25 ವರ್ಷ ಹಿಂದಿನ ಪ್ರಕರಣಕ್ಕೆ ಮರುಜೀವ, ಸಿದ್ದರಾಮಯ್ಯ ವಿರುದ್ಧ ಎಫ್ಐಆರ್
Recommended Video
ಮೈಸೂರು, ಜೂನ್ 18: ಯಾಕೋ ಸಿದ್ದರಾಮಯ್ಯ ಅವರ ಟೈಮೇ ಸರಿ ಇದ್ದಂತಿಲ್ಲ. ಕಾಂಗ್ರೆಸ್ನಲ್ಲಿ ಮೂಲೆಗುಂಪಾಗಿ ಅನುಭವಿಸುತ್ತಿರುವ ನೋವಿನ ಜೊತೆಗೆ ಈಗ ಕೋರ್ಟ್ ಕಂಟಕವೂ ಎದುರಾಗಿದೆ.
25 ವರ್ಷ ಹಲೆಯ ಪ್ರಕರಣಕ್ಕೆ ಮರುಜೀವ ಬಂದಿದ್ದು, ಮೈಸೂರಿನ ಎರಡನೇ ಸತ್ರ ಪ್ರಧಾನ ನ್ಯಾಯಾಲಯವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಇಂದು ಸಂಜೆ ಒಳಗೆ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಲಿದೆ.
ಕುಮಾರಸ್ವಾಮಿ Vs ಸಿದ್ದರಾಮಯ್ಯ 'ಬಜೆಟ್' ಜಟಾಪಟಿ: ನಾನಾ..ನೀನಾ..
1988ರಲ್ಲಿ ಸಿದ್ದರಾಮಯ್ಯ ಅವರು ಮೈಸೂರಿನ ಹಿಣಕಲ್ ಗ್ರಾಮ ಪಂಚಾಯಿತಿಗೆ ಸೇರಿದ 10 ಗುಂಟೆ ಜಮೀನು ಖರೀದಿಸಿದ್ದರು. ಆದರೆ ಈ ಜಾಗ ಮತ್ತು ಇದರ ಜೊತೆಗೆ ಇನ್ನೂ 20 ಗುಂಟೆ ಜಾಗವನ್ನು ಮುಡಾ ಅನಧಿಕೃತವಾಗಿ ಢಿನೋಟಿಫೈ ಮಾಡಿದೆ ಎಂದು ಜಾಗದ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಸಿದ್ದರಾಮಯ್ಯ ಅವರು ಆಗ ಕೊಂಡಿದ್ದ 107-74 ಅಡಿ ಜಾಗದಲ್ಲಿ ಅನಧಿಕೃತವಾಗಿ 120-75 ಅಡಿ ಮನೆ ನಿರ್ಮಿಸಿದ್ದರು, ಆ ನಂತರ ಅದನ್ನು ಕರ್ನಾಟಕದ ಮಧ್ಯದ ದೊರೆ ಹರಿ ಖೋಡೆ ಅವರಿಗೆ ಮಾರಾಟ ಮಾಡಿದ್ದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವಕೀಲರಾದ ಗಂಗರಾಜು ಮತ್ತು ಸಂಗಮೇಶ್ ಎಂಬುವರು ಈ ಪ್ರಕರಣವನ್ನು ಕೈಗೆತ್ತಿಕೊಂಡು ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲು ರಾಜ್ಯಪಾಲರ ಒಪ್ಪಿಗೆ ಕೇಳಿದ್ದರು ಆದರೆ ರಾಜ್ಯಪಾಲರು ಒಪ್ಪಿರಲಿಲ್ಲ. ಆದರೆ ಈಗ ನ್ಯಾಯಾಲಯ ಎಫ್ಐಆರ್ ದಾಖಲಿಸಲು ಸೂಚಿಸಿದೆ.
ಸಿದ್ದರಾಮಯ್ಯಗೆ ಕೆಪಿಸಿಸಿ ಸಾರಥ್ಯ ನೀಡಿ: ಎ.ಮಂಜು ಆಗ್ರಹ
ಇದೇ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಇನ್ನೂ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತಿದೆ. ಇಂದು ಸಂಜೆ (ಜೂನ್ 18) ಒಳಗೆ ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಲಿದೆ.