ಸಾಮಾಜಿಕ ಜಾಲತಾಣದಲ್ಲಿ ಸಿಎಂ ರುಂಡ ಕತ್ತರಿಸುವ ಬೆದರಿಕೆ
ಬೆಂಗಳೂರು, ಫೆಬ್ರವರಿ 23: 'ರೌಡಿಸಂ ಮುಕ್ತ ಕರ್ನಾಟಕ ಆಗಬೇಕಂದರೆ ಸಿದ್ದರಾಮಯ್ಯನ ರುಂಡ ಹೊಡೀಲೇಬೇಕು' ಮುಖ್ಯಮಂತ್ರಿಗಳಿಗೆ ಹೀಗೊಂದು ಬೆದರಿಕೆ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ.
ಯಾರೋ ರಾಜ್ಯ ಸರ್ಕಾರದ ವಿರುದ್ಧ ಹಾಕಿದ್ದ ಫೇಸ್ಬುಕ್ ಪೋಸ್ಟ್ ಗೆ ಅರೂ ಪೂಜಾರ್ರ್ ಮತ್ತು ಮುಕುಂದ ನಾಯ್ಕ ಎಂಬ ಯುವಕರು ಮೇಲ್ಕಂಡ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
ಈ ಪೋಸ್ಟ್ ಈಗ ಚರ್ಚೆಯ ವಿಷಯವಾಗಿದ್ದು, ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯುವಕರಿಬ್ಬರ ಆತುರದ ಮಾತುಗಳು ಟೀಕೆಗೆ ಗುರಿಯಾಗಿದೆ.
ಸಂವಿಧಾನಿಕ ಸ್ಥಾನವಾದ ಮುಖ್ಯಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ತಲೆ ಕಡಿಯುವುದಾಗಿ ಬೆದರಿಕೆ ಹಾಕಿರುವುದು ಅತಿರೇಕದ ಪರಮಾವಧಿಯಾಗಿದ್ದು, ಇಬ್ಬರೂ ಯುವಕರ ವಿರುದ್ಧ ಕೇಸು ದಾಖಲಾಗುವ ಸಾಧ್ಯತೆ ಹೆಚ್ಚಿದೆ.
ಅರೂ ಪೂಜಾರ್ರ್ ಎಂಬಾತ ಮಂಗಳೂರು ವಿವಿಯಲ್ಲಿ ವ್ಯಾಸಾಂಗ ಮಾಡಿದ್ದ ಈಗ ಬೆಂಗಳೂರಿನಲ್ಲಿ ನೆಲೆಸಿರುವುದಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಮತ್ತೊಬ್ಬ ಮುಕುಂದ ನಾಯ್ಕ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.