ಕೋವಿಡ್ - 19 ನಿರ್ವಹಣೆ: ಸರಕಾರದ ಮುಂದೆ ಸಿದ್ದರಾಮಯ್ಯ ಇಟ್ಟ ಹೊಸ ಡಿಮಾಂಡ್
ಬೆಂಗಳೂರು, ಜೂನ್ 30: ಕೋವಿಡ್-19 ನಿರ್ವಹಣೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಮಿತಿ ರಚಿಸುವಂತೆ ಆಗ್ರಹಿಸಿದ್ದಾರೆ.
Recommended Video
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚಿಸಬೇಕೆಂದು ಆಗ್ರಹಿಸಿದ್ದಾರೆ. ಕೊರೊನಾ ವೈರಸ್ ತಾಂಡವಾಡುತ್ತಿರುವ ಈ ಸಮಯದಲ್ಲಿ ಸರ್ವಪಕ್ಷಗಳ ಸಭೆಯನ್ನು ಕರೆಯಬೇಕೆಂದು, ಈಗಾಗಲೇ ಕಾಂಗ್ರೆಸ್ಸಿನವರು ಆಗ್ರಹಿಸಿದ್ದರು.
ಕಾಂಗ್ರೆಸ್ ಕಚೇರಿಗೆ ಹೋಗಲು ಕಾರು ಬಿಟ್ಟು ಸೈಕಲ್ ಏರಿದ ಸಿದ್ದರಾಮಯ್ಯ!
ಸಿದ್ದರಾಮಯ್ಯನವರು ಮಾಡಿರುವ ಸರಣಿ ಟ್ವೀಟ್ ಹೀಗಿದೆ, "ಕೊರೊನಾ ಚಿಕಿತ್ಸೆ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಇದರ ಮೇಲೆ ನಿಗಾ ಇಡಲು @CMofKarnataka ಅವರು ತಕ್ಷಣ ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚಿಸಬೇಕು. ಪಕ್ಷಗಳಲ್ಲಿರುವ ವೃತ್ತಿನಿರತ ಮತ್ತು ವೈದ್ಯಕೀಯ ಶಿಕ್ಷಣ ಹೊಂದಿರುವ ನಾಯಕರನ್ನು ಇದರಲ್ಲಿ ಸೇರಿಸಿಕೊಳ್ಳಬಹುದು".
"ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಿರ್ಲಕ್ಷ, ತಾರತಮ್ಯ ನೀತಿ ಮತ್ತು ಭ್ರಷ್ಟಾಚಾರದ ಆರೋಪಗಳಿವೆ. ರಾಜಕೀಯ ಪ್ರಭಾವ ಬಳಸಿ ಬಲವಿದ್ದವರು ಬದುಕಿಕೊಳ್ಳುತ್ತಾರೆ, ಬಡವರಿಗೆ ದಿಕ್ಕಿಲ್ಲದಂತಹ ಸ್ಥಿತಿ. @CMofKarnataka ಅವರೇ ಈ ಕಡೆಗಮನ ಹರಿಸಿ".
"ರೋಗಿಗಳಿಗೆ ತಾನು ಪಡೆಯುತ್ತಿರುವ ಚಿಕಿತ್ಸೆಯ ಸಂಪೂರ್ಣ ವಿವರ ಪಡೆಯುವ ಕಾನೂನುಬದ್ದ ಹಕ್ಕಿದೆ. ಸೋಂಕಿತರಿಗೆ ನೀಡುತ್ತಿರುವ ಔಷಧಿ,ಅನುಸರಿಸುತ್ತಿರುವ ಚಿಕಿತ್ಸಾ ವಿಧಾನ ಏನು ಎಂಬುದನ್ನು ತಿಳಿಸದೆ ರೋಗಿಗಳನ್ನು ಕತ್ತಲಲ್ಲಿಡಲಾಗುತ್ತಿದೆ. @BSYBJP ಅವರೇ ಇದು ಅನ್ಯಾಯ ಅಲ್ಲವೇ?".
ಚುನಾವಣೆಗೆ ಪಟ್ಟು ಹಿಡಿದಿದ್ದ ಈಶ್ವರಪ್ಪಗೆ ಸಿದ್ದರಾಮಯ್ಯ ತೋರಿಸಿದ ಭರ್ಜರಿ ಶಕ್ತಿ ಪ್ರದರ್ಶನ
"ಖಾಸಗಿ
ಆಸ್ಪತ್ರೆಗಳಲ್ಲಿ
ಕೊರೊನಾ
ಚಿಕಿತ್ಸೆಗೆ
ಅವಕಾಶ
ಸ್ವಾಗತಾರ್ಹ
ಕ್ರಮ.
ಚಿಕಿತ್ಸಾ
ಶುಲ್ಕ
ಕಡಿಮೆ
ಮಾಡಲು
ಒಪ್ಪಿರುವ
ಖಾಸಗಿಯವರು
ಚಿಕಿತ್ಸೆಯ
ಗುಣಮಟ್ಟದಲ್ಲಿ
ರಾಜಿಯಾಗದಂತೆ
ನಿಗಾ
ಇಡಬೇಕು.
ಸೋಂಕಿತರಿಗೆ,
ನೀಡುತ್ತಿರುವ
ಔಷಧಿ
ಮತ್ತು
ಅನುಸರಿಸಲಾಗುತ್ತಿರುವ
ಚಿಕಿತ್ಸಾ
ವಿಧಾನದದ
ಸಂಪೂರ್ಣ
ಮಾಹಿತಿಯನ್ನು
ಮೊದಲೇ
ನೀಡಬೇಕು".