ಪರಿಷತ್ ಸಭಾಪತಿ ಆಯ್ಕೆ ಯಾವಾಗ, ಬೆಳಗಾವಿ ಅಧಿವೇಶನದಲ್ಲಾ?
ಬೆಂಗಳೂರು, ನವೆಂಬರ್ 9: ಈಗಾಗಲೇ ಸಂಪುಟ ವಿಸ್ತರಣೆ ಬಗ್ಗೆ ಮತ್ತೆ ಮಾತುಗಳು ಕೇಳಿ ಬರುತ್ತಿವೆ, ಇನ್ನೊಂದೆಡೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಇದೀಗ ಪರಿಷತ್ ಸಭಾಪತಿ ಹಾಗೂ ಉಪ ಸಭಾಪತಿ ಆಯ್ಕೆ ಕುರಿತು ಗುಸುಗುಸು ಆರಂಭಗೊಂಡಿದೆ.
ಇದೀಗ ಮಿತ್ರ ಪಕ್ಷಗಳಲ್ಲಿ ಯಾರು ಸಭಾಪತಿ ಹಾಗೂ ಉಪ ಸಭಾಪತಿಯಾಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಬಬೆಳಗಾವಿಯ ಚಳಿಗಾಲ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕ ಪ್ರಕ್ರಿಯೆ ನಡೆಯಲಿದೆ.
ಆಷಾಢ ಮಾಸ ಕಳೆಯುವವರೆಗೂ ಸಂಪುಟ ವಿಸ್ತರಣೆ ಇಲ್ಲ
ಡಿ.ಎಚ್ ಶಂಕರಮೂರ್ತಿ ನಿವೃತ್ತಿ ಬಳಿಕ ಸದನದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹಲವು ತಿಂಗಳಿನಿಂದ ಹಂಗಾಮಿ ಸಭಾಪತಿಯಾಗಿ ಮುಂದುವರೆದಿದ್ದಾರೆ.ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸದೆ ಹಂಗಾಮಿಯನ್ನೇ ಮುಂದುವರೆಸುವ ಬಗ್ಗೆ ಕಳೆ ಜುಲೈ ಅಧಿವೇಶನದಲ್ಲಿ ಸದನದಲ್ಲೇ ಆಕ್ಷೇಪ ವ್ಯಕ್ತವಾಗಿತ್ತು.
ದೇಶದಲ್ಲಿ ಮಹಾಘಟಬಂಧನ್: ದೇವೇಗೌಡ-ನಾಯ್ಡು ಭೇಟಿ ಇಂದು
ಈ ಕುರಿತು ಜು.6 ರಂದು ಸದನದಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ. ಮೈತ್ರಿ ಸರ್ಕಾರದಲ್ಲಿ ವಿಧಾನಸಭೆ ಸಭಾಧ್ಯಕ್ಷರಾಗಿ ಕಾಂಗ್ರೆಸ್ ನ ಕೆ.ಆರ್. ರಮೇಶ್ ಕುಮಾರ್ ಆಯ್ಕೆಯಾಗಿದ್ದು, ಮೇಲ್ಮನೆಯ ಸಭಾಪತಿ ಸ್ಥಾನ ಜೆಡಿಎಸ್ ಗೆ ಸಿಗುವ ಲೆಕ್ಕಾಚಾರ ಇದೆ.
ಉಪ ಚುನಾವಣೆ ಮುಗೀತು, ಸಂಪುಟ ವಿಸ್ತರಣೆಗೆ ವಿಳಂಬವಿಲ್ಲ: ದೇವೇಗೌಡ
ಹಂಗಾಮಿ ಸಭಾಪತಿಯಾಗಿರುವ ಬಸವರಾಜಹೊರಟ್ಟಿ ಅವರನ್ನೇ ಈ ಸ್ಥಾನದಲ್ಲಿ ಮುಂದುವರೆಸುವ ಬಗ್ಗೆ ಜೆಡಿಎಸ್ ನಲ್ಲಿ ಒಲವು ವ್ಯಕ್ತವಾಗಿತ್ತು. ಆದರೆ ಮೇಲ್ಮನೆಯಲ್ಲಿ 39 ಸದಸ್ಯ ಬಲ ಹೊಂದಿರುವ ಪಕ್ಷಕ್ಕೇ ಸಭಾಪತಿ ಸ್ಥಾನ ಸಿಗಬೇಕು ಎಂಬ ಹಠ ಕಾಂಗ್ರೆಸ್ ನಲ್ಲಿ ಬಲವಾಗಿದೆ. ಕೆಸಿ ಕೊಂಡಯ್ಯ ಉಪಸಭಾಪತಿಯಾಗಿ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.