ಅನಂತಮೂರ್ತಿ ಅಂತಿಮ ನಮನದ ಚಿತ್ರಗಳು
ಬೆಂಗಳೂರು, ಆ. 23 : ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿಗೆ ಮುಖ್ಯಮತ್ರಿ ಸೇರಿದಂತೆ ರಾಜಕಾರಣಿಗಳು, ಚಿಂತಕರು, ರಂಗಕರ್ಮಿಗಳು ಸ್ವಾತಂತ್ರ್ಯ ಹೋರಾಟಗಾರರರು ಅಂತಿಮ ನಮನ ಸಲ್ಲಿಸಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗ ಮಂದಿರದಲ್ಲಿ ಅನಂತಮೂರ್ತಿಯವರ ಪಾರ್ಥಿವ ಶರೀರವನ್ನು ಶನಿವಾರ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಚಿತ್ರಗಳಲ್ಲಿ : ಯುಆರ್ ಅನಂತಮೂರ್ತಿಗೆ ಗಣ್ಯರ ಕಂಬನಿ
ಅನಂತದೆಡೆಗೆ ಪಯಣ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗ ಮಂದಿರದಲ್ಲಿ ಇಟ್ಟಿದ್ದ ಅನಂತಮೂರ್ತಿ ಪಾರ್ಥಿವ ಶರೀರ.
ಹರಿದು ಬಂದ ಜನಸಾಗರ
ಅನಂತಮೂರ್ತಿ ದರ್ಶನ ಪಡೆಯಲು ಸಂಸ ಬಯಲು ರಂಗ ಮಂದಿರಕ್ಕೆ ಹರಿದು ಬಂದ ಜನಸಾಗರ.
ಕ್ರಿಶ್ಚಿಯನ್ ಧರ್ಮಗುರು ಸಾಂತ್ವನ
ಅನಂತಮೂರ್ತಿ ಪತ್ನಿ ಪತ್ನಿ ಎಸ್ತರ್, ಪುತ್ರಿ ಅನುರಾಧಾ ಅವರಿಗೆ ಕ್ರಶ್ಚಿಯನ್ ಧರ್ಮಗುರು ಆರ್ಚ್ ಬಿಷಪ್ ಧೈರ್ಯ ತುಂಬಿದ
ಆರ್.ಅಶೋಕ್, ವಿ. ಸೋಮಣ್ಣ ಅವರಿಂದ ದರ್ಶನ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗ ಮಂದಿರದಲ್ಲಿ ಇಟ್ಟಿದ್ದ ಅನಂತಮೂರ್ತಿ ಪಾರ್ಥಿವ ಶರೀರಕ್ಕೆ ಬಿಜೆಪಿ ಮುಖಂಡರಾದ ಆರ್.ಅಶೋಕ್, ವಿ. ಸೋಮಣ್ಣ ನಮನ ಸಲ್ಲಿಸಿದರು.
ಸ್ನೇಹಿತನಿಗೆ ಸುಬ್ಬಣ್ಣ ಗಾಯನ ನಮನ
ಸ್ನೇಹಿತ ಅನಂತಮೂರ್ತಿಗೆ ಗಾಯನದ ಮೂಲಕ ನಮಿಸಿದ ಶಿವಮೊಗ್ಗ ಸುಬ್ಬಣ್ಣ ಮತ್ತು ಸಂಗಡಿಗರು.
ದುಖಃಪತ್ತ ಬಿ.ಜಯಶ್ರೀ
ಅನಂತಮೂರ್ತಿ ಅಂತಿಮ ದರ್ಶನಕ್ಕೆ ಬಂದಿದ್ದ ರಂಗಕರ್ಮಿ ಬಿ.ಜಯಶ್ರೀ ಗದ್ಗದಿತರಾದರು.
ಕೇಂದ್ರ ಸಚಿವ ಅನಂತಕುಮಾರ್ ನಮನ
ಕೇಂದ್ರ ಸಚಿವ ಅನಂತಕುಮಾರ್ ಸ್ವಾಭಿಮಾನದ ಸಾಹಿತಿಗೆ ನಮನ ಸಲ್ಲಿಸಿದರು.
ಸಾಂತ್ವನ ಹೇಳಿದ ದೇಶಪಾಂಡೆ
ಅನಂತಮೂರ್ತಿ ಪತ್ನಿ ಎಸ್ತರ್ ಅವರಗೆ ಸಾಂತ್ವನ ಹೇಳಿದ ಸಚಿವ ಆರ್.ವಿ.ದೇಶಪಾಂಡೆ.
ದರ್ಶನ ಪಡೆದ ಟಿ.ಬಿ.ಜಯಚಂದ್ರ
ಸ್ನೇಹಿತ ಅನಂತಮೂರ್ತಿಗೆ ಗಾಯನದ ಮೂಲಕ ನಮಿಸಿದ ಶಿವಮೊಗ್ಗ ಸುಬ್ಬಣ್ಣ ಮತ್ತು ಸಂಗಡಿಗರು.