ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಂಡೀಗಢ ಪ್ರವಾಸ
ಬೆಂಗಳೂರು, ಜೂನ್ 28: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ (ಜೂ.27) ರಾತ್ರಿ ಚಂಡೀಗಢಕ್ಕೆ ತೆರಳಿದ್ದಾರೆ.
ಜೂನ್ 28 ಹಾಗೂ 29 ರಂದು ನಡೆಯಲಿರುವ 47ನೇ ಜಿ.ಎಸ್. ಟಿ. ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಜಿಎಸ್ ಟಿ ಕುರಿತು ಸಮಗ್ರ ಚರ್ಚೆ ನಡೆಯಲಿದೆ.
ಜಿ ಎಸ್ ಟಿ ತೆರಿಗೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಗ್ರೂಪ್ ಆಫ್ ಮಿನಿಸ್ಟರ್ ಸಭೆ ಈಗಾಗಲೇ ೩ ಬಾರಿ ನಡೆದಿದೆ. ಈ ಕುರಿತು ಮಧ್ಯಂತರ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ. ಎರಡು ದಿನಗಳ ಸಭೆಯ ನಂತರ ಜೂನ್ 30 ರಂದು ಸಿಎಂ ಬೊಮ್ಮಾಯಿ ಅವರು ನಗರಕ್ಕೆ ಹಿಂತಿರುಗಲಿದ್ದಾರೆ.
ಆರು
ತಿಂಗಳುಗಳ
ಬಳಿಕ
ಸಭೆ:
ಸುಮಾರು
ಆರು
ತಿಂಗಳುಗಳ
ಬಳಿಕ
ಈ
ವಾರದಲ್ಲಿ
ಚಂಡೀಗಢದಲ್ಲಿ
ಜಿಎಸ್ಟಿ
ಕೌನ್ಸಿಲ್
ಸಭೆ
ನಡೆಯಲಿದೆ.
ಈ
ಸಭೆಯ
ಬಳಿಕ
ಹಲವಾರು
ವಸ್ತುಗಳ
ಜಿಎಸ್ಟಿ
ಹೆಚ್ಚಳ
ಮಾಡುವ
ಸಾಧ್ಯತೆ
ಇದೆ.
ಹಾಗೆಯೇ
ಸುಮಾರು
215
ವಸ್ತುಗಳ
ಮೇಲಿನ
ಜಿಎಸ್ಟಿಯಲ್ಲಿ
ಯಥಾಸ್ಥಿತಿ
ಕಾಯ್ದುಕೊಳ್ಳಲು
ಸಮಿತಿ
ಶಿಫಾರಸ್ಸು
ಮಾಡಿದೆ.
ಈ 47ನೇ ಜಿಎಸ್ಟಿ ಸಭೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಲಿದೆ. ಎಲ್ಲಾ ರಾಜ್ಯಗಳ ಕೇಂದ್ರಾಡಳಿತ ಪ್ರದೇಶಗಳು ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜಿಎಸ್ಟಿ ಸಭೆಯು ಜೂನ್ 28-29ರಂದು ನಡೆಯಲಿದೆ.
ಸಾರ್ವಕಾಲಿಕ
ದಾಖಲೆ
ಬರೆದ
ಜಿಎಸ್ಟಿ:
ಜಿಎಸ್ಟಿಗಳ
ಬಗ್ಗೆ
ಚರ್ಚೆ
ಮಾತ್ರವಲ್ಲದೇ
ಈ
ಸಭೆಯಲ್ಲಿ
ವಿರೋಧ
ಪಕ್ಷಗಳು
ಆಡಳಿತದಲ್ಲಿರುವ
ರಾಜ್ಯದಿಂದ
ಜಿಎಸ್ಟಿ
ಪರಿಹಾರದ
ಆಗ್ರಹ
ಕೇಳಿಬರಬಹುದು.
ಇನ್ನು
ಕೃತಕ
ಕಾಲಿನ
ಮೇಲೆ
ಶೇಕಡ
ಐದರಷ್ಟು
ಜಿಎಸ್ಟಿ
ಹೇರುವ
ಬಗ್ಗೆ
ಚರ್ಚೆ
ನಡೆಯಬಹುದು.
ಬೆನ್ನು
ಮೂಳೆ,
ಇತರೆ
ಮೂಳೆಗಳ
ಜೋಡಿಸುವಿಕೆ
ಮೇಲೆಯೂ
ಶೇಕಡ
ಐದು
ಜಿಎಸ್ಟಿ
ಹೇರಿಕೆಯ
ಬಗ್ಗೆ
ಚರ್ಚೆ
ನಡೆಯಲಿದೆ.
Recommended Video