕು ಗೊಳಿಸಿ ಹಿಂದುಳಿದ ಜಾತಿ ವಿದ್ಯಾರ್ಥಿಗಳಿಗೆ ಮಾತ್ರವೇ ಉಚಿತ ಪಾಸ್ ಯೋಜನೆಯನ್ನು ಜಾರಿಗೆ ತರಲು ಚಿಂತಿಸಿತ್ತು ಇದಕ್ಕೆ ವಿದ್ಯಾರ್ಥಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.
ಸಮ್ಮಿಶ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ: ಬಂದ್ಗೆ ಕರೆ
ವಿದ್ಯಾರ್ಥಿಗಳು ಹಲವು ಜಿಲ್ಲೆಗಳಲ್ಲಿ ಉಚಿತ ಬಸ್ ಪಾಸ್ಗಾಗಿ ಸತತ ಪ್ರತಿಭಟನೆ ಮಾಡುತ್ತಿದ್ದು, ಜುಲೈ 21ರಂದು ವಿದ್ಯಾರ್ಥಿ ಸಂಘಟನೆ ಎಬಿವಿಪಿಯು ಶಾಲಾ ಕಾಲೇಜು ಬಂದ್ಗೆ ಕರೆ ನೀಡಿತ್ತು.
ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಎಚ್ಚೆತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮಂತ್ರಿ ಎನ್.ಮಹೇಶ್ ಅವರು ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುತ್ತೇವೆ, ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಬಿಎಂಟಿಸಿ ಬಸ್ಪಾಸ್ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆ
ಮುಖ್ಯಮಂತ್ರಿಗಳೊಡನೆ ಈ ವಿಷಯ ಚರ್ಚಿಸಿ ಇದನ್ನು ಬಸ್ ಪಾಸ್ ವಿತರಿಸಲಾಗುವುದು ವಿದ್ಯಾರ್ಥಿಗಳು ಆತುರ ಪಡಬಾರದು ಎಂದು ಸಚಿವರು ಮನವಿ ಮಾಡಿದ್ದಾರೆ.
ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲಾ-ಕಾಲೇಜುಗಳ ತರಗತಿಗಳು ಪ್ರಾರಂಭವಾಗಿವೆ. ಇನ್ನೂ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವಷ್ಟರಲ್ಲಿ ಸಾಕಷ್ಟು ಸಮಯವೇ ಆಗಿ ಹೋಗುತ್ತದೆ. ಅಷ್ಟರವರೆಗೆ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬುದು ನಮ್ಮ ಕಾಳಜಿ.