ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು: ಕಿಚ್ಚ ಸುದೀಪ್ ವಿರುದ್ಧ ಕಾಫಿ ಎಸ್ಟೇಟ್ ಮಾಲೀಕರಿಂದ ದೂರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಸುದೀಪ್ ವಿರುದ್ದ ದೂರು ದಾಖಲು | Sudeep faceing a case..! | Filmibeat Kannada

ಚಿಕ್ಕಮಗಳೂರು, ಆಗಸ್ಟ್ 01: ನಟ ಕಿಚ್ಚ ಸುದೀಪ್ ಮೇಲೆ ಹಣ ವಂಚನೆ ಆರೋಪ ಕೇಳಿಬರುತ್ತಿದ್ದು, ಕಾಫಿ ಎಸ್ಟೇಟ್ ಮಾಲೀಕ ಚಿಕ್ಕಮಗಳೂರು ಮೂಲದ ದೀಪಕ್ ಮಯೂರ್ ಫಿಲ್ಮ್ ಚೇಂಬರ್ ಗೆ ಸುದೀಪ್ ವಿರುದ್ಧ ದೂರು ನೀಡಿದ್ದಾರೆ.

ಬೆಂಗಳೂರಿನಲ್ಲಿ ನಟ ಸುದೀಪ್ ರನ್ನು ಭೇಟಿಯಾದ ಶ್ರೀರಾಮುಲುಬೆಂಗಳೂರಿನಲ್ಲಿ ನಟ ಸುದೀಪ್ ರನ್ನು ಭೇಟಿಯಾದ ಶ್ರೀರಾಮುಲು

ಕೆಲವು ತಿಂಗಳುಗಳ ಹಿಂದೆ ತಾಲೂಕಿನ ಆವತಿ ಗ್ರಾಮದಲ್ಲಿ ಸುದೀಪ್ ನಿರ್ಮಾಣದ 'ವಾರಸ್ದಾರ' ಧಾರವಾಹಿ ಶೂಟಿಂಗ್ ಗೆ ದೀಪಕ್ ಮಯೂರ್ ತೋಟದ ಜಾಗವನ್ನು ಪಡೆಯಲಾಗಿತ್ತು. ಈ ವೇಳೆ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ದೀಪಕ್ ಮಯೂರ್ ಆರೋಪಿಸಿದ್ದಾರೆ.

Deepak Mayur filed a complaint against Kannada Actor Kichcha Sudeep

ಶೂಟಿಂಗ್ ವೇಳೆ ಕಾಫಿ, ಮೆಣಸು ಸೇರಿದಂತೆ ಇನ್ನಿತರ ಜಾಗದಲ್ಲಿ ಹಾನಿ‌ ಮಾಡಿ, ಪರಿಹಾರ ನೀಡದೇ ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿಯೂ ಸುದೀಪ್ ವಿರುದ್ಧ ದೀಪಕ್ ಮಯೂರ್ ದೂರು ನೀಡಿದ್ದಾರೆ. ಇನ್ನು ಈ ವಿಷಯ ಸುದೀಪ್ ಅವರ ಗಮನಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ.

Deepak Mayur filed a complaint against Kannada Actor Kichcha Sudeep

'ವಾರಸ್ದಾರ' ಧಾರವಾಹಿ ಕನ್ನಡದ ಮನರಂಜನೆ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿತ್ತು. ಅದನ್ನು ನಟ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ ನಿರ್ಮಾಣ ಮಾಡಿತ್ತು. ಕೆಲ ಸಮಯಗಳವರೆಗೆ ಪ್ರಸಾರವಾದ ಈ ಧಾರವಾಹಿ ಬಹುಬೇಗ ಮುಗಿಯಿತು.

English summary
Chikkamagaluru District Coffee estate owner Deepak Mayur filed a complaint against Kannada Actor Kichcha Sudeep.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X