ರಾಹುಲ್ ಭೇಟಿ ನೆನಪಿನಾರ್ಥ ಮೈದೂರು ಶಾಲೆಗೆ 50ಲಕ್ಷ ಬಂಪರ್
ರಾಣೆಬೆನ್ನೂರು, ಅಕ್ಟೋಬರ್, 10 : ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮೈದೂರಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ ನೆನಪಿಗಾಗಿ ರಾಜ್ಯ ಸರ್ಕಾರ 50ಲಕ್ಷ ರೂ ವಿಶೇಷ ಅನುದಾನ ಘೋಷಿಸಿದೆ. ಈ ಹಣದಿಂದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಲಾಗುವುದು ಅಕ್ಟೋಬರ್ 10ರ ಶನಿವಾರದಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾಹಿತಿ ನೀಡಿದರು.
ಮೈದೂರಿನ ಸುಮಾರು 90 ವಿದ್ಯಾರ್ಥಿಗಳೊಂದಿಗೆ ರಾಹುಲ್ ಸಂವಾದ ನಡೆಸಿದ್ದು, ಇವರೊಂದಿಗೆ ಮಾತನಾಡಲು ಸುಮಾರು ದಿನಗಳಿಂದ ಮಕ್ಕಳು ಇಂಗ್ಲೀಷ್ ತಯಾರಿ ನಡೆಸಿದ್ದರು. ಈ ಸಂದರ್ಭದಲ್ಲಿ ದೇಶದಲ್ಲಿ ನಾನು ಮಾತ್ರ ಅಲ್ಲ ನೀವು ಕೂಡ ಪ್ರಧಾನಿ ಆಗಬಹುದು, ಇದು ಪ್ರಜಾಪ್ರಭುತ್ವ ಎಂದು ರಾಹುಲ್ ಗಾಂಧಿ ಶಾಲಾ ಮಕ್ಕಳ ಪ್ರಶ್ನೆಗೆ ಉತ್ತರಿಸಿದರು.[ದಲಿತರಿಗೆ ಮುಖ್ಯಮಂತ್ರಿ ಪಟ್ಟ ಕೊಡಲು ರಾಹುಲ್ ಗೆ ಮನವಿ]
ರಾಹುಲ್ ಗಾಂಧಿ ಅವರು ಬಿಸಿಯೂಟದ ಬಗ್ಗೆ ಪ್ರಶ್ನಿಸಿದ್ದು, ಕೆಲವು ನಿಮಿಷಗಳ ಕಾಲ ಮಕ್ಕಳ ಸಂತಸದಲ್ಲಿ ಭಾಗಿಯಾದರು. ಬಳಿಕ ಮಕ್ಕಳನ್ನೊಳಗೊಂಡಂತೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಲ್ಲಿ ಶಾಲೆ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು.
ರಾಹುಲ್ ಸಚಿವರಿಗೆ ಸುಮ್ಮನಿರಿ ಎಂದರು :
ಕಳಸಾ-ಬಂಡೂರಿ ಹೋರಾಟಗಾರರು ರಾಹುಲ್ ಅವರಿಗೆ ಮನವಿ ಸಲ್ಲಿಸಿ ಯೋಜನೆ ಬಗ್ಗೆ ವಿವರಿಸುತ್ತಿದ್ದರು. ಆ ಸಮಯದಲ್ಲಿ ಮಧ್ಯಪ್ರವೇಶಿಸಲು ಮುಂದಾದ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರಿಗೆ ಕೈ ಸನ್ನೆ ಮಾಡಿ ದೂರದಲ್ಲಿಯೇ ನಿಲ್ಲಲು ತಿಳಿಸಿದರು.
Cong
VP
Rahul
Gandhi
interacting
with
children
at
Maidur
village
Government
school,
Karnataka
pic.twitter.com/IXXlsVdenl
—
CNN-IBN
News
(@ibnlive)
October
10,
2015