ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಕಂಟ್ರೋಲ್ ತಪ್ಪಿದೆ: ಸಿಎಂ ಯಡಿಯೂರಪ್ಪ
ಬೆಂಗಳೂರು, ಜು. 09: ಕೊರೊನಾ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗಿದೆಯಾ? ವಿಧಾನಸೌಧದಲ್ಲಿ ಸಂಪುಟ ಸಭೆಗೂ ಮುನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೇಳಿಕೆ ಕೊಟ್ಟಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ಸ್ವಲ್ಪ ಕಂಟ್ರೋಲ್ ತಪ್ಪಿದೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ ಅಲ್ಲಿ ಏನೇನು ಬೇಕೋ ಅದನ್ನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಪೊಲೀಸರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಾಳೆ ಸುದ್ದಿಗೋಷ್ಟಿ ಕರೆದಿದ್ದೇನೆ, ಸುದೀರ್ಘವಾಗಿ ಎಲ್ಲಾ ಮಾತನಾಡುತ್ತೇನೆ ಎಂದು ಸಿಎಂ ಹೇಳಿಕೆ ಕೊಟ್ಟಿದ್ದಾರೆ.
ಕೇಂದ್ರ ತಂಡ ಕೆಲ ಸಲಹೆಗಳನ್ನು ನೀಡಿದೆ. ಹೆಚ್ಚುವರಿಯಾಗಿ ಆ್ಯಂಬುಲೆನ್ಸ್ ಖರೀದಿ ಮಾಡಲು ನಿರ್ಧರಿಸಲಾಗಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗುತ್ತದೆ. ಇಂದು ಸಂಜೆ ಕೋವಿಡ್ ಸೆಂಟರ್ಗೆ ಭೇಟಿ ನೀಡುತ್ತಿದ್ದೇನೆ. 10 ಸಾವಿರ ಬೆಡ್ ಇರುವ ಸ್ಥಳಕ್ಕೆ ಹೋಗಿ ಏನೇನು ಸವಲತ್ತು ಇದೆ ಅನ್ನೋದನ್ನ ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ.
ಕೊರೊನಾವೈರಸ್: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
400 ಆ್ಯಂಬುಲೆನ್ಸ್ ಜೊತೆಗೆ ಮತ್ತೆ 200 ಆ್ಯಂಬುಲೆನ್ಸ್ ಖರೀದಿಸುತ್ತೇವೆ. ಕೆಲವು ಜಿಲ್ಲೆಗಳಲ್ಲಿ ಸ್ವಲ್ಪ ಕಂಟ್ರೋಲ್ ತಪ್ಪಿದೆ. ಅಲ್ಲಿ ಏನೇನು ಬೇಕೋ ಅದನ್ನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ತಾರೆ, ಪೊಲೀಸರು ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ ಸಿಎಂ ಯಡಿಯೂರಪ್ಪ.
ಬೆಂಗಳೂರು
ಕೋವಿಡ್
ಉಸ್ತುವಾರಿ
ಸಚಿವ
ಆರ್.
ಅಶೋಕ್
ಹೇಳಿಕೆ:
ಬೆಂಗಳೂರಿನ
ಜನಪ್ರತಿನಿಧಿಗಳ
ಸಭೆ
ನಡೆಸಿದ್ದೇವೆ.
ಬಿಬಿಎಂಪಿ
ಸದಸ್ಯರು,
ಎಲ್ಲ
ಚುನಾಯಿತ
ಜನ
ಪ್ರತಿನಿಧಿಗಳ
ಸಭೆ
ಮಾಡಿದ್ದೇವೆ.
ಇನ್ನಷ್ಟು
ಹೆಚ್ಚು
ಪರಿಣಾಮಕಾರಿಯಾಗಿ
ಚುನಾಯಿತ
ಜನಪ್ರತಿನಿಧಿಗಳು
ಕೋವಿಡ್
ನಿಯಂತ್ರಣದಲ್ಲಿ
ಭಾಗಿಯಾಗಬೇಕು.
ನಿಯಮ
ಉಲ್ಲಂಘನೆ
ಮಾಡುವ
ಆಸ್ಪತ್ರೆಗಳ
ವಿರುದ್ದ
ಕ್ರಿಮಿನಲ್
ಮೊಕದ್ದಮೆಗಳನ್ನು
ದಾಖಲಿಸುತ್ತೇವೆ
ಎಂದು
ಅಶೋಕ್
ಎಚ್ಚರಿಕೆ
ಕೊಟ್ಟಿದ್ದಾರೆ.
ಸರ್ಕಾರದಲ್ಲಿ ಯಾವುದೇ ವಿಪಕ್ಷಗಳ ಹೇಳುತ್ತಿರುವಂತಹ ಹಗರಣ ನಡೆದಿಲ್ಲ. ಸಿದ್ದರಾಮಯ್ಯ ಸುಮ್ಮನೆ ಹೇಳಿಕೆ ಕೊಡುತ್ತಿದ್ದಾರೆಯೇ ಹೊರತು ಯಾವುದೇ ದಾಖಲೆ ಒದಗಿಸುತ್ತಿಲ್ಲ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಈಶ್ವರ್ ಖಂಡ್ರೆ ಅವರು ಯಾವುದಾದರೂ ದಾಖಲೆ ಇದ್ದರೆ ಕೊಡಲಿ. ಸಿದ್ದರಾಮಯ್ಯ ಯಾರ ಹೆಸರು ಹೇಳಿದರೋ ಅಂತವರೇ ಸಮಜಾಯಿಷಿ ಕೊಟ್ಡಿದ್ದಾರೆ. ನನ್ನ ಬಳಿ ಯಾವುದೇ ಪೆನ್ ಡ್ರೈವ್ ಇಲ್ಲ ಅಂತ ಸ್ಪಷ್ಡನೆ ಕೊಟ್ಡಿದ್ದಾರೆ. ಸರ್ಕಾರಕ್ಕೆ ದಾಖಲೆ ಒದಗಿಸಿದರೆ ಸರ್ಕಾರ ಉತ್ತರ ಕೊಡುವುದಕ್ಕೆ ಸಿದ್ದವಿದೆ ಎಂದು ಆರ್. ಅಶೋಕ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.