ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ!
ಖಾಸಗಿ ಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಮೀಸಲಾತಿ ಕಲ್ಪಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಬೆಂಗಳೂರು, ಡಿಸೆಂಬರ್ 23: ಖಾಸಗಿ ಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಮೀಸಲಾತಿ ಕಲ್ಪಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಆದರೆ, ಐಟಿ, ಬಿಟಿ ಕ್ಷೇತ್ರಗಳನ್ನು ಈ ಮೀಸಲಾತಿ ಸೌಲಭ್ಯದಿಂದ ಹೊರಗಿಡಲಾಗಿದೆ.
ಖಾಸಗಿ
ಉದ್ಯಮಗಳಲ್ಲಿ
ಕನ್ನಡಿಗರಿಗೆ
ಶೇ.100
ಮೀಸಲಾತಿ
ನೀಡುವ
ಕುರಿತು
ಕರಡು
ತಿದ್ದುಪಡಿಯೊಂದನ್ನು
ಕರ್ನಾಟಕದ
ಕಾರ್ಮಿಕ
ಇಲಾಖೆ
ಬಿಡುಗಡೆ
ಮಾಡಿದೆ.
ಇದಕ್ಕೆ
ತಿದ್ದುಪಡಿಗೆ
ಮುಖ್ಯಮಂತ್ರಿಯ
ಅನುಮೋದನೆ
ದೊರೆತಿದೆ
ಎಂದು
ಹೇಳಲಾಗುತ್ತಿದೆ.[ಮಹಿಳೆಯರಿಗೆ
ಮೀಸಲಾತಿ
ಯಾಕೆ
ಬೇಕು?]
ಈ ನಿಯಮವನ್ನು ಕೈಗಾರಿಕೆಗಳು ನಿಯಮಗಳನ್ನು ಪಾಲಿಸಲು ವಿಫಲವಾದರೆ, ಅಂಥ ಸಂಸ್ಥೆಗೆ ಸಿಗುವ ಸೌಲಭ್ಯ ರಿಯಾಯಿತಿಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಿದೆ.[ಜನಸಂಖ್ಯೆಗನುಗುಣವಾಗಿ ಶೇ.70 ರ ಮೀಸಲಾತಿಗೆ ಬದ್ಧ: ಸಿಎಂ]
ಸ್ಥಾಯಿ ಆದೇಶಗಳ ಅಧಿನಿಯಮ 2ಕ್ಕೆ ಪ್ರಸ್ತಾವಿತ ತಿದ್ದುಪಡಿಯಂತೆ 'ಭೂಮಿ, ಜಲ, ವಿದ್ಯುತ್ ಸಂಬಂಧ ರಿಯಾಯಿತಿಗಳನ್ನು ಅಥವಾ ತೆರಿಗೆ ರಿಯಾಯಿತಿ ಅಥವಾ ತೆರಿಗೆ ಮುಂದೂಡಿಕೆಯನ್ನು ರಾಜ್ಯ ಕೈಗಾರಿಕಾ ನೀತಿಯಂತೆ ಪಡೆದ ಪ್ರತಿಯೊಂದು ಕೈಗಾರಿಕಾ ಉದ್ದಿಮೆಯೂ ಸ್ಥಳೀಯ ಜನರಿಗೆ (ಕನ್ನಡಿಗರಿಗೆ) ಶೇ.100 ಮೀಸಲಾತಿಯನ್ನು ವಿವಿಧ ಉಪ ಅಧಿನಿಯಮಗಳ ಅನ್ವಯ ವಿಭಾಗಿಸಲಾದ ಉದ್ಯೋಗಿಗಳಿಗೆ ನೀಡತಕ್ಕದ್ದು' ಎಂದು ತಿಳಿಸಲಾಗಿದೆ.[ಸಣ್ಣಕಥೆ: ಮೀಸಲಾತಿಗೆ ಬಲಿಯಾದ ಒಂದು ಛೊಲೋ ಪ್ರೀತಿ!]
ನೇಮಕಾತಿ ಸಂದರ್ಭ ಖಾಸಗಿ ಕೈಗಾರಿಕೆಗಳು ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡಬೇಕೇ ಹೊರತು ಆ ಹುದ್ದೆಗೆ ಬೇರೆ ಯಾರೂ ಸಿಗದೇ ಹೋದಾಗ ಕನ್ನಡಿಗರನ್ನು ನೇಮಿಸಬೇಕೆಂದಲ್ಲ ಎಂದು ಕಾರ್ಮಿಕ ಸಚಿವ ಸಂತೋಶ್ ಲಾಡ್ ಹೇಳಿದ್ದಾರೆ.