ಧರ್ಮಸ್ಥಳದ ಯೋಜನೆಗೆ ಪ್ರತಿಷ್ಠಿತ ಸ್ಕಾಚ್ ಪ್ರಶಸ್ತಿ
ಧರ್ಮಸ್ಥಳ, ಜೂನ್ 23: ರಾಜ್ಯದ ಬಹುಪಾಲು ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 2014ನೇ ಸಾಲಿನ ರಾಷ್ಟ್ರೀಯ ಸ್ಕಾಚ್ ಆರ್ಥಿಕ ಸೇರ್ಪಡೆ ಪ್ರಶಸ್ತಿ ಲಭಿಸಿದೆ.
ಬಡವರ
ಸಬಲೀಕರಣಕ್ಕಾಗಿ
ನಾನಾ
ಯೋಜನೆಗಳನ್ನು
ಅನುಷ್ಠಾಣಗೊಳಿಸಿ
ಯಶಸ್ವಿಯಾಗಿರುವ
ಶ್ರೀ
ಕ್ಷೇತ್ರದ
ಗ್ರಾಮಾಭಿವೃದ್ಧಿ
ಯೋಜನೆಗೆ
ಸಂಸದೆ
ಮೀಲನಾಕ್ಷಿ
ಲೇಖಿ
ಮತ್ತು
ಮಾಜಿ
ಮಹಾಲೇಖಪಾಲ
ವಿನೋದ್
ರೈ
ಅವರು
ಕಳೆದ
ವಾರ
ಪ್ರಶಸ್ತಿ
ಪತ್ರ
ಮತ್ತು
ಫಲಕವನ್ನು
ಪ್ರದಾನ
ಮಾಡಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್ ಮಂಜುನಾಥ್ ಅವರು ದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಲ್ ಎಚ್ ಮಂಜುನಾಥ್ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಫಲವಾಗಿ ಆರಂಭವಾದ ಈ ಯೋಜನೆಯಿಂದಾಗಿ ಕರ್ನಾಟಕದಲ್ಲಿಂದು 31 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಆರ್ಥಿಕ ಕ್ಷೇತ್ರದ ಮುಖ್ಯವಾಹಿನಿಗೆ ಬಂದಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕನಸನ್ನು ನನಸುಗೊಳಿಸಿದ 16 ಸಾವಿರ ಕಾರ್ಯಕರ್ತರಿಗೂ ಮತ್ತು ಯೋಜನೆಯ ಎಲ್ಲ ಟ್ರಸ್ಟಿಗಳಿಗೂ ಈ ಪ್ರಶಸ್ತಿಯನ್ನು ಸಮರ್ಪಿಸುವುದಾಗಿ ಡಾ. ಎಲ್ ಎಚ್ ಮಂಜುನಾಥ್ ಅವರು ಈ ಸಂದರ್ಭದಲ್ಲಿ ಹೇಳಿದರು. ಮೂರು ದಶಕಗಳ ಹಿಂದೆ ಆತಂಭವಾದ ಈ ಯೋಜನೆಯು 20 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಆಧಾರವಾಗಿದೆ. (ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ)
ಕೆನರಾ ಬ್ಯಾಂಕ್ ಅಧ್ಯಕ್ಷ ಆರ್ ಕೆ ದುಬೆ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಯೋಕೋ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, 30ಕ್ಕೂ ಹೆಚ್ಚು ಸಂಖ್ಯೆಯ ಗ್ರಾಮೀಣ ಬ್ಯಾಂಕುಗಳ ಅಧ್ಯಕ್ಷರು, ವಿಮಾ ಕಂಪನಿಗಳ ಅಧ್ಯಕ್ಷರು, ಸಿಡ್ಬಿ ಸಂಸ್ಥೆಯ ನಿರ್ದೇಶಕ ಮೇನಿ, ನಬಾರ್ಡ್ ಮುಖ್ಯಪ್ರಹಾಪ್ರಬಂಧಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.