ಸೈಕಲ್ ಏರಲು ಧನಂಜಯ್ ಕುಮಾರ್ ತಯಾರಿ?
ಬೆಂಗಳೂರು, ನ.4 : ಮಾಜಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಧನಂಜಯ್ ಕುಮಾರ್ ಸಮಾಜವಾದಿ ಪಕ್ಷ ಸೇರಲಿದ್ದಾರೆಯೇ?. ಪಕ್ಷ ಸೇರುವಂತೆ ಧನಂಜಯ್ ಕುಮಾರ್ ಅವರಿಗೆ ಈಗಾಗಲೇ ಸಮಾಜವಾದಿ ಪಕ್ಷದ ನಾಯಕರು ಆಹ್ವಾನ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅವರು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗುವ ಸಾಧ್ಯತೆ ಇದೆ.
ಮಾಜಿ
ಸಿಎಂ
ಬಿ.ಎಸ್.ಯಡಿಯೂರಪ್ಪ
ಅವರ
ಜೊತೆ
ಬಿಜೆಪಿ
ಬಿಟ್ಟು
ಕೆಜೆಪಿ
ಸೇರಿದ್ದ
ಧನಂಜಯ್
ಕುಮಾರ್,
ನಂತರ
ಬಿಜೆಪಿಗೆ
ಮರಳಲಿಲ್ಲ.
ಲೋಕಸಭೆ
ಚುನಾವಣೆ
ವೇಳೆ
ಜೆಡಿಎಸ್
ಸೇರಿ
ಉಡುಪಿ-ಚಿಕ್ಕಮಗಳೂರು
ಕ್ಷೇತ್ರದಲ್ಲಿ
ಸ್ಪರ್ಧಿಸಿ
14,895
ಮತಗಳನ್ನುಗಳಿಸಿ
ಚುನಾವಣೆಯಲ್ಲಿ
ಸೋಲು
ಅನುಭವಿಸಿದ್ದರು.
[ಲೋಕಸಭೆ
ಚುನಾವಣೆ
ಫಲಿತಾಂಶ]
ಆದರೆ, ಇತ್ತೀಚಿನ ಬೆಳವಣಿಗೆಯಂತೆ ದೆಹಲಿಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ಬಂದಿರುವ ಧನಂಜಯ್ ಕುಮಾರ್ ಸೈಕಲ್ ಪಕ್ಷ ಸೇರಲು ಮುಂದಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಧನಂಜಯ್ ಕುಮಾರ್ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಬಹುದು. [ಜೆಡಿಎಸ್ ಬಿಟ್ಟು ಹೋಗುವವರು ಸಂತೋಷದಿಂದ ಹೋಗಿ]
ಸೈಕಲ್ ಪಂಚರ್ : ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ನೆಲೆ ಕಂಡುಕೊಳ್ಳಲು ಪರದಾಡುತ್ತಿದೆ. ರಾಜ್ಯದ ಏಕೈಕ ಎಸ್ಪಿ ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಇನ್ನು ಉಳಿದವರು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತ್ರ.
ಕರ್ನಾಟಕದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಗೂಳಿಹಟ್ಟಿ ಶೇಖರ್ ಮತ್ತು ವಿ.ಧನಂಜಯ್ ಕುಮಾರ್ ಹೆಸರು ಕೇಳಿಬರುತ್ತಿದೆ. ಕಳೆದ ತಿಂಗಳು ಲಕ್ನೋದಲ್ಲಿ ನಡೆದ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿಯೂ ಗೂಳಿಹಟ್ಟಿ ಅವರು ಪಾಲ್ಗೊಂಡಿದ್ದರು.
ಇವುಗಳ ಮಧ್ಯೆಯೇ ಧನಂಜಯ್ ಕುಮಾರ್ ದೆಹಲಿಯಲ್ಲಿ ಮುಲಾಯಂ ಸಿಂಗ್ ಯಾದವ್ ಭೇಟಿ ಮಾಡಿದ್ದು, ಹೊಸ ಲೆಕ್ಕಾಚಾರ ಹುಟ್ಟುಹಾಕಿದೆ. ನ.28ರಂದು ಧನಂಜಯ್ ಕುಮಾರ್ ಪುತ್ರನ ವಿವಾಹವಿದ್ದು, ಅದರಲ್ಲಿ ಅವರು ಬ್ಯುಸಿಯಾಗಿದ್ದಾರೆ. ಅದು ಮುಗಿದ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಅಂದಹಾಗೆ ಅಬ್ದುಲ್ ಅಜೀಂ, ಸುನಿಲ್ ಹೆಗಡೆ ಈಗಾಗಲೇ ಜೆಡಿಎಸ್ ತೊರೆದಿದ್ದಾರೆ. ಧನಂಜಯ್ ಕುಮಾರ್ ಸೈಕಲ್ ಏರಿದರೆ ಅವರು ಪಕ್ಷ ತೊರೆಯುವುದು ಖಂಡಿತ. ಪಕ್ಷ ತೊರೆಯುವ ನಾಯಕರು ಸಂತೋಷದಿಂದ ಹೋಗಿ ಎಂದು ಎಚ್.ಡಿ.ದೇವೇಗೌಡರು ಈಗಾಗಲೇ ಖಡಕ್ ಸಂದೇಶ ರವಾನಿಸಿದ್ದಾರೆ. ಧನಂಜಯ್ ಕುಮಾರ್ ಪಕ್ಷ ತೊರೆಯುತ್ತಾರಾ?