ಶಾಲಾ ಬಸ್ಪಾಸ್ಗೆ ಶಿಕ್ಷಣ ಇಲಾಖೆಯಿಂದ ಶೇ.25 ವಂತಿಕೆ: ಸಚಿವ ಮಹೇಶ್
Recommended Video
ಬೆಂಗಳೂರು, ಜು.17: ಶೀಘ್ರದಲ್ಲೇ ಬಸ್ ಪಾಸ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡಿಸುವ ಪ್ರಯತ್ನ ನಡೆದಿದೆ ಶೇ.25 ರಷ್ಟು ಹಣ ಭರಿಸಲು ಶಿಕ್ಷಣ ಇಲಾಖೆ ಸಿದ್ಧ ಎಂದು ಸಚಿವ ನಮ್ಮ ಪಾಲಿನ ಶೇ. 25ರಷ್ಟು ಹಣ ಭರಿಸಲು ನಾವು ಸಿದ್ಧ ಎಂದು ಶಿಕ್ಷಣ ಸಚಿವ ಮಹೇಶ್ ತಿಳಿಸಿದ್ದಾರೆ.
ಈ ಕುರಿತು ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳ ಜತೆಗೆ ಆದಷ್ಟು ಬೇಗ ಚರ್ಚಿಸಿ ಉಚಿತ ಬಸ್ಪಾಸ್ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭವಾಗಲಿದೆ. ಈ ವರ್ಷ 175 ಕರ್ನಾಟಕ ಪಬ್ಲಿಕ್ ಶಾಲೆ ಆರಂಭವಾಗುತ್ತಿದೆ, ಸರ್ಕಾರಿ ಶಾಲೆಗಳಲ್ಲಿ ಮತ್ತಷ್ಟು ಗುಣಮಟ್ಟ ಹೆಚ್ಚಿಸಲು ನಿರ್ಧಾರಿಸಲಾಗಿದೆ ಎಂದರು.
ಬಿಎಂಟಿಸಿ ಬಸ್ಪಾಸ್ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆ
ಜೂನ್ ತಿಂಗಳಿನಿಂದ ಆರಂಭವಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವ ಪ್ರತಿಭಟನೆಗಳು ಆರಂಭವಾಗಿತ್ತು, ಮೊದಲು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಿ ಬಳಿಕ ಕೇವಲ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ನೀಡುತ್ತೇವೆ ಎಂದು ಸರ್ಕಾರ ಹೇಳಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಅದರ ಮೂಲಕ ಒತ್ತಾಯಿಸಿದ್ದರು. ಇದೀಗ ಸಚಿವ ಮಹೇಶ್ ಅವರ ಈ ಮಾತಿನಿಂದ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿನ ಸಮಾಧಾನವಾಗಬಹುದು.