ಲೋಕಾಯುಕ್ತ ಕೋಟಿ ಡೀಲ್, ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು, ಜು.01 : ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಹಣದ ಬೇಡಿಕೆ ಪ್ರಕರಣದ ಕುರಿತು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ನಡೆಸುತ್ತಿದ್ದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತನಿಖೆಗೆ ತಡೆ ನೀಡುವಂತೆ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಕೋರ್ಟ್ ಮೆಟ್ಟಿಲೇರಿದ್ದರು.
ಬುಧವಾರ
ನ್ಯಾಯಮೂರ್ತಿ
ಎನ್.
ಕುಮಾರ್
ಅವರ
ಪೀಠ
ತನಿಖೆಗೆ
ತಡೆಯಾಜ್ಞೆ
ನೀಡಿದೆ.
ಸರ್ಕಾರ
ಹಗರಣದ
ತನಿಖೆಗೆ
ವಿಶೇಷ
ತನಿಖಾ
ದಳ
(ಎಸ್ಐಟಿ)
ರಚನೆ
ಮಾಡಿದೆ.
ಒಟ್ಟಿಗೆ
ಎರಡು
ತನಿಖೆ
ಬೇಡವೆಂದು
ಅಭಿಪ್ರಾಯಪಟ್ಟಿರುವ
ಕೋರ್ಟ್
ಸೋನಿಯಾ
ನಾರಂಗ್
ನೇತೃತ್ವದ
ತನಿಖೆಗೆ
ತಡೆಯಾಜ್ಞೆ
ನೀಡಿ
ಆದೇಶ
ಹೊರಡಿಸಿದೆ.
[ಲೋಕಾ
ಹಗರಣ,
ಕೃಷ್ಣರಾವ್
ಗುರುತು
ಪತ್ತೆ]
ಲೋಕಾಯುಕ್ತದಲ್ಲಿ ನಡೆದ ಹಣದ ಬೇಡಿಕೆ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರಿಗೆ ಸೂಚನೆ ನೀಡಿದ್ದರು. ಆದರೆ, ಸೋಮವಾರ ನ್ಯಾ.ಭಾಸ್ಕರರಾವ್ ಈ ತನಿಖೆಗೆ ತಡೆಯಾಜ್ಞೆ ನೀಡಿದ್ದರು. ಮಂಗಳವಾರ ಪುನಃ ತನಿಖೆ ನಡೆಸುವಂತೆ ಉಪ ಲೋಕಾಯುಕ್ತರು ಆದೇಶ ಹೊರಡಿಸಿದ್ದರು. [ಲೋಕಾಯುಕ್ತ ಹಗರಣ, ತನಿಖೆಗೆ ಆದೇಶ]
ಬುಧವಾರ ಹಣದ ಬೇಡಿಕೆ ಹಗರಣದಲ್ಲಿ ಹೆಸರು ಕೇಳಿಬರುತ್ತಿರುವ ಲೋಕಾಯುಕ್ತ ನ್ಯಾ. ಭಾಸ್ಕರರಾವ್ ಅವರ ಪುತ್ರ ಅಶ್ವಿನ್ ರಾವ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು ಮತ್ತು ತನಿಖೆಗೆ ತಡೆ ನೀಡಬೇಕೆಂದು ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. [ಲೋಕಾಯುಕ್ತ ಹಗರಣ, ಎಸ್ ಐಟಿ ತನಿಖೆ]
ಅರ್ಜಿದಾರ ಅಶ್ವಿನ್ ರಾವ್ ಪರವಾಗಿ ವಾದ ಮಂಡನೆ ಮಾಡಿದ ಹಿರಿಯ ವಕೀಲ ಅಶೋಕ್ ಹಾರ್ನಳ್ಳಿ ಅವರು, ಒಂದೇ ಬಾರಿಗೆ ಎರಡು ತನಿಖೆ ನಡೆಯುತ್ತಿದೆ. ಹಗರಣದ ತನಿಖೆಗೆ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಆದ್ದರಿಂದ ಸೋನಿಯಾ ನಾರಂಗ್ ನೇತೃತ್ವದ ತನಿಖೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ.