ಕೆಎಸ್ಆರ್ಟಿಸಿ, ಬಿಎಂಟಿಸಿ ಖಾಸಗೀಕರಣಗೊಳಿಸಲು ನಡೆಯುತ್ತಿದೆ ಒಳಸಂಚು:ಡಿಕೆ ಶಿವಕುಮಾರ್
ಬೆಂಗಳೂರು, ಏಪ್ರಿಲ್ 12: 'ರಾಜ್ಯದಲ್ಲಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಖಾಸಗೀಕರಣಕ್ಕೆ ಒಳಸಂಚು ನಡೆಯುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯದ ಆಡಳಿತ ಕುಸಿದು ಹೋಗಿದೆ, ಈ ವರ್ಷ ನಡೆದಷ್ಟು ಪ್ರತಿಭಟನೆ ,ಚಳವಳಿಗಳು ಎಂದೂ ನಡೆದಿಲ್ಲ. ಮಾತು ಕೊಟ್ಟು ಅದರಂತೆ ಸರ್ಕಾರ ನಡೆದಿಲ್ಲ. ಎಲ್ಲ ವರ್ಗದವರಿಗೂ ಸಮಸ್ಯೆ ತಂದೊಡ್ಡಿದ್ದಾರೆ ಎಂದು ಆರೋಪಿಸಿದರು.
ಸಾರಿಗೆ ನೌಕರರ ಮುಷ್ಕರ ಸೋಮವಾರ ಅಂತ್ಯ?
ಮೂರು ಉಪಚುನಾವಣೆ ಪ್ರವಾಸ ಮಾಡಿ ಬಂದಿದ್ದೇನೆ, ಎಲ್ಲಾ ಕಡೆ ಈ ರಾಜ್ಯದಲ್ಲಿ ಬದಲಾವಣೆ ತರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗ್ತಿದೆ.
ಸಾರಿಗೆ ನೌಕರರ ಸಮಸ್ಯೆ ಆಲಿಸಬೇಕಿತ್ತು
ಸಾರಿಗೆ ನೌಕರರ ಸಮಸ್ಯೆಯನ್ನು ಸರ್ಕಾರ ಆಲಿಸಬೇಕಿತ್ತು, ಆದರೆ ಅದನ್ನು ಬಿಟ್ಟು ಸಾರಿಗೆಯನ್ನು ಖಾಸಗಿಯವರ ಕೈಗಿಡಲು ಹೊರಟಿದ್ದಾರೆ. ಕೆ.ಎಸ್ ಆರ್ ಟಿ ಸಿ , ಬಿಎಂಟಿಸಿಯನ್ನು ಖಾಸಗಿಯವರಿಗೆ ಮಾರುವ ಒಳಸಂಚು ನಡೆದಿದೆ ಎಂದರು.
ಮಸ್ಕಿ ಅಭ್ಯರ್ಥಿಯನ್ನು ಅನರ್ಹ ಎಂದು ಘೋಷಿಸಬೇಕು
ಮಸ್ಕಿ ಅಭ್ಯರ್ಥಿಯನ್ನು ಅನರ್ಹ ಎಂದು ಘೋಷಣೆ ಮಾಡಬೇಕು.ಏಕಾಂದರೆ ಸಮಾರಂಭಕ್ಕೆ ಬರಲು 300 ರೂಪಾಯಿ ಹಂಚುತ್ತಿದ್ದಾರೆ, ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಈ ವಿಡಿಯೋ ಕೂಡಾ ವೈರಲ್ ಆಗುತ್ತಿದೆ, ಮುಖ್ಯಮಂತ್ರಿಗಳೇ ಜಾತಿ ಸಭೆಗಳನ್ನು ನಡೆಸುತ್ತಿದ್ದಾರೆ. ಸಿಎಂಗೂ ಸೋಲಿನ ಭಯ ಕಾಡುತ್ತಿದೆ ಎಂದರು.
ಮುಷ್ಕರ; ಕೆಲಸಕ್ಕೆ ಬಂದ ನೌಕರರಿಗೆ ಮಾರ್ಚ್ ತಿಂಗಳ ವೇತನ
ಚುನಾವಣೆಗೆ ಸರ್ಕಾರದ ಅಧಿಕಾರಿಗಳ ದುರ್ಬಳಕೆ
ಚುನಾವಣೆಗೆ ಸರ್ಕಾರದ ಎಲ್ಲಾ ಅಧಿಕಾರಿಗಳನ್ನು ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸಿದರು. ಒಬ್ಬ ಮುಖ್ಯಮಂತ್ರಿಯಾಗಿ ಚುನಾವಣಾ ಸಂದರ್ಭದಲ್ಲಿ ಜಾತಿ ಸಭೆಗಳನ್ನು ನಡೆಸಲು ಅವಕಾಶ ಇಲ್ಲ. ಈ ನಿಟ್ಟಿನಲ್ಲಿ ಚುನಾವಣೆ ಆಯೋಗ ಸಿಎಂ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
Recommended Video
ಸರ್ಕಾರದ ಬಗ್ಗೆ ಸಿಟ್ಟಿದೆ
ಸರ್ಕಾರದ ಬಗ್ಗೆ ತುಂಬಾ ಕೋಪವಿದೆ, ಈ ಚುನಾವಣೆಗಳಲ್ಲಿ ನಮಗೆ ಅಪಾರ ಪ್ರೀತಿ ಅಭಿಮಾನ ಜನ ತೋರಿಸುತ್ತಿದ್ದಾರೆ. ನಾವು ಖಂಡಿತ ಎಲ್ಲಾ ಚುನಾವಣೆ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.