"ಜನರಿಗೆ ಒಂದು ಸಮಸ್ಯೆಯಾದ್ರೆ, ಸರ್ಕಾರಕ್ಕೊಂದು ಸಮಸ್ಯೆ": ಕಾಂಗ್ರೆಸ್
ಬೆಂಗಳೂರು, ಮಾರ್ಚ್.06: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕಾಂಗ್ರೆಸ್) ನಾಯಕರ ನಡುವೆ ಟ್ವಿಟರ್ ಕದನ ಶುರುವಾಗಿದೆ.
ಕರ್ನಾಟಕದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಒಂದು ರೀತಿಯಾಗಿವೆ. ಈ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಬೇಕಾದ ಸ್ಥಾನದಲ್ಲಿರುವ ಸರ್ಕಾರದ ಶಾಸಕರು ಮತ್ತು ಸಚಿವರುಗಳೇ ಇನ್ನೊಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಟ್ವಿಟರ್ ವಾರ್: "ಮುಖ್ಯಮಂತ್ರಿಗಳೇ ನೀವು ತಡೆಯಾಜ್ಞೆ ಅರ್ಜಿ ಸಲ್ಲಿಸಲ್ವಾ?"
ಜನರ ತೊಂದರೆಗಳನ್ನು ನಿವಾರಿಸಬೇಕಾದ ಬಿಜೆಪಿ ಶಾಸಕರು ಮತ್ತು ಸಚಿವರು ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವ ಬಗ್ಗೆ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಉಲ್ಲೇಖಿಸಿದೆ. ಈ ಕುರಿತು ಒಂದು ಪಟ್ಟಿ ಇಲ್ಲಿದೆ.
ರಾಜ್ಯದಲ್ಲಿರುವ ಸಮಸ್ಯೆಗಳು:
ನಿರುದ್ಯೋಗ
ವೇತನ
ಶಿಕ್ಷಣ
ಬೆಲೆ ಏರಿಕೆ
ಬಜೆಟ್ ಕೊರತೆ
ಅನುದಾನ ಕಡಿತ
ಹಸಿವು
ಬಿಜೆಪಿ ಸರ್ಕಾರದಲ್ಲಿನ ಸಮಸ್ಯೆಗಳು:
ಆಂತರಿಕ ಕಿತ್ತಾಟ
ಲೂಟಿಗೆ ಪೈಪೋಟಿ
ಸಂಪುಟ ಸಂಕಟ
ಸಿಡಿ ಕರ್ಮಕಾಂಡ
ಸಚಿವರಿಗೆ ಸಿಡಿ ಆತಂಕ
ಬ್ಲಾಕ್ ಮೇಲ್