ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ, ರಮೇಶ್ ಕುಮಾರ್, ಮಂಜು ಸೇರಿ ಹಲವು ಕಾಂಗ್ರೆಸ್ಸಿಗರ ನಾಮಪತ್ರ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ರಾಜ್ಯಾದ್ಯಂತ ಚುನಾವಣೆ ಕಾವು ಏರುತ್ತಿದ್ದು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಿದರೆ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಆರೋಗ್ಯ ಸಚಿವ ರಮೇಶ್ ಕುಮಾರ್, ಮಾಜಿ ಸಚಿವ ಎಚ್.ವೈ ಮೇಟಿ ಸೇರಿದಂತೆ ಕಾಂಗ್ರೆಸ್ ನ ಹಲವಾರು ಘಟಾನುಘಟಿ ನಾಯಕರು ಗುರುವಾರ ನಾಮಪತ್ರ ಸಲ್ಲಿಸಿದರು. ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಮನೆದೇವರಿಗೆ ನಮಿಸಿ ಪತ್ನಿ ಉಷಾ ಸಮೇತ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದರೆ ಸಚಿವ ರಮೇಶ್ ಕುಮಾರ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಶ್ರೀನಿವಾಸಪುರದಲ್ಲಿ ನಾಮಪತ್ರ ಸಲ್ಲಿಸಿದರು.

ಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಶಕ್ತಿ ಪ್ರದರ್ಶಿಸಿದ ರೈಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಶಕ್ತಿ ಪ್ರದರ್ಶಿಸಿದ ರೈ

ಗುರುವಾರದಿಂದ ನಾಮಪತ್ರ ಸಲ್ಲಿಕೆ ಚುರುಕುಗೊಂಡಿದೆ, ಈ ಹಿನ್ನೆಲೆಯಲ್ಲಿ ಇಂದು ಪಶುಸಂಗೋಪನೆ ಸಚಿವ ಎ.ಮಂಜು, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ವಿಜಯಾನಂದ ಕಾಶಪ್ಪನವರ್ ಹೀಗೆ ಹಲವಾರು ನಾಯಕರು ಆಯಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಮೇ 12 ರಂದು ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಏಪ್ರಿಲ್ 17ರಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 23ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮೇ 15 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

 ಡಿಕೆ ಶಿವಕುಮಾರ್ ಕನಕಪುರದಲ್ಲಿ ನಾಮಪತ್ರ ಸಲ್ಲಿಕೆ

ಡಿಕೆ ಶಿವಕುಮಾರ್ ಕನಕಪುರದಲ್ಲಿ ನಾಮಪತ್ರ ಸಲ್ಲಿಕೆ

ಮೇ 12ರಂದು ವಿಧಾನಸಭೆ ಚುನಾವಣೆ ಹಿನ್ನೆಲೆ ಗುರುವಾರ ಕಾಂಗ್ರೆಸ್​​ನ ಹಲವು ಸಚಿವರು ಹಾಗೂ ಅಭ್ಯರ್ಥಿಗಳು ಇಷ್ಟ ದೇವರು, ಮನೆ ದೇವರುಗಳಿಗೆ ಪೂಜೆ ಸಲ್ಲಿಸಿ ಕುಟುಂಬ ಸಮೇತರಾಗಿ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ.
​ಕನಕಪುರದಲ್ಲಿ ಇಂಧನ ಸಚಿವ ಡಿ.ಕೆ ಶಿವಕುಮಾರ್​ ಅವರು ತಹಸೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುಂಚೆ ಮನೆ ದೇವರ ದರ್ಶನ ಪಡೆದುಕೊಂಡು ತಾಯಿ ಗೌರಮ್ಮ, ಪತ್ನಿ ಉಷಾ ಶಿವಕುಮಾರ್ ಹಾಗೂ ಸಹೋದರ ಡಿ.ಕೆ ಸುರೇಶ್ ಜತೆ ಬಂದು ನಾಮಪತ್ರ ಸಲ್ಲಿಸಿದರು. ಡಿಕೆಶಿ ತಮ್ಮ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅಣ್ಣನಿಗೆ ಸಾಥ್ ನೀಡಿದರು.

 ಮೆರವಣಿಗೆಯಲ್ಲಿ ತೆರಳಿದ ರೈ

ಮೆರವಣಿಗೆಯಲ್ಲಿ ತೆರಳಿದ ರೈ

ಕಾಂಗ್ರೆಸ್​​ ಅಭ್ಯರ್ಥಿ ರಮಾನಾಥ ರೈ ಸಮಾವೇಶದ ಬಳಿಕ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ಬಂಟ್ವಾಳದ ಮಿನಿ ವಿಧಾನಸೌಧದಲ್ಲಿ ಚುನಾವಣಾಧಿಕಾರಿ ರವಿ ಬಸರಿಹಳ್ಳಿಗೆ ನಾಮಪತ್ರ ಸಲ್ಲಿಸಿದರು.

 ಬಾಗಲಕೋಟೆಯಲ್ಲಿ ಎಚ್​ ವೈ ಮೇಟಿ

ಬಾಗಲಕೋಟೆಯಲ್ಲಿ ಎಚ್​ ವೈ ಮೇಟಿ

ಇಂದು ಶುಭದಿನವಾಗಿದ್ದರಿಂದ ಸರಳವಾಗಿ ಬಂದು ಬಾಗಲಕೋಟೆಯಲ್ಲಿ ಎಚ್​ ವೈ ಮೇಟಿ ನಾಮಪತ್ರ ಸಲ್ಲಿಸಿದ್ದಾರೆ. ಏ.23ರಂದು ಅದ್ಧೂರಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.

 ವಾಸ್ತು ನೋಡಿ ನಾಮಪತ್ರ ಸಲ್ಲಿಸಿದ ಕಾಶಪ್ಪನವರ್

ವಾಸ್ತು ನೋಡಿ ನಾಮಪತ್ರ ಸಲ್ಲಿಸಿದ ಕಾಶಪ್ಪನವರ್

ಹುನಗುಂದದ ಕಾಂಗ್ರೆಸ್​ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ ನಾಮಪತ್ರ ಸಲ್ಲಿಸುವ ವೇಳೆ ವಾಸ್ತು ನೋಡಿ, ಪೂರ್ವ ದಿಕ್ಕಿಗೆ ಮುಖವನ್ನು ಮಾಡಿ, ಪುತ್ರಿ ಸಮೀಕ್ಷಾ ಕೈ ಹಿಡಿದು ನಾಮಪತ್ರ ಅರ್ಜಿ ಮೇಲೆ ಸಹಿ ಮಾಡಿ, ನಾಮಪತ್ರ ಸಲ್ಲಿಸಿದ್ದಾರೆ.

 ರಾಮೇಶ್ವರನಿಗೆ ನಮಿಸಿ ಕಿಮ್ಮನೆ ನಾಮಪತ್ರ

ರಾಮೇಶ್ವರನಿಗೆ ನಮಿಸಿ ಕಿಮ್ಮನೆ ನಾಮಪತ್ರ

ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

 ವಿಘ್ನೇಶ್ವರನಿಗೆ ಮೊರೆ ಹೋದ ಎ.ಮಂಜು

ವಿಘ್ನೇಶ್ವರನಿಗೆ ಮೊರೆ ಹೋದ ಎ.ಮಂಜು

ಅರಕಲಗೂಡಿನಲ್ಲಿ ಸಚಿವ ಎ.ಮಂಜು ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ನೂರಾರು ಬೆಂಬಲಿಗರೊಂದಿಗೆ ತಾಲೂಕು ಪಂಚಾಯಿತಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಅರಕಲಗೂಡು ವಿಧಾನಸಭಾ ಕ್ಷೇತ್ರದ ಚುನಾವಣೆಯ ಉಮೇದುವಾರನಾಗಿ ನನ್ನ ನಾಮಪತ್ರವನ್ನು ಸಲ್ಲಿಸಿದ್ದೇನೆ, ತಮ್ಮ ಅತ್ಯಮೂಲ್ಯ ಮತವನ್ನು ನನಗೆ ನೀಡುವ ಮೂಲಕ ನಿಮ್ಮ ಸೇವೆ ಮಾಡುವ ಸದವಕಾಶವನ್ನು ಮತ್ತೊಮ್ಮೆ ನೀಡುವಂತೆ ಕೇಳಿಕೊಳ್ಳುತ್ತೇನೆ ಎಂದು ಎ. ಮಂಜು ಹೇಳಿದ್ದಾರೆ.

 ರಮೇಶ್ ಕುಮಾರ್, ಚಿಂಚನಸೂರ್, ಭೈರತಿ ಬಸವರಾಜು ನಾಮಪತ್ರ ಸಲ್ಲಿಕೆ

ರಮೇಶ್ ಕುಮಾರ್, ಚಿಂಚನಸೂರ್, ಭೈರತಿ ಬಸವರಾಜು ನಾಮಪತ್ರ ಸಲ್ಲಿಕೆ

ಕೋಲಾರದಲ್ಲಿ ಸಚಿವ ರಮೇಶ್ ಕುಮಾರ್, ಗುರುಮಠಕಲ್​​​ನಲ್ಲಿ ಬಾಬುರಾವ್ ಚಿಂಚನಸೂರ, ಕೆಜಿಎಫ್​​ನಲ್ಲಿ ರೂಪಾ ಶಶಿಧರ್, ಬಂಗಾರಪೇಟೆಯ ಎಸ್​.ಎನ್​​.ನಾರಾಯಸ್ವಾಮಿ, ಶಹಾಪುರನಲ್ಲಿ ಶರಣ ಬಸಪ್ಪಗೌಡ ದರ್ಶನಾಪುರ, ಕೆ.ಆರ್.ಪುರಂ ಶಾಸಕ ಬಿ.ಎ.ಬಸವರಾಜು ನಾಮಪತ್ರ ಸಲ್ಲಿಸಿದರು.

English summary
Ministers D.K.Shivakumar, Rameshkumar, A.Manju several congress candidates have filed their nominations in respective constituencies on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X