ಕೊರೊನಾ ಭೀತಿ: ಕರ್ನಾಟಕದಲ್ಲಿ ಮಕ್ಕಳ ಪರೀಕ್ಷೆ ಪ್ರಮಾಣ ಹೆಚ್ಚಳ
ಬೆಂಗಳೂರು, ಅಕ್ಟೋಬರ್ 25: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಭಯವಿದ್ದು, ಮಕ್ಕಳ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 21 ಮತ್ತು ಅಕ್ಟೋಬರ್ 21 ರ ನಡುವೆ ನಡೆಸಿದ ಒಟ್ಟು ಪರೀಕ್ಷೆಗಳಲ್ಲಿ ಶೇಕಡಾ 20.8 ರಷ್ಟು ಮಕ್ಕಳಿಗೆ ನಡೆಸಲಾಗಿದೆ ಎಂದು ತಿಳಿಸಿದೆ.
ಕೊರೊನಾದಿಂದಾಗಿ ಭಾರತದಲ್ಲಿ ಜನರ ಜೀವಿತಾವಧಿ 2 ವರ್ಷ ಕಡಿತ
ಕೊರೊನಾ ಸಾಂಕ್ರಾಮಿಕ ರೋಗದ ಸಂಭಾವ್ಯ ಮೂರನೇ ಅಲೆ ಆತಂಕ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲಿನ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ 5,00,31,061 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರಲ್ಲಿ ಶೇ.81 ಕ್ಕಿಂತ ಹೆಚ್ಚು ರಿವರ್ಸ್ ಟ್ರಾನ್ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್ಟಿ-ಪಿಸಿಆರ್) ವಿಧಾನವನ್ನು ಬಳಕೆ ಮಾಡಲಾಗಿದೆ ಎಂದು ತಿಳಿಸಿದೆ.
ಸರ್ಕಾರಿ ಪ್ರಯೋಗಾಲಯಗಳಲ್ಲಿ 3,51,78,814 ಪರೀಕ್ಷೆಗಳನ್ನು ನಡೆಸಲಾಗಿದ್ದರೆ, ಖಾಸಗಿ ಪ್ರಯೋಗಾಲಯಗಳಲ್ಲಿ 1,49,91,638 ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯದಲ್ಲಿ ಆರ್ಟಿ-ಪಿಸಿಆರ್ ಸಾಮರ್ಥ್ಯ 1,83,780ಕ್ಕೆ ಹೆಚ್ಚಾಗಿದೆ. ಸೋಂಕನ್ನು ಶೀಘ್ರಗತಿಯಲ್ಲಿ ಪತ್ತೆ ಮಾಡುವುದು, ಹಾಟ್ ಸ್ಪಾಟ್ ಗಳ ಗುರ್ತಿಸಲು ಪರೀಕ್ಷೆ ನಡೆಸುವುದು ಅತ್ಯಂತ ಮುಖ್ಯವಾಗಿದೆ.
ದಿನನಿತ್ಯದ
ಪರೀಕ್ಷೆಗಳ
ಸಂಖ್ಯೆಯನ್ನು
ಗಮನಿಸಲಾಗುತ್ತಿದೆ.
ಸಕ್ರಿಯ
ಪ್ರಕರಣಗಳ
ಪತ್ತೆಗೆ
ಆಶಾ
ಕಾರ್ಯಕರ್ತೆಯರು
ಪ್ರತೀ
ಮನೆಗೆ
ಭೇಟಿ
ನೀಡುತ್ತಿದ್ದಾರೆಂದು
ಮಾಹಿತಿ
ನೀಡಿದೆ.
ಕೊರೊನಾ
ಮೂರನೇ
ಅಲೆ
ಮಕ್ಕಳ
ಮೇಲೆ
ಗಂಭೀರ
ಪರಿಣಾಮ
ಬೀರಲಿದೆ
ಎಂದು
ಹೇಳಲಾಗುತ್ತಿರುವ
ಹಿನ್ನೆಲೆಯಲ್ಲಿ
ಈಗಾಗಲೇ
ರಾಜ್ಯ
ಸರ್ಕಾರ
ರಾಜ್ಯದಲ್ಲಿ
ಒಟ್ಟು
ಪರೀಕ್ಷೆಗಳಲ್ಲಿ
ಶೇ.10ರಷ್ಟು
ಪರೀಕ್ಷೆಯನ್ನು
18
ವರ್ಷಕ್ಕಿಂತ
ಕಡಿಮೆ
ವಯಸ್ಸಿನ
ಮಕ್ಕಳಿಗೆ
ಕಡ್ಡಾಯವಾಗಿ
ಮಾಡಬೇಕು
ಎಂದು
ನಿರ್ದೇಶಿಸಿದೆ.
ಲಸಿಕೆ ಪಡೆದುಕೊಳ್ಳಲು ಮಕ್ಕಳು ಅರ್ಹರಲ್ಲ ಕಾರಣ ಹಾಗೂ ಈಗಾಗಲೇ ಶಾಲೆಗಳು ಕೂಡ ಪುನರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಅ.25ರಿಂದ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಕಳೆದ 20 ತಿಂಗಳುಗಳಿಂದ ಬಂದ್ ಆಗಿದ್ದ ಈ ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಶುರುವಾಗಿದೆ. ಆದರೆ, ಮಕ್ಕಳಿಗೆ ಹಾಜರಿ ಕಡ್ಡಾಯವಿಲ್ಲ.
ಮಕ್ಕಳ ಸ್ವಾಗತಕ್ಕೆ ಬಹುತೇಕ ಶಾಲೆ ಆವರಣ, ಕೊಠಡಿಗಳನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯದ 44,616 ಸರ್ಕಾರಿ ಪ್ರಾಥಮಿಕ ಮತ್ತು 19645 ಅನುದಾನ ರಹಿತ ಹಾಗೂ ಅನುದಾನಿಕ ಖಾಸಗಿ ಶಾಲೆಗಳಲ್ಲಿ 1 ರಿಂದ 5ನೇ ತರಗತಿಗಳಿಗೆ ಒಟ್ಟು 46 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ. ಆದರೆ, ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವುದು ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಇದರ ನಡುವೆ ಮಕ್ಕಳಿಗೆ ವೈರಲ್, ಡೆಂಗ್ಯೂ, ಮಲೇರಿಯಾ ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ.
ಶಾಲೆಗಳಲ್ಲಿ ಮೊದಲ 5 ದಿನಗಳು ಅರ್ಧ ದಿನವಷ್ಟೇ ಕ್ಲಾಸ್ಗಳು ನಡೆಯಲಿವೆ. ಭೌತಿಕ ತರಗತಿಗೆ ಹಾಜರಾಗಲು ಮಕ್ಕಳಿಗೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿರಲಿದೆ. ಈ ವೇಳೆ ಶಿಕ್ಷಣ ಇಲಾಖೆಯ ಮಾರ್ಗಸೂಚಿ ಪಾಲನೆ ಮಾಡುವುದು ಕಡ್ಡಾಯವಾಗಿರಲಿದೆ.
ಜೊತೆಗೆ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಇನ್ನು 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ಶೀಲ್ಡ್ ಬಳಸಬೇಕಿದೆ.