ಅಳುಮುಂಜಿ ಆಗ್ಬೇಡಿ: ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಸಲಹೆ!
Recommended Video
ಬೆಂಗಳೂರು, ಮೇ 17: 'ಬಳೆ ತೊಟ್ಟುಕೊಳ್ಳಿ' ಎಂದು ಸಿದ್ದರಾಮಯ್ಯ ಅವರ ಕೋಪಕ್ಕೆ ಕಾರಣರಾಗಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಅವರ ಉತ್ತರಕ್ಕೆ ಪ್ರತ್ಯುತ್ತರ ನೀಡಿದ್ದಾರೆ.
"ಇಂದಿರಾ ಗಾಂಧಿ, ನಿರ್ಮಲಾ ಸೀತಾರಾಮ್ ಅಥವಾ ಸುಷ್ಮಾ ಸ್ವರಾಜ್ ಅವರ ಹೆಜ್ಜೆಗುರುತನ್ನು ಅನುಸರಿಸಿ. ಯಾವಾಗಲೂ ನಮ್ಮ ಶಾಸಕರು ಬಿ ಎಸ್ ಯಡಿಯೂರಪ್ಪ ಅವರ ಹಿಂದೆ ಹೋಗುತ್ತಿದ್ದಾರೆ ಎಂದು ಅಳುವುದನ್ನು ಬಿಡಿ. ಮತ್ತೊಬ್ಬರನ್ನು ತೆಗಳುವ ಮೊದಲು ನಿಮ್ಮ ಶಾಸಕರನ್ನು ನೀವೇ ನಿಯಂತ್ರಿಸಿ. ಕೇವಲ ಅಳುಮುಂಜಿ ಆಗ್ಬೇಡಿ!" ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
'ಬಳೆ ತೊಟ್ಟುಕೊಳ್ಳಿ' ಎಂದ ಶೋಭಾಗೆ ಸಿದ್ದರಾಮಯ್ಯ ಕ್ಲಾಸ್
Siddaramaiah avare,
— Chowkidar Shobha Karandlaje (@ShobhaBJP) May 16, 2019
Please follow the footsteps of Mrs Indira Gandhi or take inspirations from @nsitharaman ji& @SushmaSwaraj ji.
Don't cry out every time telling our MLAs are going with Sri @BSYBJP, Instead of blaming, have some spine &control your MLAs.
Just ಅಳುಮುಂಜಿ ಆಗ್ಬೇಡಿ! https://t.co/cHZiPkpXx7
ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, "ನಿಮ್ಮ ಪಕ್ಷದ ಶಾಸಕರನ್ನು ಹಿಂಡಿದಿಟ್ಟುಕೊಳ್ಳುವುದು ನಿಮ್ಮ ಕೆಲಸ. ಅವರನ್ನು ಹಿಡಿದಿಟ್ಟುಕೊಳ್ಳಲು ಆಗದ ನೀವು ದುರ್ಬಲರು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ಹಾಕಿಕೊಳ್ಳಿ" ಎಂಬ ಹೇಳಿಕೆ ನೀಡಿದ್ದರು.
ರೇವಣ್ಣನೂ ಸಿಎಂ ಆಗಬೇಕಿತ್ತು: HDK ಗೆ ಸಿದ್ದು ಭರ್ಜರಿ ಟಾಂಗ್!
ಅದಕ್ಕೆ ಉತ್ತರ ನೀಡಿದ್ದ ಸಿದ್ದರಾಮಯ್ಯ, "ಕುಮಾರಿ ಶೋಭಾ ಕರಂದ್ಲಾಜೆ ಅವರೇ, ಓರ್ವ ಹೆಣ್ಣಾಗಿ ತಾವು ಮಹಿಳಾ ಸಂಕುಲವೇ ಅಸಮರ್ಥರು ಎಂಬಂತೆ ಕೀಳು ಹೇಳಿಕೆ ನೀಡಿರುವುದು ಸರಿಯಲ್ಲ. ಸಂಸದರಾಗಿ ತಾವೊಬ್ಬರು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಮಾತ್ರಕ್ಕೆ ಬಳೆ ತೊಟ್ಟವರೆಲ್ಲ ಕೆಲಸ ಮಾಡಲಾಗದವರು ಎಂದಲ್ಲ. ನೆನಪಿರಲಿ, ಚೆನ್ನಮ್ಮ,ಓಬವ್ವ, ಇಂದಿರಾಗಾಂಧಿ ಇವರೆಲ್ಲ ಬಳೆ ತೊಟ್ಟೆ ಸಾಧನೆಯ ಉತ್ತುಂಗಕ್ಕೇರಿದವರು" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.