ಕಾಮೆಡ್-ಕೆ ಕಾಲೇಜುಗಳು ಮೀಸಲಾತಿ ನೀಡಬೇಕು
ಬೆಳಗಾವಿ, ಜುಲೈ 10 : ಹೈದರಾಬಾದ್-ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಾಗಿಟ್ಟಿರುವ ಶೇ 8ರಷ್ಟು ಮೀಸಲಾತಿಯನ್ನು ಕಾಮೆಡ್-ಕೆ ಶಿಕ್ಷಣ ಸಂಸ್ಥೆಗಳು ಪಾಲಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಗುರುವಾರದ
ಕಲಾಪದಲ್ಲಿ
ಉತ್ತರ
ಕರ್ನಾಟಕದ
ಅಭಿವೃದ್ಧಿ
ಕುರಿತಂತೆ
ನಡೆದ
ವಿಶೇಷ
ಚರ್ಚೆಯ
ಸಂದರ್ಭದಲ್ಲಿ
ಪ್ರತಿಪಕ್ಷ
ನಾಯಕ
ಜಗದೀಶ್
ಶೆಟ್ಟರ್
ಅವರ
ಪ್ರಶ್ನೆಗೆ
ಉತ್ತರ
ನೀಡಿದ
ಸಚಿವರು,
ಹೈದರಾಬಾದ್-ಕರ್ನಾಟಕ
ಪ್ರದೇಶದ
ವಿದ್ಯಾರ್ಥಿಗಳಿಗೆ
ಶೇ
8ರಷ್ಟು
ಮೀಸಲಾತಿ
ನಿಗದಿಪಡಿಸಲಾಗಿದೆ
ಎಂದು
ಹೇಳಿದರು.
[ಗುರುವಾರದ
ಕಲಾಪದ
ಮುಖ್ಯಾಂಶಗಳು]
ಸಂವಿಧಾನದ ಪರಿಚ್ಛೇಧ 371 ಜೆ ಅನ್ವಯ ಹೈದರಾಬಾದ್-ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿಪಡಿಸಿದ ಮೀಸಲಾತಿಯನ್ನು ಕಾಮೆಡ್-ಕೆ ಶಿಕ್ಷಣ ಸಂಸ್ಥೆಗಳು ಪಾಲಿಸಬೇಕು ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು. [ಉಲ್ಟಾ ಹೊಡೆದ ಶಾಸಕ ನಡಹಳ್ಳಿ]
ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ)ಸರ್ಕಾರಿ ಕೋಟಾದ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶೇಕಡಾ 8 ರಷ್ಟು ಸೀಟುಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ ಎಂದರು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕಾಮೆಡ್-ಕೆ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿವೆ. [ಗುರುವಾರ ನಡೆದ ಚರ್ಚೆಯ ವಿವರಗಳು]
ಆದರೆ, ಈ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶದನ್ವಯ ಶೇಕಡಾ 8ರಷ್ಟು ಸೀಟುಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲೇಬೇಕು. ಇದರಿಂದ ಆ ಸಂಸ್ಥೆಗಳು ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.