ಎಚ್ಚೆತ್ತ ಕರ್ನಾಟಕ ಸರ್ಕಾರ : ನೀರು ಸಂಗ್ರಹಕ್ಕೆ ಯೋಜನೆ
ಬೆಂಗಳೂರು, ಮೇ, 14: ಬರ, ಕುಡಿಯುವ ನೀರಿನ ತಾತ್ವಾರ ಎದುರಿಸುತ್ತಿರುವ ಕರ್ನಾಟಕ ಕೆಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಮಳೆ ನೀರು ಕೊಯ್ಲು ಮತ್ತು ನೀರು ಸಂಗ್ರಹಕ್ಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಕರ್ನಾಟಕದ
3562
ಕೆರೆಗಳಲ್ಲಿ
ಈ
ಬಾರಿಯ
ಮಳೆಗಾಲದಲ್ಲಿ
ನೀರು
ಸಂಗ್ರಹಿಸಲು
ಯೋಜನೆ
ರೂಪಿಸಲಾಗಿದೆ
ಎಂದು
ಸಣ್ಣ
ನೀರಾವರಿ
ಸಚಿವ
ಶಿವರಾಜ್
ತಂಗಡಗಿ
ತಿಳಿಸಿದ್ದಾರೆ.
ಕೆರೆಗಳ
ಹೂಳು
ತೆಗೆಯಲು
ಕ್ರಮ
ತೆಗೆದುಕೊಳ್ಳಲಾಗುತ್ತಿದೆ
ಎಂದು
ತಿಳಿಸಿದ್ದಾರೆ.[ಉತ್ತರ
ಕನ್ನಡದ
ಜೀವನಾಡಿ
ಅಘನಾಶಿನಿಯೂ
ಬರಿದು]
90.95 ಕೋಟಿ ರೂ. ವೆಚ್ಚದಲ್ಲಿ 2957 ಕೆರೆಗಳ ಒತ್ತುವರಿ ತೆರವು ಹಾಗೂ ರಾಜಕಾಲುವೆಗಳ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೆರೆಗಳಲ್ಲಿ ನೀರು ಸಂಗ್ರಹಿಸಿ ಆ ಮೂಲಕ ಅಂತರ್ಜಲ ಮಟ್ಟ ಸುಧಾರಣೆ ಮಾಡಲಾಗುವುದು. ಉದ್ಯೋಗ ಖಾತ್ರಿ ಯೋಜನೆಯನ್ನು ಇದಕ್ಕೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.[ಬಕ್ಕ ಬರಿದಾದ ಕೆಆರ್ಎಸ್, ಕೊಡಗಿನಲ್ಲಿ ಮಳೆ ಸಿಂಚನ]
ಹೂಳು ಅವ್ಯವಹಾರ ಸಿಐಡಿಗೆ: ಕೊಪ್ಪಳ ಜಿಲ್ಲೆಯಲ್ಲಿ ಕೆರೆ ಹೂಳು ತೆಗೆಯುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದ ದೂರುಗಳು ಕೇಳಿಬಂದಿದ್ದು ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು ಎಂದು ತಿಳಿಸಿದರು.