ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರಿಗೆ, ಎಲ್ಲಿ, ಹೇಗೆ ಉತ್ತರಿಸಬೇಕು ಗೊತ್ತಿದೆ: ಡಿಕೆ.ಶಿವಕುಮಾರ್‌

|
Google Oneindia Kannada News

ಬೆಂಗಳೂರು, ಫೆಬ್ರವರಿ 02: ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಬೇತಾಳ ಸದ್ಯಕ್ಕೆ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಡಿ.ಕೆ.ಶಿ ಮತ್ತು ಕುಟುಂಬಕ್ಕೆ ಇಡಿ ಇಂದು ಸಮನ್ಸ್‌ ನೀಡಿದ್ದು ವಿಚಾರಣೆಗೆ ಬರುವಂತೆ ಹೇಳಿದೆ.

ಡಿಕೆ ಶಿವಕುಮಾರ್‌ಗೆ ಇಡಿಯಿಂದ ಸಮನ್ಸ್ ಜಾರಿ, ಏನಿದು ಪ್ರಕರಣ?ಡಿಕೆ ಶಿವಕುಮಾರ್‌ಗೆ ಇಡಿಯಿಂದ ಸಮನ್ಸ್ ಜಾರಿ, ಏನಿದು ಪ್ರಕರಣ?

ಡಿ.ಕೆ.ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ನಡೆದ ದಾಳಿಯ ಬಗ್ಗೆ ಈ ತನಿಖೆಗೆ ಈ ನೊಟೀಸ್ ನೀಡಲಾಗಿದೆ. ಡಿಕೆಶಿ ದೆಹಲಿ ನಿವಾಸದಲ್ಲಿ ಹಣ ಮತ್ತು ಕೆಲವು ದಾಖಲೆಗಳು ದೊರೆತಿದ್ದವು ಎನ್ನಲಾಗಿತ್ತು.

ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ: ಮೌನವೇ ಉತ್ತರ ಎಂದ ಡಿಕೆಶಿ! ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ: ಮೌನವೇ ಉತ್ತರ ಎಂದ ಡಿಕೆಶಿ!

ಸಮನ್ಸ್‌ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್ ಅವರು, ಬರಬೇಕಿದ್ದ ಎಲ್ಲ ಸಮನ್ಸ್‌, ನೊಟೀಸ್‌ಗಳು ಬಂದಿವೆ. ನಾನು ಇಲ್ಲಿ ಏನೂ ಮಾತನಾಡುವುದಿಲ್ಲ, ಯಾರಿಗೆ, ಎಲ್ಲಿ, ಹೇಗೆ, ಉತ್ತರಿಸಬೇಕೋ ಹಾಗೆಯೇ ಉತ್ತರಿಸುತ್ತೇನೆ ಎಂದು ಆತ್ಮವಿಶ್ವಾಸದಿಂದಲೇ ನುಡಿದಿದ್ದಾರೆ.

DK Shivakumar summoned by enforcement department

ಡಿ.ಕೆ.ಶಿವಕುಮಾರ್‌ ಅವರಿಗೆ ಇಡಿ ಸಮನ್ಸ್‌ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಾವುದೇ ಸಮಸ್ಯೆ ಬರಲಿ ಡಿ.ಕೆ.ಶಿವಕುಮಾರ್ ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತಾರೆ ಎಂದಿದ್ದಾರೆ . ಅಲ್ಲದೆ ಬಿಜೆಪಿಯು ಐಟಿ, ಇಡಿ, ಸಿಬಿಐ ಬಳಸಿಕೊಂಡು ದ್ವೇಷ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.

English summary
Minister DK Shivakumar summoned by enforcement department about his Delhi residence raid case. DK Shivkuamr said i will answer to every questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X