ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿನ ಮುಂದಿನ ಮುಖ್ಯಮಂತ್ರಿ ರೇಸಿಗೆ ಮತ್ತೊಂದು ಹೆಸರು ಸೇರ್ಪಡೆ!

|
Google Oneindia Kannada News

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಚಾಲ್ತಿಯಲ್ಲಿರಬೇಕಾದರೆ, ಕಾಂಗ್ರೆಸ್ಸಿನಲ್ಲೂ ಈ ವಿಚಾರ ಮುನ್ನಲೆಗೆ ಬಂದು ದೊಡ್ಡ ಸುದ್ದಿಯಾಗುತ್ತಿರುವುದು ಉದ್ದೇಶಪೂರ್ವಕವೋ ಅಥವಾ ಕಾಕತಾಳಿಯವೋ?

ಒಟ್ಟಿನಲ್ಲಿ, ಆಡಳಿತ ಬಿಜೆಪಿಯ ವಿರುದ್ದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೆ ಹೋರಾಡಲು ಸಾಕಷ್ಟು ಸರಕುಗಳಿದ್ದರೂ, ಮುಂದಿನ ಚುನಾವಣೆ ಯಾರ ಹೆಸರಿನಲ್ಲಿ ಮುನ್ನಡೆಯಾಗಬೇಕು ಎನ್ನುವುದು ಪಕ್ಷಕ್ಕೆ ಇರಿಸುಮುರಿಸು ತಂದೊಡ್ಡುತ್ತಿದೆ.

ಕಾಂಗ್ರೆಸ್‌ನಲ್ಲಿ ಯಾವುದೇ ಒಳಜಗಳ ಇಲ್ಲ; ಇವೆಲ್ಲಾ ಮಾಧ್ಯಮಗಳ ಸೃಷ್ಟಿ; ಸಿದ್ದರಾಮಯ್ಯಕಾಂಗ್ರೆಸ್‌ನಲ್ಲಿ ಯಾವುದೇ ಒಳಜಗಳ ಇಲ್ಲ; ಇವೆಲ್ಲಾ ಮಾಧ್ಯಮಗಳ ಸೃಷ್ಟಿ; ಸಿದ್ದರಾಮಯ್ಯ

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹಚ್ಚಿದ ಬೆಂಕಿ, ಪ್ರಮುಖ ನಾಯಕರ ಎಚ್ಚರಿಕೆಯ ನಡುವೆಯೂ ತಣ್ಣಗಾಗುವುದು ಹಾಗಿರಲಿ, ದಿನದಿಂದ ದಿನಕ್ಕೆ ಇದು ಪಕ್ಷದ ಮುಖಂಡರ ನಡುವಿನ ಮನಸ್ತಾಪಕ್ಕೆ ವೇದಿಕೆಯಾಗುತ್ತಿದೆ.

 ಆಧುನಿಕ ಭಾರತ ನಿರ್ಮಾತೃ ಪಿ.ವಿ.ನರಸಿಂಹ ರಾವ್‌ಗೆ 100 ಆಧುನಿಕ ಭಾರತ ನಿರ್ಮಾತೃ ಪಿ.ವಿ.ನರಸಿಂಹ ರಾವ್‌ಗೆ 100

ಭಾವೀ ಸಿಎಂ ಸಿದ್ದರಾಮಯ್ಯ ಎಂದು ಜಮೀರ್ ಅಹ್ಮದ್ ಮೂಲಕ ಹೇಳಿಸಿ, ಆ ಮೂಲಕ, ತಮ್ಮದೇ ಪಕ್ಷದ ಇತರ ಮುಖಂಡರ ನಾಡಿಮಿಡಿತ ಅರಿಯುವ ಕೆಲಸವನ್ನು ವಿರೋಧ ಪಕ್ಷದ ನಾಯಕರು ಮಾಡುತ್ತಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇವೆಲ್ಲದರ ನಡುವೆ, ಸಿಎಂ ಹುದ್ದೆಗೆ ಇನ್ನೋರ್ವ ಉತ್ತರ ಕರ್ನಾಟಕದ ಪ್ರಭಾವೀ ನಾಯಕರ ಹೆಸರು ಸೇರ್ಪಡೆಯಾಗಿದೆ.

 ಸಿಎಂ ರೇಸಿನಲ್ಲಿ ನಾನು ಇಲ್ಲ ಎಂದು ಹೇಳಿದ್ದು ಯಾರು, ಡಾ.ಪರಮೇಶ್ವರ್

ಸಿಎಂ ರೇಸಿನಲ್ಲಿ ನಾನು ಇಲ್ಲ ಎಂದು ಹೇಳಿದ್ದು ಯಾರು, ಡಾ.ಪರಮೇಶ್ವರ್

ಈಗಾಗಲೇ, ದಲಿತ ಸಿಎಂ ಎನ್ನುವ ವಿಚಾರ ಭಾರೀ ಚರ್ಚೆಯಲ್ಲಿದೆ. ಡಾ.ಪರಮೇಶ್ವರ್ ಅವರು "ಸಿಎಂ ರೇಸಿನಲ್ಲಿ ನಾನು ಇಲ್ಲ ಎಂದು ಹೇಳಿದ್ದು ಯಾರು. ಆದರೆ ಅದನ್ನೆಲ್ಲಾ ಚರ್ಚಿಸಲು ಇದು ಸೂಕ್ತ ವೇದಿಕೆಯಲ್ಲ. ಮುಂದಿನ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಬೇಕಿದೆ"ಎಂದು ಪರಮೇಶ್ವರ್ ಹೇಳುವ ಮೂಲಕ, ತಮ್ಮ ಆಕಾಂಕ್ಷೆಯನ್ನು ಹೊರಹಾಕಿದ್ದರು.

 ಎಂ.ಬಿ.ಪಾಟೀಲ್ ಕೂಡಾ ಈ ವಿಚಾರದ ಬಗ್ಗೆ ಸುತ್ತೂರು ಮಠದಲ್ಲಿ ಪ್ರಸ್ತಾಪ

ಎಂ.ಬಿ.ಪಾಟೀಲ್ ಕೂಡಾ ಈ ವಿಚಾರದ ಬಗ್ಗೆ ಸುತ್ತೂರು ಮಠದಲ್ಲಿ ಪ್ರಸ್ತಾಪ

ಇದಾಗಿ ಎರಡು ದಿನಗಳ ಕೆಳಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಕೂಡಾ ಈ ವಿಚಾರದ ಬಗ್ಗೆ ಸುತ್ತೂರು ಮಠದಲ್ಲಿ ಪ್ರಸ್ತಾವಿಸಿದ್ದರು. "ಮುಖ್ಯಮಂತ್ರಿ ಹುದ್ದೆಗೆ ಅರ್ಹರಾದ ಮುಖಂಡರು ಲಿಂಗಾಯತ ಸಮುದಾಯದಲ್ಲೂ ಇದ್ದಾರೆ"ಎಂದು ಹೇಳಿದ್ದರು. ಕಾಂಗ್ರೆಸ್ಸಿನಲ್ಲಿ ಆ ಸಮುದಾಯದ ಪ್ರಮುಖ ನಾಯಕರಲ್ಲಿ ಎಂ.ಬಿ.ಪಾಟೀಲ್ ಮಂಚೂಣಿಯಲ್ಲಿದ್ದಾರೆ. ಈಗ, ಆ ಪಟ್ಟಿಗೆ ಇನ್ನೋರ್ವ ನಾಯಕರ ಹೆಸರು ಸೇರ್ಪಡೆಯಾಗಿದೆ.

 ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಹೆಸರು ಕೂಡಾ ಈಗ ಕೇಳಿಬರುತ್ತಿದೆ

ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಹೆಸರು ಕೂಡಾ ಈಗ ಕೇಳಿಬರುತ್ತಿದೆ

ಈಗ, ಗದಗ ಕ್ಷೇತ್ರದ ಶಾಸಕ, ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಹೆಸರು ಕೂಡಾ ಈಗ ಕೇಳಿಬರುತ್ತಿದೆ. ಮುಂದಿನ ಮುಖ್ಯಮಂತ್ರಿ ಎಚ್.ಕೆ.ಪಾಟೀಲ್ ಯಾಕಾಗಬಾರದು ಎನ್ನುವ ಚರ್ಚೆ ಸಾಮಾಜಿಕ ತಾಣದಲ್ಲಿ ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ಸಿನಿಂದ ಅವರೇ ಸೂಕ್ತ ಅಭ್ಯರ್ಥಿ ಎನ್ನುವ ವಿಚಾರ ಜಾಲತಾಣದಲ್ಲಿ ಹರಿದಾಡುತ್ತಿದೆ.

Recommended Video

ಧೋನಿಯನ್ನು ನೆನೆದು ಭಾವುಕರಾದ ಭುವನೇಶ್ವರ್ ಕುಮಾರ್ | Oneindia Kannada
 ಬಂಗಾರಪ್ಪನವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ರಾಜೀವ್ ಗಾಂಧಿ ಕೇಳಿದಾಗ

ಬಂಗಾರಪ್ಪನವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ರಾಜೀವ್ ಗಾಂಧಿ ಕೇಳಿದಾಗ

ಈ ಹಿಂದೆ ಕೂಡಾ ಕರ್ನಾಟಕ ರಾಜಕೀಯದಲ್ಲಿ ಎಚ್.ಕೆ.ಪಾಟೀಲ್ ಅವರ ತಂದೆಯ ಹೆಸರು ಮಂಚೂಣಿಯಲ್ಲಿತ್ತು. ಆದರೆ, ಬಂಗಾರಪ್ಪನವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೇಳಿದಾಗ, ಮರುಕ್ಷಣವೇ ಅವರು ಸಿಎಂ ರೇಸಿನಿಂದ ಹಿಂದಕ್ಕೆ ಸರಿದಿದ್ದರು. ಈ ಬಾರಿ, ಎಚ್.ಕೆ.ಪಾಟೀಲ್ ಅವರಿಗೇ ಸಿಎಂ ಸ್ಥಾನ ನೀಡಬೇಕು ಎನ್ನುವ ಒತ್ತಾಯ ಅವರ ಅಭಿಮಾನಿಗಳಿಂದ ಜೋರಾಗಿ ಕೇಳಿಬರುತ್ತಿದೆ.

English summary
Next CM Candidate Row in Congress: North Karnataka leader HK Patil name also been added to the Next CM candidate race. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X