Breaking; ಅನುದಾನ ಪಡೆಯಲು ಕಮೀಷನ್ ಆರೋಪ; ತನಿಖೆಗೆ ಸಿದ್ಧ ಸಿಎಂ
ಬೆಂಗಳೂರು, ಏಪ್ರಿಲ್ 19; "ಮಠಗಳಿಗೆ ಮಂಜೂರಾದ ಅನುದಾನ ಪಡೆಯಲು ಶೇ 30ರಷ್ಟು ಕಮೀಷನ್ ನೀಡಬೇಕು" ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರಿನಲ್ಲಿ ಮಂಗಳವಾರ ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. "ಸ್ವಾಮೀಜಿಗಳು ಯಾರಿಗೆ, ಯಾವ ಉದ್ದೇಶಕ್ಕೆ, ಎಷ್ಟು ಮೊತ್ತದ ಲಂಚ ನೀಡಿದ್ದಾರೆ ಎಂಬುದರ ವಿವರ ನೀಡಲಿ. ಇದರ ಸಂಪೂರ್ಣ ತನಿಖೆ ನಡೆಸಲಾಗುತ್ತದೆ" ಎಂದರು.
ಸಾವಿರ ಮಠ, ಪೀಠ ಮಾಡಿಕೊಳ್ಳಲಿ ನಾವೇನೂ ವಿಚಲಿತರಾಗಲ್ಲ; ಜಯಮೃತ್ಯುಂಜಯ ಸ್ವಾಮೀಜಿ
"ದಿಂಗಾಲೇಶ್ವರರು ಪರಮ ಪೂಜ್ಯರು, ಮಹಾತ್ಮರು, ತಪಸ್ವಿಗಳು. ಮಠಾಧೀಶರು ಹೇಳಿಕೆ ನೀಡಿದರೆ ಸಾಕಾಗುವುದಿಲ್ಲ" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
'ಬಿಬಿಎಂಪಿಯಲ್ಲಿ 50 ಪರ್ಸೆಂಟ್ ಕಮೀಷನ್, 6 ಗುತ್ತಿಗೆದಾರರು ಆತ್ಮಹತ್ಯೆ: ತನಿಖೆ ಮಾಡಿದರೆ ದಾಖಲೆ ನೀಡುತ್ತೇವೆ'
ಬಾಲೇಹೊಸೂರಿನ ದಿಂಗಾಲೇಶ್ವರರು ಶ್ರೀಗಳು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ ಪ್ರತಿಪಕ್ಷಗಳು ಸಹ ಸ್ವಾಮೀಜಿಗಳ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ.
40 ಪರ್ಸೆಂಟ್ ಕಮೀಷನ್ ದಂಧೆ: ಈ ಪ್ರಶ್ನೆಗಳಿಗೆ ಉತ್ತರಿಸುವಿರಾ ಮಿನಿಸ್ಟರ್ ಈಶ್ವರಪ್ಪನವರೇ?
ಸೋಮವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ ಎಂದು ಖಾಲಿ ಬುಟ್ಟಿಯ ಮುಂದೆ ನಿಂತು ಪುಂಗಿ ಊದಬೇಡಿ, ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿ ಎಂದು ಸವಾಲು ಹಾಕಿದ್ದರು.
Recommended Video
ಬುಟ್ಟಿಯ
ಒಳಗಿರುವುದು
ನಾಗರ
ಹಾವೋ,
ಹಾವಿನಪುರದ
ಹಾವೋ
ನೋಡಿಯೇ
ಬಿಡೋಣ.
ಧರ್ಮ
ರಕ್ಷಕರು
ಎಂದು
ತಮ್ಮನ್ನು
ಕರೆದುಕೊಳ್ಳುವ
ಬಿಜೆಪಿಯವರು
ಮಠ,
ಮಂದಿರಗಳ
ಅನುದಾನವನ್ನೂ
ಬಿಡದೆ
30
ಪರ್ಸೆಂಟ್
ಕಮಿಷನ್
ತಿಂದು
ತೇಗುತ್ತಿರುವುದು
ನಾಚಿಕೆಗೇಡು.
10
ಪರ್ಸೆಂಟ್
ಡಿಸ್ಕೌಂಟ್
ಯಾಕೆ?
ಅದನ್ನು
ತಿಂದು
ಬಿಡಿ.
ದೇವರಿಂದಲೂ
ಕಮಿಷನ್
ಕೇಳುವ
ನಿಮ್ಮದು
ಯಾವ
ರೀತಿಯ
ಧರ್ಮ
ರಕ್ಷಣೆ?
ಎಂದು
ಪ್ರಶ್ನಿಸಿದ್ದರು.