ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಪೀಡಿತರಿಗೆ ನೆರವು ನೀಡುವಂತೆ ಸಿಎಂ ಮೇಲೆ ಕಾಂಗ್ರೆಸ್ ಒತ್ತಡ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 16: ಮಳೆ ಪೀಡಿತರಿಗೆ ವಿಶೇಷ ಪ್ಯಾಕೆಜ್ ಮೂಲಕ ಅನುದಾನ ನೀಡುವಂತೆ ಕಾಂಗ್ರೆಸ್ ಪಕ್ಷವು ಸಿಎಂ ಕುಮಾರಸ್ವಾಮಿ ಅವರನ್ನು ಮನವಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗುಂಡೂರಾವ್ ಅವರು, ಭಾರಿ ಮಳೆಯು ಕೊಡಗು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಹಾನಿ ಉಂಟುಮಾಡಿದೆ ಜನರ ಜೀವನವನ್ನು ಛಿಧ್ರ ಮಾಡಿದೆ ಎಂದಿದ್ದಾರೆ.

ಅಬ್ಬಾಬ್ಬಾ ಉಡುಪಿ ಜಿಲ್ಲೆಯಲ್ಲಿ ಮಹಾಮಳೆಗೆ 40 ಕೋಟಿ ನಷ್ಟ!ಅಬ್ಬಾಬ್ಬಾ ಉಡುಪಿ ಜಿಲ್ಲೆಯಲ್ಲಿ ಮಹಾಮಳೆಗೆ 40 ಕೋಟಿ ನಷ್ಟ!

ಕಾಂಗ್ರೆಸ್ ಪಕ್ಷವು ಸಿಎಂ ಮೇಲೆ ಒತ್ತಡ ಹೇರಲಿದೆ ಎಂದಿರುವ ಬೆನ್ನಲ್ಲೆ, ರಾಜ್ಯ ಬಿಜೆಪಿಯು ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹೇರಿ ಮಳೆ ಪೀಡಿತರಿಗಾಗಿ ವೀಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ನೆರವು ನೀಡುವುದಾಗಿ ಮೋದಿ ಹೇಳಿದ್ದರು

ನೆರವು ನೀಡುವುದಾಗಿ ಮೋದಿ ಹೇಳಿದ್ದರು

ನಿನ್ನೆಯಷ್ಟೆ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಮಾತನಾಡಿದ್ದ ಮೋದಿ, ಮಳೆಯಿಂದ ಹಾನಿಗೊಳಗಾದವರ ಸಹಾಯಕ್ಕೆ ಕೇಂದ್ರ ಬದ್ಧವಾಗಿದೆ ಎಂದಿದ್ದರು. ಅದರ ಬೆನ್ನಲ್ಲೇ ದಿನೇಶ್ ಗುಂಡೂರಾವ್ ಅವರು ಹೀಗೊಂದು ಮನವಿ ಮಾಡಿದ್ದಾರೆ.

ವಿಶೇಷ ನೆರವು ಘೋಷಣೆ ಸಾಧ್ಯತೆ

ವಿಶೇಷ ನೆರವು ಘೋಷಣೆ ಸಾಧ್ಯತೆ

ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಆದರೆ ಈ ವರೆಗೆ ವಿಶೇಷ ಆರ್ಥಿಕ ನೆರವನ್ನು ಸಿಎಂ ಘೋಷಿಸಿಲ್ಲ, ಕಾಂಗ್ರೆಸ್ ಪಕ್ಷವು ಮಳೆ ಪೀಡಿತರಿಗೆ ವಿಶೇಷ ನೆರವು ನೀಡುವಂತೆ ಒತ್ತಾಯ ಹೇರುತ್ತಿದ್ದು, ಸಿಎಂ ಕೆಲವೇ ದಿನಗಳಲ್ಲಿ ಈ ಬಗ್ಗೆ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ: ಕಟ್ಟೆಚ್ಚರ ವಹಿಸಲು ಮುಖ್ಯಮಂತ್ರಿ ಸೂಚನೆವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ: ಕಟ್ಟೆಚ್ಚರ ವಹಿಸಲು ಮುಖ್ಯಮಂತ್ರಿ ಸೂಚನೆ

ಯಾವ ಜಿಲ್ಲೆಗಳಲ್ಲಿ ಮಳೆ ಹೆಚ್ಚು

ಯಾವ ಜಿಲ್ಲೆಗಳಲ್ಲಿ ಮಳೆ ಹೆಚ್ಚು

ಚಿಕ್ಕಮಗಳೂರು, ಉಡುಪಿ, ಕೊಡಗು, ಮಂಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ತನ್ನ ರೌದ್ರಾವತಾರ ತೋರಿದ್ದು, ಹಲವು ರಸ್ತೆಗಳು, ಸೇತುವೆಗಳು ಮಳೆಯಿಂದಾಗಿ ಮುಳುಗಿ ಹೋಗಿವೆ. ಹಲವು ಕಡೆ ಭೂ ಕುಸಿತಗಳು, ರಸ್ತೆ ಕುಸಿತ, ಗುಡ್ಡ ಕುಸಿತಗಳು ಆಗಿವೆ.

ಮೈಮಾನಿಕ ಸಮೀಕ್ಷೆಗೆ ಸೂಚನೆ

ಮೈಮಾನಿಕ ಸಮೀಕ್ಷೆಗೆ ಸೂಚನೆ

ಪ್ರವಾಹ ಪೀಡಿತ ಜಿಲ್ಲೆಗಳ ಸಮೀಕ್ಷೆಗೆ ಮೈಮಾನಿಕ ಸಮೀಕ್ಷೆ ಮಾಡಲು ಸಿಎಂ ಸೂಚಿಸಿದ್ದಾರೆ. ಅಲ್ಲದೆ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ಮಳೆಯಿಂದ ತೊಂದರೆಗೊಳಗಾದವರನ್ನು ಶೀಘ್ರವೇ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಹೇಳಿದ್ದಾರೆ. ಅಗತ್ಯತೆ ಇದ್ದಲ್ಲಿ ಗಂಜಿ ಕೇಂದ್ರ ತೆರೆಯುವಂತೆ ಹೇಳಿದ್ದಾರೆ.

English summary
KPCC president Dinesh Gundurao said congress will request CM Kumaraswamy to release special fund to rain affected districts. He also requst state BJP to pressure on PM Modi to announce special package to request affected people of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X