ಕಲ್ಲಪ್ಪ ಆತ್ಮಹತ್ಯೆ ಪ್ರಕರಣ, ಸಿಐಡಿಯಿಂದ ತೀವ್ರ ವಿಚಾರಣೆ
ಚಿಕ್ಕಮಗಳೂರು, ಜುಲೈ 07: ಡಿವೈಎಸ್ಪಿ ಕಲ್ಲಪ್ಪ ಅವರ ಮೇಲಿನ ಅಪಹರಣ ಆರೋಪ, ಆತ್ಮಹತ್ಯೆ ಹಿಂದಿನ ಸತ್ಯವನ್ನು ಶೋಧಿಸಲು ಸಿಐಡಿ ತಂಡ ಚಿಕ್ಕಮಗಳೂರಿಗೆ ಆಗಮಿಸಿದೆ. ಕಲ್ಲಪ್ಪ ಅವರ ವಿರುದ್ಧ ಕಿಡ್ನಾಪ್ ದೂರು ನೀಡಿರುವ ತೇಜಸ್ ಗೌಡ ಸೇರಿದಂತೆ ಹಲವಾರು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. [ಸಿಐಡಿಗೆ ಮಾಹಿತಿ ನೀಡುವುದು ಹೇಗೆ?]
ಚಿಕ್ಕಮಗಳೂರಿನ
ಪೊಲೀಸ್
ಅತಿಥಿಗೃಹದಲ್ಲಿ
ತೇಜಸ್
ಗೌಡ,
ಪವನ್,
ಶಿವು
ಅವರ
ವಿಚಾರಣೆಯನ್ನು
ಕೈಗೆತ್ತಿಕೊಳ್ಳಲಾಗಿದೆ.
ರಾಜಪ್ಪ
ನೇತೃತ್ವದ
ಸಿಐಡಿ
ತನಿಖಾ
ತಂಡಕ್ಕೆ
ಇನ್ಸ್
ಪೆಕ್ಟರ್
ರಾಕೇಶ್
ಅವರು
ನೆರವಾಗುತ್ತಿದ್ದಾರೆ.
[ಹಂದಿಗುಂದಿ
ಗ್ರಾಮದ
ಪ್ರಾಮಾಣಿಕ
ಅಧಿಕಾರಿ
ಕಲ್ಲಪ್ಪ
ವ್ಯಕ್ತಿಚಿತ್ರ]
ಜೂನ್ 27ರಂದು ಮಾಧವ ಎಂಬುವವರಿಗೆ ಸೇರಿರುವ ತೋಟದಲ್ಲಿ ಚಿಕ್ಕೊಲಳೆ ಗ್ರಾಮದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದವರ ಮೇಲೆ ಇನ್ಸ್ ಪೆಕ್ಟರ್ ರಾಕೇಶ್ ಅವರು ದಾಳಿ ಮಾಡಿ 26ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದರು. [ತೇಜಸ್ ಗೌಡ ಅಪಹರಣ, ಪ್ರಮುಖ ಆರೋಪಿ ಬಂಧನ]
ಈ
ಪೈಕಿ
ತೇಜಸ್
ಗೌಡ
ಸೇರಿದಂತೆ
6
ಮಂದಿಗೆ
ಅಂದಿನ
ದಿನವೇ
ಜಾಮೀನು
ಸಿಕ್ಕಿತ್ತು.
ಮರುದಿನ
ತೇಜಸ್
ಕಿಡ್ನಾಪ್
ಆಗಿತ್ತು.
ಈ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಚಿಕ್ಕಮಗಳೂರಿನ
ಬಿಜೆಪಿ
ನಗರ
ಸಭಾ
ಸದಸ್ಯ
ಸುಧೀರ್
ಅವರನ್ನು
ಸಿಐಡಿ
ತಂಡ
ಪ್ರಶ್ನಿಸಿದೆ.[ಕಲ್ಲಪ್ಪ
ಅವರ
ತೇಜೋವಧೆ
ಮಾಡಬೇಡಿ
:
ಪ್ರತಾಪ್
ಸಿಂಹ]
ಕಲ್ಲಪ್ಪ ಅವರ ಜತೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳಾದ ರಂಗನಾಥ್, ಜಗದೀಶ್, ರಮೇಶ್ ಅವರಿಂದ ಕೂಡಾ ಸಿಐಡಿ ತಂಡ ಮಾಹಿತಿ ಪಡೆದುಕೊಂಡಿದೆ. [ಕಲ್ಲಪ್ಪ ಅವರಿಗೆ ಇಲಾಖೆ ಕಿರುಕುಳ ನೀಡಿಲ್ಲ: ಎಸ್ಪಿ ಸಂತೋಷ್]
ಕಿಡ್ನಾಪ್
ಪ್ರಕರಣದಲ್ಲಿ
ಆರೋಪಿಗಳು
ಎನ್ನಲಾದ
ಚಿಟ್
ಫಂಡ್
ಸಂಸ್ಥೆ
ನಡೆಸುವ
ನಟರಾಜ್
ಹಾಗೂ
ಹಿಂದೂ
ಸಂಘಟಕ
ಪ್ರವೀಣ್
ಖಾಂಡ್ಯ
ಅವರ
ಬಂಧನವಾಗಿದೆ
ಎಂಬ
ಸುದ್ದಿಯನ್ನು
ಸಿಐಡಿ
ಐಜಿಪಿ
ಪ್ರತಾಪ್
ರೆಡ್ಡಿ
ತಳ್ಳಿ
ಹಾಕಿದ್ದಾರೆ.[ಕಿಡ್ನಾಪ್
ಆಗಿದ್ದ
ತೇಜಸ್
ಹೇಳಿದ
ಕಥೆ]
ಡಿಐಜಿ ನಾರಂಗ್ ಎಂಟ್ರಿ: ಡಿಐಜಿ ಸೋನಿಯಾ ನಾರಂಗ್, ಎಸ್ಪಿ ಹೈದಿ ಮಾರ್ಟಿನ್ ಅವರು ಕಲ್ಲಪ್ಪ ಅವರ ಮಾವ ಸಿದ್ರಾಮಪ್ಪ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಪೊಲೀಸ್ ಇಲಾಖೆಯಿಂದ ಕಿರುಕುಳವಾಗಿದೆ ಎಂದು ಕಲ್ಲಪ್ಪ ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.