ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಕೈ ಹಿಡಿಯಿರಿ: ಮಳೆಯಿಂದ ತತ್ತರಿಸುವವರಿಗೆ ಸಹಾಯ ಮಾಡಿ

By Manjunatha
|
Google Oneindia Kannada News

ಕೊಡಗು, ಆಗಸ್ಟ್ 17: ಸತತ ಮಳೆಯಿಂದ ಮನೆ, ಜೀವ ರಾಶಿಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಒದ್ದಾಡುತ್ತಿರುವ ಕೊಡಗು ಸೇರಿದಂತೆ ಕರಾವಳಿ ಜಿಲ್ಲೆಯ ಜನರಿಗೆ ನೆರವಿಸ ಹಸ್ತದ ಅವಶ್ಯಕತೆ ಇದೆ.

ಮನೆಗಳಿಗೆ ನೀರು ನುಗ್ಗಿ , ಅಡುಗೆ ಮಾಡುವುದಿರಲಿ, ನಿಲ್ಲಲೂ ಜಾಗವಿಲ್ಲದೆ ಜನ ಒದ್ದಾಡುತ್ತಿದ್ದಾರೆ. ಎನ್‌ಡಿಆರ್ಎಫ್, ಸೇನಾ ಸಿಬ್ಬಂದಿ, ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರಾದರೂ ಸುರಿಯುತ್ತಿರುವ ಸತತ ಮಳೆ ರಕ್ಷಣಾ ಕಾರ್ಯಕ್ಕೆ ತೀವ್ರ ಅಡೆತಡೆ ಮಾಡಿದೆ.

ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ

ಮಳೆಯಿಂದ ತೀವ್ರವಾಗಿ ತತ್ತರಿಸುವ ಕೊಡಗು ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ನೆರವಿನ ಅಗತ್ಯವಿದ್ದು, ಸಾರ್ವಜನಿಕರು ನೆರವಿನ ಹಸ್ತ ಚಾಚಬೇಕಿದೆ.

Donate to help rain victims of Kodagu and other coastal districts

ಯುನೈಟೆಡ್ ವೇ ಬೆಂಗಳೂರು ಕೊಡಗು ಸೇರಿದಂತೆ ಮಳೆ ಪೀಡಿತ ಜಿಲ್ಲೆಗಳಿಗೆ ನೆರವು ಸಂಗ್ರಹಿಸುತ್ತಿದ್ದು, ಆಸಕ್ತರು ಯುನೈಟೆಡ್ ವೇ ಬೆಂಗಳೂರು ವೆಬ್‌ಸೈಟ್‌ನಲ್ಲಿ ಧನ ಸಹಾಯ ಮಾಡಬಹುದು.

ಕೊಡಗಿನಲ್ಲಿ ಮಳೆ ರೌದ್ರಾವತಾರ, ಸಂರಕ್ಷಣೆ ಕಾರ್ಯ ವಿಳಂಬಕೊಡಗಿನಲ್ಲಿ ಮಳೆ ರೌದ್ರಾವತಾರ, ಸಂರಕ್ಷಣೆ ಕಾರ್ಯ ವಿಳಂಬ

ದಾನಿಗಳು ನೀಡಿದ ಹಣವನ್ನು ಕರಾವಳಿ ಜಿಲ್ಲೆಗಳ ಮಳೆ ಸಂತ್ರಸ್ತರಿಗೆ ಹಾಗೂ ಕೇರಳದ ಮಳೆ ಸಂಸ್ಥಸ್ತರ ಊಟ, ವಸತಿ, ಆರೋಗ್ಯಕ್ಕಾಗಿ ಬಳಸಲಾಗುತ್ತದೆ. ಆಸಕ್ತರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಮೂಲಕವೂ ಧನ ಸಹಾಯ ಮಾಡಬಹುದು.

ಯುನೈಟೆಡ್ ವೇ ಬೆಂಗಳೂರು ವೆಬ್‌ವಿಳಾಸ : uwbengaluru.org/flood-relief/

English summary
Donate to help rain victims of Coastal districts of Karnataka and Kerala. People can visit United way Bengaluru website and donate money to help rain victims of Kodagu and other coastal Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X