ಬೇಸಿಗೆ ಸಹಿಸಿಕೊಂಡರೆ ಮುಂದಿದೆ ಭರ್ಜರಿ ಮುಂಗಾರು
ಬೆಂಗಳೂರು, ಮಾರ್ಚ್18- ಬಿರುಬಿಸಿಲು ಜತೆಗೆ ಚುನಾವಣೆ ಕಾವು ಸೇರಿ ಜನತೆ ಹೈರಾಣಗೊಂಡಿರುವ ಹೊತ್ತಿನಲ್ಲಿ ತಂಪಾದ ವರದಿಯೊಂದು ಬಂದಿದೆ. ಏನಪ್ಪಾ ಅಂದರೆ ಸದ್ಯಕ್ಕೆ ಚುನಾವಣೆ ಕಾವು ಮತ್ತು ವಿಪರೀತವಾದ ಬೇಸಿಗೆಯನ್ನು ಸಹಿಸಿಕೊಂಡರೆ ಮುಂದೆ ಮುಂಗಾರು ವೇಳೆಗೆ ಭರ್ಜರಿ ಮಳೆಯಾಗಲಿದೆ.
ಅಂದರೆ
ಭಾರತದಲ್ಲಿ
ಈ
ಬಾರಿ
ಮುಂಗಾರು
ಉತ್ತಮವಾಗಲಿದೆ
ಎಂದು
IIT
Bhubaneshwar
ಸಂಶೋಧಕರು
ಉಪಗ್ರಹ
ಆಧಾರಿತ
ಮಾಹಿತಿಯನ್ನಾಧರಿಸಿ
ಹಿತಕರ
ಸುದ್ದಿ
ನೀಡಿದ್ದಾರೆ.
ಕಳೆದ
ಬಾರಿಯೂ
ಭರ್ಜರಿ
ಮುಂಗಾರು
ಆಗಿತ್ತು.
ಆದರೆ,
ಅದರ
ಹಿಂದಿನ
ನಾಲ್ಕೈದು
ವರ್ಷಗಳಂತೂ
ಕೃಷಿಕರಿಗೆ
ಮುಂಗಾರು
ಕೈಕೊಟ್ಟಿತ್ತು.
ಗಮನಿಸಬೇಕಾದ ಸಂಗತಿಯೆಂದರೆ ಈ ಬಾರಿ ಮುಂಗಾರು ಕುರಿತಾದ ಮೊದಲ ವರದಿ ಇದಾಗಿದೆ. ಮುಂಗಾರು ಮೊದಲ ಹನಿ ಧರೆಯ ಮೇಲೆ ಬೀಳುವ ಕೊನೆಯ ಕ್ಷಣದವರೆಗೂ ಇಂತಹ ವರದಿಗಳು ಇನ್ನೂ ಹತ್ತಾರು ಬರಲಿವೆ. ಬೆಂಗಳೂರಿನ ಹವಾಮಾನ ಇಲಾಖೆ ನಿರ್ದೇಶಕ ಬಿ ಪುಟ್ಟಣ್ಣ ಅವರೂ ಇದನ್ನೇ ಹೇಳಿರುವುದು. ಜತೆಗೆ ಅವರು ಇನ್ನೂ ಒಂದು ಇಂಟರೆಸ್ಟಿಂಗ್ ಸಂಗತಿಯನ್ನೂ ಹೇಳಿದ್ದಾರೆ.
'ಮುಂಗಾರು ಬಗ್ಗೆ ಈಗಲೇ ಮುನ್ಸೂಚನೆ ನೀಡುವುದು ಸಮಂಜಸವಲ್ಲ. ವಾತಾವರಣದಲ್ಲಿನ ಸ್ಥಿತ್ಯಂತರಗಳನ್ನು ಮಾರ್ಚ್ 31ರವರೆಗೂ ಅವಲೋಕಿಸಿ, ಆ ಬಳಿಕ ಭಾರತೀಯ ಹವಾಮಾನ ಇಲಾಖೆ ಏ. 16ರ ಸುಮಾರಿಗೆ ಪ್ರಕಟಿಸುವ ವರದಿಯೇ ಅಧಿಕೃತ. ಅದಕ್ಕೂ ಮುಂಚೆ ಹೇಳುವ ಮುನ್ಸೂಚನೆ ನಿಖರವಾಗಿರಲು ಸಾಧ್ಯವಿಲ್ಲ' ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ವರದಿಗಳು ಏನೇ ಇರಲಿ ಮಳೆ ಉತ್ತಮವಾಗಿರಲಿ ಎಂಬ ಸದಾಶದ ರೈತಾಪಿ ವರ್ಗದ್ದು.