ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ಜಯಲಲಿತಾ
ಬೆಂಗಳೂರು, ಸೆ. 29 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಜಯಲಲಿತಾ ಪರ ವಕೀಲರು ಕರ್ನಾಟಕ ಹೈಕೋರ್ಟ್ಗೆ ಸೋಮವಾರ ಮೇಲ್ಮನವಿ ಸಲ್ಲಿಸಿದ್ದಾರೆ. ತೀರ್ಪು ರದ್ದತಿ ಜಾಮೀನು ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ ನಡೆಯುವ ಸಾಧ್ಯತೆ ಇದೆ.
ಸೋಮವಾರ
ಕರ್ನಾಟಕ
ಹೈಕೋರ್ಟ್
ರಿಜಿಸ್ಟ್ರಾರ್
ಕಚೇರಿಯಲ್ಲಿ
ಜಯಲಲಿತಾ
ಪರ
ವಕೀಲರು,
ಬೆಂಗಳೂರು
ವಿಶೇಷ
ನ್ಯಾಯಾಲಯದ
ತೀರ್ಪುಗೆ
ತಡೆಯಾಜ್ಞೆ
ನೀಡಬೇಕು
ಮತ್ತು
ಜಯಲಲಿತಾ
ಅವರಿಗೆ
ಜಾಮೀನು
ನೀಡಬೇಕೆಂದು
ಅರ್ಜಿ
ಸಲ್ಲಿಸಿದ್ದಾರೆ.
ಹೈಕೋರ್ಟ್ಗೆ
ದಸರಾ
ರಜೆ
ಇದ್ದು
ಮಂಗಳವಾರ
ಮತ್ತು
ಗುರುವಾರ
ಅರ್ಜಿಗಳ
ವಿಚಾರಣೆ
ನಡೆಯಲಿದೆ.
ಇದರ
ಅನ್ವಯ
ನಾಳೆ
ಜಯಲಲಿತಾ
ಅರ್ಜಿಯ
ವಿಚಾರಣೆ
ನಡೆಯುವ
ಸಾಧ್ಯತೆ
ಇದೆ.
[ಅತಿರೇಕದ
ಅಭಿಮಾನ
15
ಅಮ್ಮಾ
ಬೆಂಬಲಿಗರ
ಸಾವು]
ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು ಜಯಲಲಿತಾ ಅವರ ಪರವಾಗಿ ಹೈಕೋರ್ಟ್ನಲ್ಲಿ ಮಂಗಳವಾರ ವಾದ ಮಂಡನೆ ಮಾಡುವ ಸಾಧ್ಯತೆ ಇದೆ. ಅಕ್ರಮ ಆಸ್ತಿಗಳಿಗೆ ಪ್ರಕರಣದಲ್ಲಿ ಜಯಲಲಿತಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ.ಗಳ ದಂಡ ವಿಧಿಸಿ ವಿಶೇಷ ನ್ಯಾಯಾಲಯ ಶನಿವಾರ ಆದೇಶ ನೀಡಿದ್ದು, ಜಯಲಲಿತಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. [ಜಯಾ ಬೆನ್ನಿಗೆ ನಿಂತ ನ್ಯಾಯವಾದಿ ರಾಮ್ ಜೇಠ್ಮಲಾನಿ]
ಅರ್ಜಿಯಲ್ಲೇನಿದೆ? : ಜಯಲಲಿತಾ ಪರ ವಕೀಲರು ಹೈಕೋರ್ಟ್ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ತಾನು ಆದಾಯ ಮೀರಿ ಆಸ್ತಿ ಗಳಿಸಿಲ್ಲ, ಖರೀದಿ ಮಾಡಿರುವ ಆಸ್ತಿಯ ಕುರಿತು ಆದಾಯ ತೆರಿಗೆ ಇಲಾಖೆಗೆ ಎಲ್ಲಾ ವಿವರಗಳನ್ನು ಸಲ್ಲಿಸಲಾಗಿದೆ. ಅವರಿಂದಲೂ ಯಾವುದೇ ಆಕ್ಷೇಪಣೆಯಿಲ್ಲ. ಆದ್ದರಿಂದ ವಿಶೇಷ ನ್ಯಾಯಾಲಯದ ತೀರ್ಪಿಗೆ ತಡೆಯಜ್ಞೆ ನೀಡಿ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ. [ಮುದ್ದೆ ತಿಂದರೂ ಜಯಲಲಿತಾಗೆ ನಿದ್ದೆ ಬರಲಿಲ್ಲ]
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿನ ಇತರ ಅಪರಾಧಿಗಳಾದ ಶಶಿಕಲಾ, ಸುಧಾಕರನ್, ಇಳವರಸಿ ಅವರಿಗೆ ಸಹ ನಾಲ್ಕು ವರ್ಷ ಜೈಲು ಶಿಕ್ಷೆಯಾಗಿದ್ದು, ಅಪರಾಧಿಗಳ ಪರ ವಕೀಲರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಯಲಲಿತಾ ಭೇಟಿಗಾಗಿ ಸೋಮವಾರ ಸಹ ಹಲವು ನಾಯಕರು ಮತ್ತು ಅಭಿಮಾನಿಗಳು ಆಗಮಿಸುತ್ತಿದ್ದಾರೆ.