ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಭವನಕ್ಕೆ ನುಗ್ಗಿದ ಬಸ್, ರಾಜ್ಯಪಾಲರ ಮುಂದೆ ಕಾಂಗ್ರೆಸ್-ಜೆಡಿಎಸ್ ಶಾಸಕರ ಪರೇಡ್

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 16: ರಾಜಭವನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪರೇಡ್ ನಡೆಸಲು ಉಭಯ ಪಕ್ಷಗಳು ಸಿದ್ಧತೆ ನಡೆಸಿವೆ.

ಶಾಸಕರ ಸಂಖ್ಯಾಬಲವನ್ನು ರಾಜ್ಯಪಾಲರ ಮುಂದಿಟ್ಟು ಸರಕಾರ ರಚನೆಗೆ ಹಕ್ಕು ಮಂಡಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಇಂದು ಸಂಜೆ 5 ಗಂಟೆಗೆ ರಾಜ್ಯಪಾಲರು ಭೇಟಿಗೆ ಅವಕಾಶ ನೀಡಿದ್ದು, ಪರಮೇಶ್ವರ್ ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕರ ಪರೇಡ್ ನಡೆಯಲಿದೆ.

ಬಹುಮತಕ್ಕೆ ಹೊಡೆದಾಟ : ವಾಲಾ ಮುಂದೆ ಪರೇಡ್ ಗೆ ಕಾಂಗ್ರೆಸ್ ಚಿಂತನೆ ಬಹುಮತಕ್ಕೆ ಹೊಡೆದಾಟ : ವಾಲಾ ಮುಂದೆ ಪರೇಡ್ ಗೆ ಕಾಂಗ್ರೆಸ್ ಚಿಂತನೆ

ರಾಜ್ಯಪಾಲರನ್ನು ಭೇಟಿಯಾಗಲು ಶಾಂಗ್ರೀಲಾ ಹೋಟೆಲ್ ನಿಂದ ಕುಮಾರಸ್ವಾಮಿ ರಾಜಭವನದತ್ತ ತೆರಳಿದ್ದಾರೆ. "ಸ್ಥಿರ ಸರಕಾರ ರಚಿಸುವಷ್ಟು ಸಂಖ್ಯಾ ಬಲ ನಮ್ಮ ಬಳಿ ಇದೆ," ಎಂದು ರಾಜ್ಯಪಾಲರನ್ನು ಭೇಟಿಯಾಗಲು ಹೊರಟ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Congress and JDS MLAs to parade in Raj Bhavan

ಇನ್ನೊಂದು ಕಡೆ ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಹೋಗಲು ಕೆಪಿಸಿಸಿ ಕಚೇರಿ ಮುಂದೆ ಬಸ್ ತಯಾರಾಗಿ ನಿಂತಿದ್ದು ಕೈ ಶಾಸಕರು ಕೂಡ ರಾಜಭವನದತ್ತ ಹೊರಡಲಿದ್ದಾರೆ.

ಜೆಡಿಎಸ್ ಶಾಸಕರಿಗೆ ಬಿಜೆಪಿಯಿಂದ ರೂ. 100 ಕೋಟಿ ಆಮಿಷ: ಕುಮಾರಸ್ವಾಮಿ ಜೆಡಿಎಸ್ ಶಾಸಕರಿಗೆ ಬಿಜೆಪಿಯಿಂದ ರೂ. 100 ಕೋಟಿ ಆಮಿಷ: ಕುಮಾರಸ್ವಾಮಿ

ರಾಜ್ಯಪಾಲರನ್ನು ಭೇಟಿಯಾದ ನಂತರ ಶಾಸಕರು ರೆಸಾರ್ಟ್ ಗೆ ತೆರಳಲಿದ್ದಾರೆ. ಬಿಡದಿ ಬಳಿಯಿರುವ ಈಗಲ್ಟನ್ - ದಿ ಗಾಲ್ಫ್ ರೆಸಾರ್ಟ್ ನಲ್ಲಿ ಶಾಸಕರ ವಾಸ್ತವ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

English summary
Karnataka assembly election results 2018: Congress and JDS leaders decided to parade their MLAs to show their strength in-front of Governor Vajubhai Vala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X