ಉಪಚುನಾವಣೆ ಬಿಟ್ಟು ಲಂಡನ್ಗೆ ಹಾರುತ್ತಿದ್ದಾರೆ ದೇವೇಗೌಡರು
Recommended Video
ಬೆಂಗಳೂರು, ಅಕ್ಟೋಬರ್ 22: ರಾಜ್ಯದಲ್ಲಿ ಉಪಚುನಾವಣೆ ಕಾವು ದಿನೇ ದಿನೇ ರಂಗೇರುತ್ತಿದೆ. ಆದರೆ ಇಂತಹಾ ಮಹತ್ವದ ಸಮಯದಲ್ಲಿಯೇ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಲಂಡನ್ಗೆ ತೆರಳುತ್ತಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡ-ಸಿದ್ದರಾಮಯ್ಯ ಹೇಳಿದ್ದೇನು?
ಹೌದು, ಅಕ್ಟೋಬರ್ 24ರಿಂದ ಐದು ದಿನಗಳ ಕಾಲ ದೇವೇಗೌಡ ಅವರು ಲಂಡನ್ ಪ್ರವಾಸಕ್ಕೆ ತೆರಳುತ್ತಿದ್ದು, ಅಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳಲ್ಲಿ ಅವರು ಭಾಗಿ ಆಗಲಿದ್ದಾರೆ.
ಅಂದು ನೀಚ ಮುಖ್ಯಮಂತ್ರಿ ಅಂದಿದ್ದ ದೇವೇಗೌಡ್ರು ಈಗ ಅವರನ್ನ ಪಕ್ಕದಲ್ಲೇ ಕೂರ್ಸಿದ್ರು
ಅಕ್ಟೋಬರ್ 24ರಂದು ಬೆಂಗಳೂರಿನಿಂದ ತೆರಳಲಿರುವ ದೇವೇಗೌಡರು 25ರಂದು ಲಂಡನ್ನಲ್ಲಿ ನಡೆಯುವ ಗ್ಲೋಬಲ್ ಅಚಿವರ್ಸ್ ಕಾನ್ಕ್ಲೇವ್ನಲ್ಲಿ ಭಾಗವಹಿಸಲಿದ್ದಾರೆ. 26ರಂದು ಲಂಡನ್ನಲ್ಲಿಯೇ ತಂಗಲಿರುವ ದೇವೇಗೌಡರು ಲಂಡನ್ನಲ್ಲಿ ವಾಸವಿರುವ ಕನ್ನಡಿಗರನ್ನು ಭೇಟಿ ಆಗಲಿದ್ದಾರೆ.
ರಾಜ್ಯದಲ್ಲಿ ಐದು ಕ್ಷೇತ್ರಗಳ ಉಪಚುನಾವಣೆ ಕಣ ರಂಗೇರಿರುವ ಸಮಯದಲ್ಲಿಯೇ ದೇವೇಗೌಡರು ಲಂಡನ್ಗೆ ತೆರಳುತ್ತಿರುವುದು ಕುತೂಹಲ ಮೂಡಿಸಿದೆ. ಆದರೆ ಇಲ್ಲಿಯ ಪ್ರಚಾರ ಜವಾಬ್ದಾರಿಯನ್ನು ಅವರು ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ವಹಿಸಿದ್ದಾರೆ ಎನ್ನಲಾಗಿದೆ.
ಮಧ್ಯರಾತ್ರಿಯೇ ದೇವೇಗೌಡರಿಂದ ಬಿ ಫಾರಂ ಪಡೆದ ಮಧು ಬಂಗಾರಪ್ಪ
ವಿದೇಶ ಭೇಟಿಯ ವೇಳೆ ಅನಿವಾಸಿ ಭಾರತೀಯರನ್ನು ಮಾತನಾಡಿಸಿ ಅವರ ಮನಗೆಲ್ಲುವ ನರೇಂದ್ರ ಮೋದಿ ಅವರ ತಂತ್ರವನ್ನು ದೇವೇಗೌಡರೂ ಅನುಸರಿಸಲು ಮುಂದಾಗುತ್ತಿದ್ದಾರಾ ಎಂಬ ಅನುಮಾನ ಸಹ ರಾಜಕೀಯ ವಲಯದಲ್ಲಿ ಮೂಡುತ್ತಿದೆ.