ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತೃಪ್ತರ ಮಣಿಸಲು ದೇವೇಗೌಡ ತಯಾರಿ: ಬೆಂಗಳೂರು ಜೆಡಿಎಸ್ ಮುಖಂಡರ ಸಭೆ

|
Google Oneindia Kannada News

Recommended Video

ಅತೃಪ್ತರ ಮಣಿಸಲು ದೇವೇಗೌಡ ತಯಾರಿ | Oneindia Kannada

ಬೆಂಗಳೂರು, ಜುಲೈ 27: ಸರ್ಕಾರಕ್ಕೆ ಕೈಕೊಟ್ಟು ಅತೃಪ್ತ ಶಾಸಕರನ್ನು ಮಣಿಸಲು ದೇವೇಗೌಡ ಅವರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.

ಇತ್ತ ಎಚ್ಡಿಕೆ ಸರಕಾರ ಪತನ, ಅತ್ತ ದೇವೇಗೌಡ್ರ ಕನಸೂ ನುಚ್ಚುನೂರು ಇತ್ತ ಎಚ್ಡಿಕೆ ಸರಕಾರ ಪತನ, ಅತ್ತ ದೇವೇಗೌಡ್ರ ಕನಸೂ ನುಚ್ಚುನೂರು

ಶಾಸಕ ಮುನಿರತ್ನ ಅವರ ಆರ್‌.ಆರ್.ನಗರ, ಭೈರತಿ ಬಸವರಾಜು ಅವರ ಕೆ.ಆರ್.ಪುರಂ ಕ್ಷೇತ್ರದ ಜೆಡಿಎಸ್ ಮುಖಂಡರ ಸಭೆಯನ್ನು ದೇವೇಗೌಡ ಅವರು ಕರೆದಿದ್ದು, ಉಪಚುನಾವಣೆ ಕುರಿತು ಚರ್ಚೆ ಮತ್ತು ಸೂಚನೆಗಳನ್ನು ನೀಡಲಿದ್ದಾರೆ.

"ಮೈತ್ರಿ ಸರ್ಕಾರ ಪತನಕ್ಕಿಂತ ಕುದುರೆ ವ್ಯಾಪಾರ ನೋವು ಬಾಧಿಸಲಿದೆ"

ನಾಳೆ ಯಶವಂತಪುರ ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೆಡಿಎಸ್ ಮುಖಂಡರ ಜೊತೆ ಸಭೆ ನಾಳೆ ನಡೆಯಲಿದ್ದು, ಈ ಎರಡೂ ಕ್ಷೇತ್ರಗಳ ಶಾಸಕರೂ ಸಹ ರಾಜೀನಾಮೆ ನೀಡಿ ಸರ್ಕಾರಕ್ಕೆ ಕೈಕೊಟ್ಟು ಮುಂಬೈನಲ್ಲಿ ನೆಲೆಸಿದ್ದಾರೆ. ಯಶವಂತಪುರ ಕ್ಷೇತ್ರದಿಂದ ಎಸ್‌.ಟಿ.ಸೋಮಶೇಖರ್ ಗೆದ್ದಿದ್ದರೆ, ಮಹಾಲಕ್ಷ್ಮಿ ಲೇಔಟ್‌ನಿಂದ ಜೆಡಿಎಸ್‌ನ ಗೋಪಾಲಯ್ಯ ಗೆದ್ದಿದ್ದರು. ಆದರೆ ಅವರೀಗ ರಾಜೀನಾಮೆ ಸಲ್ಲಿಸಿದ್ದಾರೆ.

Deve Gowda concentrating on by election, call for Bengaluru JDS leaders meeting

ಜೆಡಿಎಸ್‌ನ ಮೂರು ಶಾಸಕರು ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ರಾಜೀನಾಮೆ ಸಲ್ಲಿಸಿದ್ದು, ಆ ಮೂರೂ ಶಾಸಕರ ಜೊತೆಗೆ ಕಾಂಗ್ರೆಸ್‌ನಿಂದ ಪರಾರಿಯಾದ ಕ್ಷೇತ್ರಗಳ ಕಡೆಗೂ ದೇವೇಗೌಡ ಅವರು ಗಮನ ಹರಿಸಿದ್ದಾರೆ. ಒಟ್ಟಿನಲ್ಲಿ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟ ಶಾಸಕರ ರಾಜಕೀಯ ಜೀವನ ನಿರ್ನಾಮ ಮಾಡಲು ದೇವೇಗೌಡ ಅವರು ಪಣತೊಟ್ಟಿದ್ದಾರೆ.

English summary
Deve Gowda concentrating on by election. He today had meeting with RR Nagar and Mahalakshmi layout constituency JDS leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X