ಡಿಕೆ ರವಿ ಕೇಸ್ : ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥ
ಬೆಂಗಳೂರು, ಏ. 10 : ಐಎಎಸ್ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ತನಿಖೆಯ ಅಂಶಗಳನ್ನು ಬಹಿರಂಗಪಡಿಸಬಾರದು ಎಂದು ಸುಧೀರ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಗೊಳಿಸಿದೆ. ತನಿಖೆಯ ಅಂಶಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ.
ಐಎಎಸ್
ಅಧಿಕಾರಿ
ರೋಹಿಣಿ
ಸಿಂಧೂರಿ
ಪತಿ
ಸುಧೀರ್
ರೆಡ್ಡಿ
ಸಲ್ಲಿಸಿದ್ದ
ಅರ್ಜಿಯನ್ನು
ನ್ಯಾಯಮೂರ್ತಿ
ಎಸ್.ಅಬ್ದುಲ್
ನಜೀರ್
ಅವರ
ನ್ಯಾಯಪೀಠ
ಗುರುವಾರ
ಇತ್ಯರ್ಥಗೊಳಿಸಿದೆ.
ಸರ್ಕಾರ
ತನಿಖೆಯ
ಅಂಶಗಳನ್ನು
ಬಹಿರಂಪಡಿಸುವುದಿಲ್ಲ
ಎಂದು
ಹೆಚ್ಚುವರಿ
ಅಡ್ವೊಕೇಟ್
ಜನರಲ್
ಎ.ಎಸ್.ಪೊನ್ನಣ್ಣ
ನ್ಯಾಯಾಲಯಕ್ಕೆ
ಮುಚ್ಚಳಿಕೆ
ನೀಡಿದ್ದಾರೆ.
[ರವಿ
ಮಾಹಿತಿ
ಲೀಕ್:
ನ್ಯಾಯಾಂಗ
ನಿಂದನೆ
ಕೇಸ್]
ಡಿಕೆ ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿದೆ. ಆದ್ದರಿಂದ, ಸಿಐಡಿ ಸಾವಿನ ಕುರಿತು ಯಾವುದೇ ತನಿಖಾ ವರದಿ ಸಿದ್ಧಪಡಿಸುವುದಿಲ್ಲ ಮತ್ತು ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಮುಚ್ಚಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಲಾಗಿದೆ. [ಮೃತ ಡಿಕೆ ರವಿಯ ಖಾಸಗಿ ವಿಷಯಗಳು ಬಹಿರಂಗ]
ಅರ್ಜಿದಾರರ ಒಪ್ಪಿಗೆ : ಸರ್ಕಾರವೇ ಯಾವುದೇ ಮಾಹಿತಿ ಬಹಿರಂಗ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಅರ್ಜಿಯನ್ನು ಮಾನ್ಯ ಮಾಡುವುದಿಲ್ಲ ಎಂದು ಕೋರ್ಟ್ ಹೇಳಿತು. ಅರ್ಜಿದಾರರ ಪರ ವಕೀಲರಾದ ಸಜ್ಜನ್ ಪೂವಯ್ಯ ಸಹ ಇದಕ್ಕೆ ಒಪ್ಪಿಗೆ ನೀಡಿದರು ಆದ್ದರಿಂದ ಅರ್ಜಿ ಇತ್ಯರ್ಥಗೊಂಡಿದೆ.[ಡಿಕೆ ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ?]
ಡಿಕೆ ರವಿ ಪ್ರಕರಣದ ಸಿಐಡಿ ತನಿಖೆ ನಡೆಯುವ ಸಂದರ್ಭದಲ್ಲಿ ತನಿಖೆಯ ಮಾಹಿತಿಗಳನ್ನು ಬಹಿರಂಗ ಮಾಡಬಾರದು. ಮಹಿಳಾ ಅಧಿಕಾರಿ ಬಗ್ಗೆ ಕೇಳಿಬಂದಿರುವ ಊಹಾಪೋಹಗಳ ಕುರಿತು ಸರ್ಕಾರ ಅಥವಾ ಯಾವುದೇ ಅಧಿಕಾರಿಗಳು ಹೇಳಿಕೆ ನೀಡದಂತೆ ನಿರ್ದೇಶನ ನೀಡಬೇಕೆಂದು ಕೋರಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.