ಕೋವಿಡ್ ಮಾರ್ಗಸೂಚಿ ಯಾವಾಗ ಅಂತ್ಯ?; ಮಾಹಿತಿ ನೀಡಿದ ಆರೋಗ್ಯ ಸಚಿವ
ಬೆಂಗಳೂರು, ಜನವರಿ 14: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೆಲವು ಕಠಿಣ ನಿರ್ಬಂಧಗಳನ್ನು ವಿಧಿಸಿದೆ.
ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಮತ್ತು ಮಾರ್ಗಸೂಚಿಗಳಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿರುವುದು ಸತ್ಯ. ಆದರೆ ಈ ಮಾರ್ಗಸೂಚಿಗಳಿಂದ ಮುಕ್ತಿ ಯಾವಾಗ ಎನ್ನುವುದಕ್ಕೆ ಆರೋಗ್ಯ ಸಚಿವ ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೋವಿಡ್ ಮಾರ್ಗಸೂಚಿ ಜನವರಿ ತಿಂಗಳಾಂತ್ಯದವರೆಗೂ ಮುಂದುವರೆಯಲಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಬಸವರಾಜ ಬಸವರಾಜ ಬೊಮ್ಮಾಯಿಯವರೇ ಹೇಳಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಲಕ್ಷಣ ಇಲ್ಲವೆಂದು ಯಾರೂ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೂಸ್ಟರ್ ಡೋಸ್ ಪಡೆಯಲು ಅರ್ಹರಿರುವವರು ಈಗಲೇ ಪಡೆಯಿರಿ. 2ನೇ ಡೋಸ್ ಲಸಿಕೆ ಪಡೆಯದವರೂ ಆದಷ್ಟು ಬೇಗ ಪಡೆಯಬೇಕು. ಕ್ರಮಗಳನ್ನು ಜನರೇ ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.
ಇನ್ನು ರಾಜ್ಯದಲ್ಲಿ ಲಾಕ್ಡೌನ್ ಹೇರಿಕೆ ಕುರಿತು ಮಾತನಾಡಿದ ಸಚಿವ ಸುಧಾಕರ್, ''ಲಾಕ್ಡೌನ್ ಮೂಲಕ ಕೊರೊನಾ ನಿಯಂತ್ರಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳ ಜತೆಗಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯೂ ಇದನ್ನೇ ಹೇಳಿದ್ದಾರೆ. ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಅನಗತ್ಯವಾಗಿ ಜನಜಂಗುಳಿ ಸೇರುವುದು, ಸಮಾರಂಭ ಮಾಡಬೇಡಿ,'' ಎಂದಿದ್ದಾರೆ.
ಜನರು ಮಾಸ್ಕ್, ಸಾಮಾಜಿಕ ಅಂತರದಂತ ನಿಯಮ ಪಾಲಿಸಿ. ಸದ್ಯದ ಈಗಿನ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವಂತ ಕೋವಿಡ್ ಸೋಂಕಿತರ ಪ್ರಮಾಣ ಗಮನಿಸಿದರೆ, ಶೇ.5-6ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನರ್ಸ್, ವೈದ್ಯರಿಗೂ ಕೊರೊನಾ ಸೋಂಕು ದೃಢಪಡುತ್ತಿದೆ. ಇದು ನಮಗೆ ಆತಂಕದ ಸಂಗತಿಯಾಗಿದೆ ಎಂದು ಆರೋಗ್ಯ ಸಚಿವರು ಕಳವಳ ವ್ಯಕ್ತಪಡಿಸಿದರು.
ಒಂದೇ ವಾರದಲ್ಲಿ ಕೊರೊನಾ ಕಡಿಮೆಯಾಗುವುದು ಸಾಧ್ಯವಿಲ್ಲ. 5-6 ಪಟ್ಟು ಹೆಚ್ಚು ವೇಗವಾಗಿ ಹರಡುವ ಪ್ರಭೇದ ಇದು ಎಂದು ಹೇಳಿದ ಅವರು, ಫೆಬ್ರವರಿ ಮೊದಲ ವಾರದಲ್ಲಿ ಕೊರೊನಾ ಪೀಕ್ ಹಂತಕ್ಕೆ ಹೋಗುತ್ತದೆ. ಫೆಬ್ರವರಿ 3-4ನೇ ವಾರದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ವೀಕೆಂಡ್
ಕರ್ಫ್ಯೂ;
ಮದ್ಯಪ್ರಿಯರಿಗೆ
ಶಾಕ್
ವಾರಾಂತ್ಯ
ಕರ್ಫ್ಯೂ
ಹಿನ್ನೆಲೆಯಲ್ಲಿ
ಇಂದು
(ಶುಕ್ರವಾರ)
ರಾತ್ರಿ
10ರಿಂದ
ಸೋಮವಾರ
ಬೆಳಗ್ಗೆ
5
ಗಂಟೆಯವರೆಗೆ
ಮದ್ಯದ
ಅಂಗಡಿ
ಬಂದ್
ಮಾಡಲಾಗುತ್ತದೆ
ಎಂದು
ಅಬಕಾರಿ
ಇಲಾಖೆ
ಸಚಿವ
ಕೆ.
ಗೋಪಾಲಯ್ಯ
ಮಾಹಿತಿ
ನೀಡಿದ್ದಾರೆ.
ರಾಜ್ಯದಾದ್ಯಂತ
ವೀಕೆಂಡ್
ಕರ್ಫ್ಯೂ
ವೇಳೆ
ಮದ್ಯದಂಗಡಿ
ಬಂದ್
ಮಾಡಲಾಗುತ್ತದೆ
ಎಂದು
ತಿಳಿಸಿದ್ದಾರೆ.
ಭಾರತದಲ್ಲಿ
ಇಂದಿನ
ಕೋವಿಡ್
ಪ್ರಕರಣಗಳು
ಭಾರತದಲ್ಲಿ
2,64,202
ಹೊಸ
ಕೋವಿಡ್
ಪ್ರಕರಣ
ದೃಢಪಟ್ಟಿದ್ದು,
(ನಿನ್ನೆಗಿಂತ
6.7%
ಹೆಚ್ಚು)
ಮತ್ತು
ಕಳೆದ
24
ಗಂಟೆಗಳಲ್ಲಿ
1,09,345
ಸೋಂಕಿತರು
ಚೇತರಿಕೆ
ಕಂಡಿದ್ದಾರೆ
ಎಂದು
ಕೇಂದ್ರ
ಆರೋಗ್ಯ
ಇಲಾಖೆ
ವರದಿ
ಮಾಡಿದೆ.
ದೇಶದಲ್ಲಿ ಸದ್ಯ ಸಕ್ರಿಯ ಕೊರೊನಾ ಪ್ರಕರಣಗಳು 12,72,073, ದೈನಂದಿನ ಪಾಸಿಟಿವಿಟಿ ದರ: 14.78%, ಈವರೆಗೆ 5,753 ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ.