ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಆಯುಕ್ತರ ವಿರುದ್ಧ ರಾಷ್ಟ್ರಪತಿಗೆ ದಿನೇಶ್ ಗುಂಡೂರಾವ್ ಪತ್ರ

|
Google Oneindia Kannada News

ಬೆಂಗಳೂರು, ಮಾರ್ಚ್ 30: ಕರ್ನಾಟಕ-ಗೋವಾ ವೃತ್ತದ ಆದಾಯ ತೆರಿಗೆ ಆಯುಕ್ತ ಬಾಲಕೃಷ್ಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಷ್ಟ್ರಪತಿ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಆಪ್ತರ ಮೇಲೆ ಮೊನ್ನೆಯಷ್ಟೆ ನಡೆದ ಐಟಿ ದಾಳಿಗಳು ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಮತದಾನ ಕೆಲವೇ ದಿನಗಳಿರುವಾಗ ರಾಜಕೀಯವಾಗಿ ನಮಗೆ ಹಾನಿ ಉಂಟು ಮಾಡಲೆಂದು ದುರುದ್ದೇಶಪೂರ್ವಕವಾಗಿ ಈ ದಾಳಿಗಳನ್ನು ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಿಎಸ್‌ವೈ, ಈಶ್ವರಪ್ಪ ಮೇಲೆ ಐಟಿ ದಾಳಿ ಯಾಕಿಲ್ಲ? ಸಿದ್ದರಾಮಯ್ಯ ಪ್ರಶ್ನೆ ಬಿಎಸ್‌ವೈ, ಈಶ್ವರಪ್ಪ ಮೇಲೆ ಐಟಿ ದಾಳಿ ಯಾಕಿಲ್ಲ? ಸಿದ್ದರಾಮಯ್ಯ ಪ್ರಶ್ನೆ

ರಾಷ್ಟ್ರಪತಿ ರಮಾನಾಥ ಕೋವಿಂದ್, ಕೇಂದ್ರ ಚುನಾವಣಾ ಆಯೋಗ, ಸಿಬಿಡಿಟಿಗೆ ಪತ್ರ ಬರೆದಿರುವ ದಿನೇಶ್ ಗುಂಡೂರಾವ್ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಗೋವಾ-ಕರ್ನಾಟಕ ವೃತ್ತದ ಐಟಿ ಆಯುಕ್ತರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

Dinesh Gundu Rao writes letter against IT commissioner

ಗೋವಾ-ಕರ್ನಾಟಕ ವೃತ್ತದ ಐಟಿ ಆಯುಕ್ತರ ಪ್ರಾಮಾಣಿಕತೆ ಅನುಮಾನಸ್ಪತವಾಗಿದ್ದು, ಅವರು ಜೆಡಿಎಸ್-ಕಾಂಗ್ರೆಸ್‌ ವಿರುದ್ಧ ಹಗೆತನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ, ಆಯುಕ್ತ ಬಾಲಕೃಷ್ಣ ಅವರು ಬಜೆಪಿಯ ಏಜೆಂಟ್‌ ಅಂತೆ ವರ್ತಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

English summary
KPCC president Dinesh Gundu Rao writes letter against Karnataka-Goa circle IT commissioner. He writes letter to President Koving, Election commission and CBDT.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X