ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆ ನೀಡಿದ ಸುಧಾಕರ್‌ ಗೆ ದಿಗ್ಬಂದನ ಹಾಕಿದ ಕೈ ಮುಖಂಡರು!

|
Google Oneindia Kannada News

ಬೆಂಗಳೂರು, ಜುಲೈ 10: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರನ್ನು ಕಾಂಗ್ರೆಸ್‌ನ ಮುಖಂಡರು ವಿಧಾನಸೌಧದ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ!

ಹೌದು, ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಆಗಮಿಸಿದ್ದ ಸುಧಾಕರ್ ಅವರನ್ನು ಸುತ್ತುವರೆದ ಕಾಂಗ್ರೆಸ್ ಮುಖಂಡರು, ಶಾಸಕರು ಸುಧಾಕರ್ ಅವರನ್ನು ಸಚಿವ ಜಾರ್ಜ್‌ ಕೊಠಡಿಗೆ ಕರೆದುಕೊಂಡು ಹೋಗಿ ಕೂಡಿಹಾಕಿದರು.

ಸಮ್ಮಿಶ್ರ ಸರ್ಕಾರ ಕ್ಕೆ ಮತ್ತೆ ಆಘಾತ: ಮತ್ತಿಬ್ಬರು ಶಾಸಕರ ರಾಜೀನಾಮೆಸಮ್ಮಿಶ್ರ ಸರ್ಕಾರ ಕ್ಕೆ ಮತ್ತೆ ಆಘಾತ: ಮತ್ತಿಬ್ಬರು ಶಾಸಕರ ರಾಜೀನಾಮೆ

ಸುಧಾಕರ್ ಅವರನ್ನು ಸುತ್ತುವರೆದ ಕಾಂಗ್ರೆಸ್ ಮುಖಂಡರು ಮತ್ತು ಕೆಲವು ಶಾಸಕರು, ಸುಧಾಕರ್ ಅವರನ್ನು ಹೀನಾ-ಮಾನ ಜರಿದರು, ರಾಜೀನಾಮೆ ನೀಡಿದ್ದಕ್ಕೆ ಕಾರಣ ಕೇಳಿ ಬೈದರು.

Congress leaders locked down Chikkaballapur MLA Sudhakar

ಸುಧಾಕರ್ ಮತ್ತು ಎಂಟಿಬಿ ನಾಗರಾಜು ಒಟ್ಟಿಗೆ ರಾಜೀನಾಮೆ ನೀಡಲು ಆಗಮಿಸಿದ್ದರು, ಆದರೆ ನಾಗರಾಜು ರಾಜೀನಾಮೆ ನೀಡಿ ವಿಧಾನಸೌಧದಿಂದ ಕಾಲ್ಕಿತ್ತರು, ಆದರೆ ಸುಧಾಕರ್ ಅವರು ಕಾಂಗ್ರೆಸ್ ಶಾಸಕರ ಕೈಗೆ ಸಿಕ್ಕಿ ಹಾಕಿಕೊಂಡರು, ಅವರನ್ನು ಅಕ್ಷರಷಃ ಎಳೆತಂದು ಕೊಠಡಿಯಲ್ಲಿಟ್ಟರು. ಈ ಮಧ್ಯೆ ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕಾಂಗ್ರೆಸ್ ನಾಯಕರ ಕೈಗೆ ಸಿಕ್ಕಿಕೊಂಡ ಸುಧಾಕರ್ Live Updatesಕಾಂಗ್ರೆಸ್ ನಾಯಕರ ಕೈಗೆ ಸಿಕ್ಕಿಕೊಂಡ ಸುಧಾಕರ್ Live Updates

ಸಿದ್ದರಾಮಯ್ಯ ಅವರಿಗೆ ವಿಧಾನಸೌಧಕ್ಕೆ ಬುಲಾವ್ ನೀಡಲಾಗಿದ್ದು, ಸಿದ್ದರಾಮಯ್ಯ ಅವರು ಸುಧಾಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಸುಧಾಕರ್ ಅವರನ್ನು ಒತ್ತೆ ಇರಿಸಿಕೊಳ್ಳಲಾಗಿದೆ.

English summary
Congress MLAs and leaders locked down Chikkaballapura MLA Sudhakar, He give resignation to his post , while he came to give resignation in that time Congress leaders drag him and locked him in a room.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X