ಚಂಡಮಾರುತದ ಆರ್ಭಟಕ್ಕೆ ಕೇರಳದಲ್ಲಿ 2, ಕರ್ನಾಟಕದಲ್ಲಿ 4 ಮಂದಿ ಬಲಿ
ಬೆಂಗಳೂರು, ಮೇ 16: ಭಾರತದ ಪಶ್ಚಿಮ ಘಟ್ಟ, ಕರಾವಳಿ ಭಾಗದಲ್ಲಿ ತೀವ್ರ ಮಳೆ, ಚಂಡಮಾರುತದಿಂದ ಸಾವು ನೋವು ಸಂಭವಿಸಿದೆ. ಕೇರಳದಲ್ಲಿ ಇಬ್ಬರು ಹಾಗೂ ಕರ್ನಾಟಕದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಭಾನುವಾರದ ನಂತರ ಮಾರುತಗಳು ಉತ್ತರ-ವಾಯುವ್ಯ ದಿಕ್ಕಿನತ್ತ ಸಾಗುವ ಸಾಧ್ಯತೆ ಇದ್ದು, ಮೇ 18 ರ ಮುಂಜಾನೆ ಗುಜರಾತ್ ಕರಾವಳಿಯನ್ನು ತಲುಪಲಿದೆ. ಮತ್ತು ಲಕ್ಷದ್ವೀಪ ದ್ವೀಪಗಳು, ಕೇರಳ, ತಮಿಳುನಾಡು (ಘಾಟ್ ಜಿಲ್ಲೆಗಳು) ಹಾಗು ಕರ್ನಾಟಕ (ಕರಾವಳಿ ಮತ್ತು ನೆರೆಯ ಘಾಟ್ ಜಿಲ್ಲೆಗಳು) ಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಭಾರತದ ಪಶ್ಚಿಮ ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ
ಮೇ 16ರಂದು ಚಂಡಮಾರುತದ ಪ್ರಭಾವದಿಂದ ಹೆಚ್ಚಾಗಿ ಗೋವಾ, ಕೊಂಕಣದ ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆ ಸುರಿಯಲಿದೆ. ಮಹಾರಾಷ್ಟ್ರದ ಸಿಂಧುದುರ್ಗ್ ಹಾಗೂ ರತ್ನಗಿರಿ ಜಿಲ್ಲೆಗಳಲ್ಲಿ ಹಾಗೂ ಗುಜರಾತ್ ಕರಾವಳಿಯಲ್ಲಿ ಮೇ 17ರಂದು ಭಾರಿ ಮಳೆ ನಿರೀಕ್ಷಿಸಲಾಗಿದೆ.
ಮೇ 14ರಂದು ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಮೇ 15ರಂದು ಮಲಪ್ಪುರಂ, ಕೋಳಿಕ್ಕೊಡ್, ವಯನಾಡು,ಕಣ್ಣೂರು,ಕಾಸರಗೋಡು ಭಾಗದಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿರಲಿದೆ ಎಂದು ಕೇರಳ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಹೇಳಿದೆ.
ಚಂಡಮಾರುತದಿಂದ
ಸಾವು
ನೋವು
ತೌಕ್ತೆ
ಚಂಡಮಾರುತದ
ಆರ್ಭಟದಿಂದ
ಕರ್ನಾಟಕದ
6
ಜಿಲ್ಲೆಗಳಲ್ಲಿ
ಭಾರಿ
ಮಳೆ
ಸುರಿಯುತ್ತಿದೆ.
ಕರಾವಳಿಯ
ಮೂರು
ಜಿಲ್ಲೆಗಳಲ್ಲಿ
ರೆಡ್
ಅಲರ್ಟ್
ಹಾಗೂ
ಮಲೆನಾಡು
ಭಾಗದ
ಮೂರು
ಜಿಲ್ಲೆಗಳಲ್ಲಿ
ಯೆಲ್ಲೂ
ಅಲರ್ಟ್
ಜಾರಿಯಲ್ಲಿದೆ.
ಇಲ್ಲಿ
ತನಕ
4
ಮಂದಿ
ಮೃತಪಟ್ಟಿದ್ದು,
73
ಗ್ರಾಮಗಳು
ಹಾನಿಗೊಂಡಿವೆ
ಎಂದು
ಕರ್ನಾಟಕ
ನೈಸರ್ಗಿಕ
ವಿಕೋಪ
ಕೇಂದ್ರ
ವರದಿ
ನೀಡಿದೆ.
ಕೇರಳದಲ್ಲಿ ಮೇ 16ರಂದು ಎರ್ನಾಕುಲಂ, ಇಡುಕ್ಕಿ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಅರೆಂಜ್ ಅಲರ್ಟ್ ಜಾರಿಯಲ್ಲಿದೆ. ಇತರೆ ಜಿಲ್ಲೆಗಳಲ್ಲಿ ಯೆಲ್ಲೂ ಜಿಲ್ಲೆಗಳಲ್ಲಿ ಅಲರ್ಟ್ ಇದೆ. ತ್ರಿಸ್ಸೂರು ಜಿಲ್ಲೆಯಲ್ಲಿ ತೀರ ಪ್ರದೇಶದಲ್ಲಿದ್ದ 350 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸಲಾಗಿದೆ. ಮುಟ್ಟಾರ್, ಎಡಥ್ವಾ, ತಲವಾಡಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
We are closely monitoring the cyclone situation in coastal areas. I am in contact with District in-charge ministers and DCs of the affected districts to ensure rescue and relief operations. Officials have been instructed to take all possible precautions & safety measures.
— B.S. Yediyurappa (@BSYBJP) May 16, 2021
ಕೇಂದ್ರದಿಂದ 42 ತ್ವರಿತ ಕಾರ್ಯಾಚರಣೆ ತಂಡಗಳು ಕೇರಳದ 6 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ ಕೋಸ್ಟ್ ಗಾರ್ಡ್, ಭಾರತೀಯ ನೌಕಾಪಡೆ, ಸೇನಾ ಪಡೆ ಕೂಡಾ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
Recommended Video