ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ
ಬೆಂಗಳೂರು, ಜುಲೈ 08 : 'ನನಗೆ ಮುಂದೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಇದು ಡಿವೈಎಸ್ಪಿ ಎಂ.ಕೆ.ಗಣಪತಿ ಅವರು ಸುದ್ದಿವಾಹಿನಿಗೆ ನೀಡಿರುವ ಕೊನೆಯ ಹೇಳಿಕೆ. [ಗಣಪತಿ ಆತ್ಮಹತ್ಯೆ : ಸಚಿವ ಜಾರ್ಜ್ ಹೇಳುವುದೇನು?]
ಮಂಗಳೂರು
ಐಜಿ
ಕಚೇರಿಯ
(ಪಶ್ಚಿಮ
ವಲಯ)
ಡಿವೈಎಸ್ಪಿ
ಎಂ.ಕೆ.ಗಣಪತಿ
ಅವರು
ಗುರುವಾರ
ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.
ಸರ್ಕಾರ
ತಡರಾತ್ರಿ
ಆತ್ಮಹತ್ಯೆ
ಪ್ರಕರಣದ
ತನಿಖೆಯನ್ನು
ಸಿಐಡಿಗೆ
ವಹಿಸಿ
ಆದೇಶ
ಹೊರಡಿಸಿದೆ.
[ಸಮವಸ್ತ್ರದಲ್ಲೇ
ನೇಣಿಗೆ
ಶರಣಾದ
ಡಿವೈಎಸ್ಪಿ
ಗಣಪತಿ]
ಗುರುವಾರ ರಾತ್ರಿ ಎಂ.ಕೆ.ಗಣಪತಿ ಅವರ ಶವ ಮಡಿಕೇರಿಯ ವಿನಾಯಕ ಲಾಡ್ಜ್ನಲ್ಲಿ ಪತ್ತೆಯಾಗಿತ್ತು. ಪೊಲೀಸ್ ಸಮವಸ್ತ್ರ ಧರಿಸಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಆತ್ಮಹತ್ಯೆಗೆ ಮುನ್ನ ಗಣಪತಿ ಅವರು ಸ್ಥಳೀಯ ವಾಹಿನಿಗೆ ಹೇಳಿದ ಮಾತುಗಳು ವಿವಾದಕ್ಕೆ ಕಾರಣವಾಗಿವೆ. [ಚಿಕ್ಕಮಗಳೂರು DySP ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ]
ಕೊನೆಯಲ್ಲಿ
ಗಣಪತಿ
ಹೇಳಿದ್ದೇನು?
ವಿಡಿಯೋ
ನೋಡಿ
ಗಣಪತಿ ಅವರ ಶವ ಪತ್ತೆಯಾದ ಲಾಡ್ಜ್ನಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 'ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗುತ್ತದೆ' ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು ಹೇಳಿದ್ದಾರೆ. [ಜಾರ್ಜ್ ಕೈ ತಪ್ಪಿದ ಗೃಹ ಖಾತೆ]
ಜಾರ್ಜ್
ರಾಜೀನಾಮೆ
ನೀಡಲಿ
:
ಘಟನೆ
ಬಗ್ಗೆ
ಪ್ರತಿಕ್ರಿಯೆ
ನೀಡಿರುವ
ಪ್ರತಿಪಕ್ಷ
ನಾಯಕ
ಜಗದೀಶ್
ಶೆಟ್ಟರ್
ಅವರು,
'ಪ್ರಾಮಾಣಿಕ
ಅಧಿಕಾರಿಗಳಿಗೆ
ರಕ್ಷಣೆ
ಇಲ್ಲವಾಗಿದೆ.
ಗಣಪತಿ
ಅವರು
ಆತ್ಮಹತ್ಯೆಗೆ
ಮುನ್ನ
ಹಿಂದೆ
ಗೃಹ
ಸಚಿವರಾಗಿದ್ದ
ಕೆ.ಜೆ.ಜಾರ್ಜ್
ಆವರ
ಹೆಸರು
ಹೇಳಿದ್ದಾರೆ.
ಜಾರ್ಜ್
ಕೂಡಲೇ ರಾಜೀನಾಮೆ
ನೀಡಬೇಕು.
ಇಲ್ಲವಾದರೇ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಜಾರ್ಜ್
ಅವರನ್ನು
ಸಂಪುಟದಿಂದ
ಕೈಬಿಡಬೇಕು'
ಎಂದು
ಶೆಟ್ಟರ್
ಒತ್ತಾಯಿಸಿದರು.
[ಕೆಜೆ
ಜಾರ್ಜ್
ಕಾಡಿದ
7
ವಿವಾದಗಳು]
ಇಂದು ಅಂತ್ಯಕ್ರಿಯೆ : ಡಿವೈಎಸ್ಪಿ ಗಣಪತಿ ಅವರ ಶವವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಸೋಮವಾರಪೇಟೆ ತಾಲೂಕಿನ ರಂಗಸಮುದ್ರದ ಗಣಪತಿ ಅವರ ಹುಟ್ಟೂರು ಸಂಜೆ ಅಲ್ಲಿಯೇ ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆ ಇದೆ.