ಭೀಕರ ಬರ : ಸಿದ್ದರಾಮಯ್ಯ ಜೊತೆ ಮೋದಿ ಸಭೆ
ನವದೆಹಲಿ, ಮೇ 07 : ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿರುವ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದಾರೆ. ಭೀಕರ ಬರ ಎದುರಿಸುತ್ತಿರುವ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 1000 ಕೋಟಿ ರೂ.ಗಳ ಅನುದಾನ ನೀಡುವಂತೆ ಸಿದ್ದರಾಮಯ್ಯ ಅವರು ಮನವಿ ಮಾಡಲಿದ್ದಾರೆ.
ರಾಜ್ಯಗಳ
ಬರ
ಪರಿಸ್ಥಿತಿ
ಬಗ್ಗೆ
ಮಾಹಿತಿ
ಪಡೆಯಲು
ಶನಿವಾರ
ಪ್ರಧಾನಿ
ಮೋದಿ
ಮಹಾರಾಷ್ಟ್ರ,
ಕರ್ನಾಟಕ
ಮತ್ತು
ಉತ್ತರ
ಪ್ರದೇಶದ
ಮುಖ್ಯಮಂತ್ರಿಗಳ
ಜೊತೆ
ಸಭೆ
ನಡೆಸುತ್ತಿದ್ದಾರೆ.
ಕರ್ನಾಟಕದ
ಪರವಾಗಿ
ಸಿದ್ದರಾಮಯ್ಯ
ಮತ್ತು
ಸರ್ಕಾರದ
ಮುಖ್ಯ
ಕಾರ್ಯದರ್ಶಿ
ಅರವಿಂದ್
ಜಾಧವ್
ಅವರು
ಸಭೆಯಲ್ಲಿ
ಪಾಲ್ಗೊಂಡಿದ್ದಾರೆ.
[ಕುಡಿಯುವ
ನೀರಿನ
ನಿರೀಕ್ಷೆಯಲ್ಲಿ
ಖಾಲಿ
ಬಿಂದಿಗೆ
ಸಾಲು]
ಬರ ಪರಿಹಾರ ಕಾರ್ಯಕ್ಕಾಗಿ ಕೇಂದ್ರ ಸರ್ಕಾರ ಮೊದಲ ಕಂತಿನಲ್ಲಿ ನೀಡಿದ 1,540 ಕೋಟಿ ರೂಗಳನ್ನು ರೈತರ ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ರೂಪವಾಗಿ ಒದಗಿಸಲಾಗಿದೆ. ಉಳಿದಂತೆ ಎರಡನೇ ಕಂತಿನಲ್ಲಿ 723 ಕೋಟಿ ರೂ. ಹಣವನ್ನು ಇನ್ನೂ ಬಿಡುಗಡೆ ಮಾಡಬೇಕಿದೆ.[ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]
ಆದರೆ,
ಬರ
ಪರಿಹಾರ
ಕಾರ್ಯಗಳಿಗೆ
ಇಷ್ಟು
ಹಣ
ಸಾಕಾಗುವುದಿಲ್ಲ.
1000
ಕೋಟಿ
ಹಣವನ್ನು
ಹೆಚ್ಚುವರಿಯಾಗಿ
ನೀಡಬೇಕು
ಎಂದು
ಸಿದ್ದರಾಮಯ್ಯ
ಅವರು
ಮನವಿ
ಮಾಡಲಿದ್ದಾರೆ.
ಸ್ವತಃ
ಪ್ರಧಾನಿಗಳೇ
ಈ
ಸಭೆ
ಕರೆದಿರುವುದರಿಂದ
ಬೇಡಿಕೆಗೆ
ಒಪ್ಪಿಗೆ
ಸಿಗುವ
ಸಾಧ್ಯತೆಯೂ
ಇದೆ.
['ಪ್ರತಿ
ಕುಟುಂಬಕ್ಕೆ
ಕನಿಷ್ಠ
12
ಬಿಂದಿಗೆ
ನೀರು
ನೀಡಿ']
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಏ.15 ರಿಂದ ಏ.17, ಏಪ್ರಿಲ್ 25 ರಿಂದ 27ರವರೆಗೆ ಎರಡು ಹಂತದಲ್ಲಿ ರಾಜ್ಯಪ್ರವಾಸ ಮಾಡಿ ಬರಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ. ಮೇ ತಿಂಗಳಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳ ಪ್ರವಾಸ ಮಾಡಿದ್ದಾರೆ. ಪ್ರವಾಸದಲ್ಲಿ ತಾವು ಕಂಡ ಬರಪರಿಸ್ಥಿತಿ ಬಗ್ಗೆಯೂ ಸಿದ್ದರಾಮಯ್ಯ ವಿವರಣೆ ನೀಡಲಿದ್ದಾರೆ.